<p><strong>ನಾಲ್ಕು ಜಿಲ್ಲೆಗಳಲ್ಲಿ ವ್ಯಾಪಕ ಹಾನಿ: 19ಕ್ಕೂ ಹೆಚ್ಚು ಮಂದಿಯ ಸಾವು</strong></p>.<p>ಬೆಂಗಳೂರು, ಅ. 15– ವಿಜಾಪುರ, ಕಲ್ಬುರ್ಗಿ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆ ಕಳೆದ ಎರಡು ದಿನಗಳಲ್ಲಿ 19ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.</p>.<p>ಅನೇಕ ಕಡೆಗಳಲ್ಲಿ ಮನೆಗಳು ಕುಸಿದಿವೆ. ಬೆಟ್ಟದ ಕಲ್ಲುಗಳು ಜರಿದುಬಿದ್ದು ಸಕಲೇಶಪುರದ ಬಳಿ ರಾಷ್ಟ್ರೀಯ ಹೆದ್ದಾರಿಯ ಸಂಚಾರವೂ ಅಸ್ತವ್ಯಸ್ತವಾಗಿದೆ.</p>.<p>ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏರುತ್ತಿದೆ. ಬೀದರ್ ಜಿಲ್ಲೆಯ ಮಾಂಜ್ರಾ ನದಿಯಲ್ಲಿ ಮತ್ತೆ ಪ್ರವಾಹ ಕಾಣಿಸಿಕೊಂಡಿದೆ.</p>.<p>ಕಲ್ಬುರ್ಗಿ ಜಿಲ್ಲೆಯಾದ್ಯಂತ ಮಳೆ ಸತತವಾಗಿ ಮೂರನೆಯ ದಿನಕ್ಕೆ ಮುಂದುವರಿದಿದ್ದು, ಜನರನ್ನು ರಕ್ಷಿಸಲು ಹೆಲಿಕಾಪ್ಟರ್ ಒದಗಿಸುವಂತೆ ಜಿಲ್ಲಾಧಿಕಾರಿ ಸರ್ಕಾರವನ್ನು ಕೋರಿದ್ದಾರೆ.</p>.<p><strong>ಶಾಸಕರನ್ನು ಸೆಳೆಯಲು ದಳದ ಉಭಯ ಬಣಗಳ ಪೈಪೋಟಿ</strong></p>.<p>ಬೆಂಗಳೂರು, ಅ. 15– ರಾಜ್ಯದಲ್ಲಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ನಾಯಕತ್ವ ಬದಲಾವಣೆ ಆಗಬೇಕೆಂದು ಭಿನ್ನರು, ಆಗಬಾರದೆಂದು ನಿಷ್ಠರು ಹೀಗೆ ಆಡಳಿತಾರೂಢ ಜನತಾದಳದ ಎರಡೂ ಬಣಗಳು ತಮ್ಮತ್ತ ಶಾಸಕರ ಮನವೊಲಿಸಲು ತೀವ್ರ ಪೈಪೋಟಿ ನಡೆಸಿವೆ.</p>.<p>ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿರುವ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ <br>ಅವರ ಗುಂಪಿನೊಂದಿಗೆ ಗುರುತಿಸಿ ಕೊಂಡಿರುವ ದಳದ ಶಾಸಕರನ್ನು ಸಂಪರ್ಕಿಸಿ ಅವರ ಮನವೊಲಿಸಿರುವುದಾಗಿ ಜೆ.ಎಚ್.ಪಟೇಲ್ ನಿಷ್ಠರ ಗುಂಪಿನ ವಕ್ತಾರರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಲ್ಕು ಜಿಲ್ಲೆಗಳಲ್ಲಿ ವ್ಯಾಪಕ ಹಾನಿ: 19ಕ್ಕೂ ಹೆಚ್ಚು ಮಂದಿಯ ಸಾವು</strong></p>.<p>ಬೆಂಗಳೂರು, ಅ. 15– ವಿಜಾಪುರ, ಕಲ್ಬುರ್ಗಿ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆ ಕಳೆದ ಎರಡು ದಿನಗಳಲ್ಲಿ 19ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.</p>.<p>ಅನೇಕ ಕಡೆಗಳಲ್ಲಿ ಮನೆಗಳು ಕುಸಿದಿವೆ. ಬೆಟ್ಟದ ಕಲ್ಲುಗಳು ಜರಿದುಬಿದ್ದು ಸಕಲೇಶಪುರದ ಬಳಿ ರಾಷ್ಟ್ರೀಯ ಹೆದ್ದಾರಿಯ ಸಂಚಾರವೂ ಅಸ್ತವ್ಯಸ್ತವಾಗಿದೆ.</p>.<p>ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏರುತ್ತಿದೆ. ಬೀದರ್ ಜಿಲ್ಲೆಯ ಮಾಂಜ್ರಾ ನದಿಯಲ್ಲಿ ಮತ್ತೆ ಪ್ರವಾಹ ಕಾಣಿಸಿಕೊಂಡಿದೆ.</p>.<p>ಕಲ್ಬುರ್ಗಿ ಜಿಲ್ಲೆಯಾದ್ಯಂತ ಮಳೆ ಸತತವಾಗಿ ಮೂರನೆಯ ದಿನಕ್ಕೆ ಮುಂದುವರಿದಿದ್ದು, ಜನರನ್ನು ರಕ್ಷಿಸಲು ಹೆಲಿಕಾಪ್ಟರ್ ಒದಗಿಸುವಂತೆ ಜಿಲ್ಲಾಧಿಕಾರಿ ಸರ್ಕಾರವನ್ನು ಕೋರಿದ್ದಾರೆ.</p>.<p><strong>ಶಾಸಕರನ್ನು ಸೆಳೆಯಲು ದಳದ ಉಭಯ ಬಣಗಳ ಪೈಪೋಟಿ</strong></p>.<p>ಬೆಂಗಳೂರು, ಅ. 15– ರಾಜ್ಯದಲ್ಲಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ನಾಯಕತ್ವ ಬದಲಾವಣೆ ಆಗಬೇಕೆಂದು ಭಿನ್ನರು, ಆಗಬಾರದೆಂದು ನಿಷ್ಠರು ಹೀಗೆ ಆಡಳಿತಾರೂಢ ಜನತಾದಳದ ಎರಡೂ ಬಣಗಳು ತಮ್ಮತ್ತ ಶಾಸಕರ ಮನವೊಲಿಸಲು ತೀವ್ರ ಪೈಪೋಟಿ ನಡೆಸಿವೆ.</p>.<p>ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿರುವ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ <br>ಅವರ ಗುಂಪಿನೊಂದಿಗೆ ಗುರುತಿಸಿ ಕೊಂಡಿರುವ ದಳದ ಶಾಸಕರನ್ನು ಸಂಪರ್ಕಿಸಿ ಅವರ ಮನವೊಲಿಸಿರುವುದಾಗಿ ಜೆ.ಎಚ್.ಪಟೇಲ್ ನಿಷ್ಠರ ಗುಂಪಿನ ವಕ್ತಾರರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>