<p><strong>ಸದ್ದಿಲ್ಲದೆ ರಾಜ್ಯಕ್ಕೆ ಬಂದ ಸೀಸರಹಿತ ಪೆಟ್ರೋಲ್</strong></p><p><strong>ಬೆಂಗಳೂರು, ಸೆ. 8–</strong> ಪೆಟ್ರೋಲ್ ಕುರಿತು ಏನೇ ಸಂಭವಿಸಿದರೂ ದೊಡ್ಡ ಸುದ್ದಿಯಾಗುವ ಈ ದಿನಗಳಲ್ಲಿ, ಸೀಸರಹಿತ ಪೆಟ್ರೋಲ್ ಮಾರಾಟ ವ್ಯವಸ್ಥೆ ಹೆಚ್ಚು ಸದ್ದುಗದ್ದಲ ಇಲ್ಲದೆ ರಾಜ್ಯದ ರಾಜಧಾನಿಯಲ್ಲಿ ಜಾರಿಗೆ ಬಂದಿದೆ; ಜತೆಗೆ ಕೆಲವು ಆರಂಭಿಕ ಸಮಸ್ಯೆಗಳನ್ನೂ ತನ್ನೊಡನೆ ಹೊತ್ತು ತಂದಿದೆ.</p><p>ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ಆರಂಭವಾಗಿರುವ ಸೀಸರಹಿತ ಪೆಟ್ರೋಲ್ ಮಾರಾಟ ವ್ಯವಸ್ಥೆ ಹಂತಹಂತವಾಗಿ ಇಡೀ ರಾಜ್ಯದಲ್ಲಿ ಜಾರಿಯಾಗಲಿದೆ.</p><p><strong>ಬರುವಾ ವರ್ಗಾವಣೆ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ</strong></p><p><strong>ನವದೆಹಲಿ, ಸೆ. 8 (ಪಿಟಿಐ):</strong> ಜಾರಿ ನಿರ್ದೇಶನಾಲಯದ ನಿರ್ದೇಶಕ ಎಂ.ಕೆ.ಬೆಜ್ಬರುವಾ ಅವರ ವರ್ಗಾವಣೆಯನ್ನು ಸಮರ್ಥಿಸಿ ನೀಡಿದ ಪ್ರಮಾಣಪತ್ರ, ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ.</p><p>ಸೂಕ್ಷ್ಮ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಆಗಾಗ್ಗೆ ವರ್ಗಾವಣೆ ಮಾಡುವ ಕುರಿತ ತನ್ನ ತೀರ್ಪನ್ನು ‘ಸಂಪೂರ್ಣವಾಗಿ ತಿರುಚಲಾಗಿದೆ’ ಎಂದು ಕೋರ್ಟ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸದ್ದಿಲ್ಲದೆ ರಾಜ್ಯಕ್ಕೆ ಬಂದ ಸೀಸರಹಿತ ಪೆಟ್ರೋಲ್</strong></p><p><strong>ಬೆಂಗಳೂರು, ಸೆ. 8–</strong> ಪೆಟ್ರೋಲ್ ಕುರಿತು ಏನೇ ಸಂಭವಿಸಿದರೂ ದೊಡ್ಡ ಸುದ್ದಿಯಾಗುವ ಈ ದಿನಗಳಲ್ಲಿ, ಸೀಸರಹಿತ ಪೆಟ್ರೋಲ್ ಮಾರಾಟ ವ್ಯವಸ್ಥೆ ಹೆಚ್ಚು ಸದ್ದುಗದ್ದಲ ಇಲ್ಲದೆ ರಾಜ್ಯದ ರಾಜಧಾನಿಯಲ್ಲಿ ಜಾರಿಗೆ ಬಂದಿದೆ; ಜತೆಗೆ ಕೆಲವು ಆರಂಭಿಕ ಸಮಸ್ಯೆಗಳನ್ನೂ ತನ್ನೊಡನೆ ಹೊತ್ತು ತಂದಿದೆ.</p><p>ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ಆರಂಭವಾಗಿರುವ ಸೀಸರಹಿತ ಪೆಟ್ರೋಲ್ ಮಾರಾಟ ವ್ಯವಸ್ಥೆ ಹಂತಹಂತವಾಗಿ ಇಡೀ ರಾಜ್ಯದಲ್ಲಿ ಜಾರಿಯಾಗಲಿದೆ.</p><p><strong>ಬರುವಾ ವರ್ಗಾವಣೆ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ</strong></p><p><strong>ನವದೆಹಲಿ, ಸೆ. 8 (ಪಿಟಿಐ):</strong> ಜಾರಿ ನಿರ್ದೇಶನಾಲಯದ ನಿರ್ದೇಶಕ ಎಂ.ಕೆ.ಬೆಜ್ಬರುವಾ ಅವರ ವರ್ಗಾವಣೆಯನ್ನು ಸಮರ್ಥಿಸಿ ನೀಡಿದ ಪ್ರಮಾಣಪತ್ರ, ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ.</p><p>ಸೂಕ್ಷ್ಮ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಆಗಾಗ್ಗೆ ವರ್ಗಾವಣೆ ಮಾಡುವ ಕುರಿತ ತನ್ನ ತೀರ್ಪನ್ನು ‘ಸಂಪೂರ್ಣವಾಗಿ ತಿರುಚಲಾಗಿದೆ’ ಎಂದು ಕೋರ್ಟ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>