<p><strong>ನ್ಯಾಯಾಂಗದ ಅತಿಕ್ರಮಣಕ್ಕೆ ಕಳವಳ</strong></p>.<p><strong>ನವದೆಹಲಿ, ಅ. 12 (ಯುಎನ್ಐ, ಪಿಟಿಐ)–</strong> ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗದ ಹಕ್ಕುಗಳನ್ನು ಅತಿಕ್ರಮಿಸುತ್ತಿರುವ ಕುರಿತು ಅಧಿಕಾರಿಗಳು, ಸಂಸತ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕರ್ತವ್ಯದಲ್ಲಿನ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ.</p>.<p>ವಿಚಾರಸಂಕಿರಣದಲ್ಲಿ ಮಂಡಿಸಲಾದ ಅಭಿಪ್ರಾಯಗಳ ಕುರಿತ ಸಮಗ್ರ ಚಿಂತನೆ ಪ್ರತಿ ಫಲಿಸಿದ ಲೋಕಸಭಾ ಅಧ್ಯಕ್ಷ ಪಿ.ಎ. ಸಂಗ್ಮಾ ಅವರು ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗವು ಕಾರ್ಯಾಂಗದ ಕೆಲಸಗಳನ್ನು ವಹಿಸಿಕೊಂಡಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.</p>.<p><strong>ಕಾಂಗ್ರೆಸ್– ಸಂಯುಕ್ತ ರಂಗಕ್ಕೆ ಕಾನ್ಷಿರಾಂ ಅಂತಿಮ ಗಡುವು</strong></p>.<p><strong>ನವದೆಹಲಿ, ಅ. 12 (ಪಿಟಿಐ)– </strong>ಮಾಯಾವತಿ ಮುಖ್ಯಮಂತ್ರಿಯಾಗಲು ಸಂಯುಕ್ತರಂಗವು ಭಾನುವಾರದೊಳಗೆ ಬೇಷರತ್ ಬೆಂಬಲ ಪ್ರಕಟಿಸಬೇಕು. ರಂಗವು ಇದಕ್ಕೆ ಒಪ್ಪದಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್ ಹಿಂತೆಗೆದುಕೊಳ್ಳಬೇಕು ಎಂದು ಬಿಎಸ್ಪಿ ನಾಯಕ ಕಾನ್ಷಿರಾಂ ಅವರು ಗಡುವು ನೀಡುವುದರೊಂದಿಗೆ ಉತ್ತರಪ್ರದೇಶದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಇನ್ನಷ್ಟು ಗೊಂದಲಕ್ಕೀಡಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯಾಯಾಂಗದ ಅತಿಕ್ರಮಣಕ್ಕೆ ಕಳವಳ</strong></p>.<p><strong>ನವದೆಹಲಿ, ಅ. 12 (ಯುಎನ್ಐ, ಪಿಟಿಐ)–</strong> ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗದ ಹಕ್ಕುಗಳನ್ನು ಅತಿಕ್ರಮಿಸುತ್ತಿರುವ ಕುರಿತು ಅಧಿಕಾರಿಗಳು, ಸಂಸತ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕರ್ತವ್ಯದಲ್ಲಿನ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ.</p>.<p>ವಿಚಾರಸಂಕಿರಣದಲ್ಲಿ ಮಂಡಿಸಲಾದ ಅಭಿಪ್ರಾಯಗಳ ಕುರಿತ ಸಮಗ್ರ ಚಿಂತನೆ ಪ್ರತಿ ಫಲಿಸಿದ ಲೋಕಸಭಾ ಅಧ್ಯಕ್ಷ ಪಿ.ಎ. ಸಂಗ್ಮಾ ಅವರು ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗವು ಕಾರ್ಯಾಂಗದ ಕೆಲಸಗಳನ್ನು ವಹಿಸಿಕೊಂಡಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.</p>.<p><strong>ಕಾಂಗ್ರೆಸ್– ಸಂಯುಕ್ತ ರಂಗಕ್ಕೆ ಕಾನ್ಷಿರಾಂ ಅಂತಿಮ ಗಡುವು</strong></p>.<p><strong>ನವದೆಹಲಿ, ಅ. 12 (ಪಿಟಿಐ)– </strong>ಮಾಯಾವತಿ ಮುಖ್ಯಮಂತ್ರಿಯಾಗಲು ಸಂಯುಕ್ತರಂಗವು ಭಾನುವಾರದೊಳಗೆ ಬೇಷರತ್ ಬೆಂಬಲ ಪ್ರಕಟಿಸಬೇಕು. ರಂಗವು ಇದಕ್ಕೆ ಒಪ್ಪದಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್ ಹಿಂತೆಗೆದುಕೊಳ್ಳಬೇಕು ಎಂದು ಬಿಎಸ್ಪಿ ನಾಯಕ ಕಾನ್ಷಿರಾಂ ಅವರು ಗಡುವು ನೀಡುವುದರೊಂದಿಗೆ ಉತ್ತರಪ್ರದೇಶದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಇನ್ನಷ್ಟು ಗೊಂದಲಕ್ಕೀಡಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>