<p><strong>ರಾಷ್ಟ್ರಹಿತಕ್ಕಾಗಿ ಅಣ್ವಸ್ತ್ರ ನೀತಿಯಲ್ಲಿ ಕಠಿಣ ನಿರ್ಧಾರ: ಪ್ರಧಾನಿ ಘೋಷಣೆ</strong></p>.<p>ನ್ಯೂಯಾರ್ಕ್, ಸೆಪ್ಟೆಂಬರ್ 9 (ಪಿಟಿಐ)– ಭಾರತದ ಹಿತಾಸಕ್ತಿಗೆ ಅವಶ್ಯಕವೆನಿಸಿದರೆ ತಮ್ಮ ಸರ್ಕಾರ ಅಣ್ವಸ್ತ್ರ ಮತ್ತು ವಿದೇಶಿ ನೀತಿಗಳಿಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಪ್ರಧಾನಿ ವಾಜಪೇಯಿ ಸ್ಪಷ್ಟವಾಗಿ ನುಡಿದರು.</p>.<p>ದೇಶದ ಭದ್ರತೆ ದೃಷ್ಟಿಯಿಂದ 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಪ್ರಶ್ನೆಗಳು ಎದ್ದವು; ಆದರೆ ಈಗ ಇಡೀ ಜಗತ್ತು ನಿಜಾಂಶವನ್ನು ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದರು.</p>.<p>ಪ್ರಧಾನಿ ವಾಜಪೇಯಿ ಅವರು, ತಮ್ಮ ಗೌರವಾರ್ಥ ಭಾರತದ ರಾಯಭಾರಿ ನರೇಶ್ ಚಂದ್ರ ಶುಕ್ರವಾರ ರಾತ್ರಿ ಇಲ್ಲಿ ಏರ್ಪಡಿಸಿದ್ದ ಸತ್ಕಾರಕೂಟದಲ್ಲಿ ಇಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.</p>.<p><strong>ಹಿಂಸಾಚಾರ: ಪಶ್ಚಿಮ ಬಂಗಾಳಕ್ಕೆ ಎಚ್ಚರಿಕೆ</strong></p>.<p>ನವದೆಹಲಿ, ಸೆಪ್ಟೆಂಬರ್ 9– ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಇದೇ ರೀತಿಯಲ್ಲಿ ಮುಂದುವರಿದರೆ ಕಠಿಣ ಕ್ರಮ ಅನಿವಾರ್ಯವಾಗಬಹುದು ಎಂದು ಕೇಂದ್ರ ಸರ್ಕಾರ, ಅಲ್ಲಿನ ರಾಜ್ಯ ಸರ್ಕಾರವನ್ನು ಎಚ್ಚರಿಸಿದೆ.</p>.<p>ಪಶ್ಚಿಮ ಬಂಗಾಳದ ಕೆಲವು ಗಲಭೆಪೀಡಿತ ಪ್ರದೇಶಗಳ ಪ್ರತ್ಯಕ್ಷದರ್ಶನ ಮಾಡಿ ಹಿಂದಿರುಗಿದ ಸಚಿವ ಜಾರ್ಜ್ ಫರ್ನಾಂಡಿಸ್, ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರೊಡನೆ ಸಮಾಲೋಚನೆ ನಡೆಸಿದ ಕೆಲವೇ ಹೊತ್ತಿನಲ್ಲಿಯೇ ಗೃಹ ಖಾತೆ ಎರಡು ಪುಟಗಳ ಎಚ್ಚರಿಕೆಯ ಪತ್ರವನ್ನು ಅಲ್ಲಿನ ಸರ್ಕಾರಕ್ಕೆ ಕಳುಹಿಸಿತು.</p>.<p><strong>ಕೆರೆಯಲ್ಲಿ ಮುಳುಗಿ ಮೂವರು ಸಾವು</strong></p>.<p>ಶ್ರೀನಿವಾಸಪುರ, ಸೆಪ್ಟೆಂಬರ್ 9– ಮೂವರು ಶಾಲಾ ಬಾಲಕಿಯರು ಕೆರೆಯಲ್ಲಿ ಮುಳುಗಿ ಸತ್ತಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಮುತ್ತಕ ಗ್ರಾಮದಲ್ಲಿ ನಡೆದಿದೆ.</p>.<p>ಸತ್ತವರನ್ನು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ರೇಣುಕಾ (14), ಲಾವಣ್ಯ (14) ಹಾಗೂ ರಾಧಿಕ (14) ಎಂದು ಗುರುತಿಸಲಾಗಿದೆ.</p>.<p>ನತದೃಷ್ಟ ಬಾಲಕಿಯರು ಏಳನೇ ತರಗತಿಯ ಅಂಕಪಟ್ಟಿ ತರುವ ಸಲುವಾಗಿ ಈ ಹಿಂದೆ ತಾವು ವ್ಯಾಸಂಗ ಮಾಡಿದ ಮರಿಯಮ್ಮಪೇಟೆ ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಷ್ಟ್ರಹಿತಕ್ಕಾಗಿ ಅಣ್ವಸ್ತ್ರ ನೀತಿಯಲ್ಲಿ ಕಠಿಣ ನಿರ್ಧಾರ: ಪ್ರಧಾನಿ ಘೋಷಣೆ</strong></p>.<p>ನ್ಯೂಯಾರ್ಕ್, ಸೆಪ್ಟೆಂಬರ್ 9 (ಪಿಟಿಐ)– ಭಾರತದ ಹಿತಾಸಕ್ತಿಗೆ ಅವಶ್ಯಕವೆನಿಸಿದರೆ ತಮ್ಮ ಸರ್ಕಾರ ಅಣ್ವಸ್ತ್ರ ಮತ್ತು ವಿದೇಶಿ ನೀತಿಗಳಿಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಪ್ರಧಾನಿ ವಾಜಪೇಯಿ ಸ್ಪಷ್ಟವಾಗಿ ನುಡಿದರು.</p>.<p>ದೇಶದ ಭದ್ರತೆ ದೃಷ್ಟಿಯಿಂದ 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಪ್ರಶ್ನೆಗಳು ಎದ್ದವು; ಆದರೆ ಈಗ ಇಡೀ ಜಗತ್ತು ನಿಜಾಂಶವನ್ನು ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದರು.</p>.<p>ಪ್ರಧಾನಿ ವಾಜಪೇಯಿ ಅವರು, ತಮ್ಮ ಗೌರವಾರ್ಥ ಭಾರತದ ರಾಯಭಾರಿ ನರೇಶ್ ಚಂದ್ರ ಶುಕ್ರವಾರ ರಾತ್ರಿ ಇಲ್ಲಿ ಏರ್ಪಡಿಸಿದ್ದ ಸತ್ಕಾರಕೂಟದಲ್ಲಿ ಇಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.</p>.<p><strong>ಹಿಂಸಾಚಾರ: ಪಶ್ಚಿಮ ಬಂಗಾಳಕ್ಕೆ ಎಚ್ಚರಿಕೆ</strong></p>.<p>ನವದೆಹಲಿ, ಸೆಪ್ಟೆಂಬರ್ 9– ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಇದೇ ರೀತಿಯಲ್ಲಿ ಮುಂದುವರಿದರೆ ಕಠಿಣ ಕ್ರಮ ಅನಿವಾರ್ಯವಾಗಬಹುದು ಎಂದು ಕೇಂದ್ರ ಸರ್ಕಾರ, ಅಲ್ಲಿನ ರಾಜ್ಯ ಸರ್ಕಾರವನ್ನು ಎಚ್ಚರಿಸಿದೆ.</p>.<p>ಪಶ್ಚಿಮ ಬಂಗಾಳದ ಕೆಲವು ಗಲಭೆಪೀಡಿತ ಪ್ರದೇಶಗಳ ಪ್ರತ್ಯಕ್ಷದರ್ಶನ ಮಾಡಿ ಹಿಂದಿರುಗಿದ ಸಚಿವ ಜಾರ್ಜ್ ಫರ್ನಾಂಡಿಸ್, ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರೊಡನೆ ಸಮಾಲೋಚನೆ ನಡೆಸಿದ ಕೆಲವೇ ಹೊತ್ತಿನಲ್ಲಿಯೇ ಗೃಹ ಖಾತೆ ಎರಡು ಪುಟಗಳ ಎಚ್ಚರಿಕೆಯ ಪತ್ರವನ್ನು ಅಲ್ಲಿನ ಸರ್ಕಾರಕ್ಕೆ ಕಳುಹಿಸಿತು.</p>.<p><strong>ಕೆರೆಯಲ್ಲಿ ಮುಳುಗಿ ಮೂವರು ಸಾವು</strong></p>.<p>ಶ್ರೀನಿವಾಸಪುರ, ಸೆಪ್ಟೆಂಬರ್ 9– ಮೂವರು ಶಾಲಾ ಬಾಲಕಿಯರು ಕೆರೆಯಲ್ಲಿ ಮುಳುಗಿ ಸತ್ತಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಮುತ್ತಕ ಗ್ರಾಮದಲ್ಲಿ ನಡೆದಿದೆ.</p>.<p>ಸತ್ತವರನ್ನು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ರೇಣುಕಾ (14), ಲಾವಣ್ಯ (14) ಹಾಗೂ ರಾಧಿಕ (14) ಎಂದು ಗುರುತಿಸಲಾಗಿದೆ.</p>.<p>ನತದೃಷ್ಟ ಬಾಲಕಿಯರು ಏಳನೇ ತರಗತಿಯ ಅಂಕಪಟ್ಟಿ ತರುವ ಸಲುವಾಗಿ ಈ ಹಿಂದೆ ತಾವು ವ್ಯಾಸಂಗ ಮಾಡಿದ ಮರಿಯಮ್ಮಪೇಟೆ ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>