ಮಂಗಳೂರು, ಮೇ 13– ‘ದಕ್ಷಿಣ ಕನ್ನಡಕ್ಕೆ ಬೃಹತ್ ಕೈಗಾರಿಕೆಗಳು ಬರುವುದಕ್ಕೆ ಅಡ್ಡಿಪಡಿಸಬೇಡಿ, ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳು ಅನಿವಾರ್ಯ’ ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಪರಿಸರವಾದಿಗಳಿಗೆ ಇಂದು ವಿನಂತಿ ಮಾಡುವುದರೊಂದಿಗೆ ಬೃಹತ್ ಕೈಗಾರಿಕೆಗಳ ಸ್ಥಾಪನೆ ವಿಚಾರದಲ್ಲಿ ಸರ್ಕಾರಕ್ಕೆ ಇರುವ ಬದ್ಧತೆಯನ್ನು ಪುನರುಚ್ಚರಿಸಿದರು.