<p><strong>ದೇವೇಗೌಡ–ಪಟೇಲ್ ಬಣ ಸಜ್ಜು</strong></p><p>ಬೆಂಗಳೂರು, ಅ. 20– ರಾಜ್ಯ ಜನತಾದಳದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಬೆಂಬಲಿಗರ ಗುಂಪುಗಳು ಬಲಾಬಲ ಪ್ರದರ್ಶನಕ್ಕೆ ಸಜ್ಜಾಗುತ್ತಿವೆ. </p><p>ಕಳೆದ ಎರಡು ದಿನಗಳಲ್ಲಿ ದಳದ ಎರಡೂ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಪಕ್ಷದ ಶಾಸಕರ ಮನವೊಲಿಸಿ ತಮ್ಮತ್ತ ಸೆಳೆದುಕೊಳ್ಳುವ ಕಾರ್ಯವನ್ನು ಎರಡೂ ಗುಂಪಿನವರು<br>ಮುಂದುವರಿಸಿದ್ದಾರೆ. </p><p><strong>ಚದುರಂಗರ ಅಂತ್ಯಕ್ರಿಯೆ</strong></p><p>ಮೈಸೂರು, ಅ. 20– ಸೋಮವಾರ ಸಂಜೆ ಇಲ್ಲಿ ನಿಧನರಾದ ಖ್ಯಾತ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಚದುರಂಗ (84) ಅವರ ಅಂತ್ಯಸಂಸ್ಕಾರವನ್ನು ಚಾಮುಂಡಿ ಬೆಟ್ಟದ ತಪ್ಪಲಿನ ವಿದ್ಯುತ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿಸಲಾಯಿತು. </p><p><strong>ಸತ್ಯಕಾಮ ಇನ್ನಿಲ್ಲ</strong></p><p>ಬೆಂಗಳೂರು, ಅ. 20– ಮಂತ್ರ ತಂತ್ರಗಳನ್ನೆಲ್ಲಾ ವಸ್ತುವನ್ನಾಗಿಸಿಕೊಂಡು ವಿನೂತನ ಶೈಲಿಯ ಕಥೆ ಮತ್ತು ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಧಾರೆ ಎರೆದಿದ್ದ ಸ್ವಾತಂತ್ರ್ಯ ಹೋರಾಟಗಾರ ಸತ್ಯಕಾಮ (ಅನಂತ ಕೃಷ್ಣ ಶಹಾಪೂರ) ಅವರು ಇಂದು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವೇಗೌಡ–ಪಟೇಲ್ ಬಣ ಸಜ್ಜು</strong></p><p>ಬೆಂಗಳೂರು, ಅ. 20– ರಾಜ್ಯ ಜನತಾದಳದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಬೆಂಬಲಿಗರ ಗುಂಪುಗಳು ಬಲಾಬಲ ಪ್ರದರ್ಶನಕ್ಕೆ ಸಜ್ಜಾಗುತ್ತಿವೆ. </p><p>ಕಳೆದ ಎರಡು ದಿನಗಳಲ್ಲಿ ದಳದ ಎರಡೂ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಪಕ್ಷದ ಶಾಸಕರ ಮನವೊಲಿಸಿ ತಮ್ಮತ್ತ ಸೆಳೆದುಕೊಳ್ಳುವ ಕಾರ್ಯವನ್ನು ಎರಡೂ ಗುಂಪಿನವರು<br>ಮುಂದುವರಿಸಿದ್ದಾರೆ. </p><p><strong>ಚದುರಂಗರ ಅಂತ್ಯಕ್ರಿಯೆ</strong></p><p>ಮೈಸೂರು, ಅ. 20– ಸೋಮವಾರ ಸಂಜೆ ಇಲ್ಲಿ ನಿಧನರಾದ ಖ್ಯಾತ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಚದುರಂಗ (84) ಅವರ ಅಂತ್ಯಸಂಸ್ಕಾರವನ್ನು ಚಾಮುಂಡಿ ಬೆಟ್ಟದ ತಪ್ಪಲಿನ ವಿದ್ಯುತ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿಸಲಾಯಿತು. </p><p><strong>ಸತ್ಯಕಾಮ ಇನ್ನಿಲ್ಲ</strong></p><p>ಬೆಂಗಳೂರು, ಅ. 20– ಮಂತ್ರ ತಂತ್ರಗಳನ್ನೆಲ್ಲಾ ವಸ್ತುವನ್ನಾಗಿಸಿಕೊಂಡು ವಿನೂತನ ಶೈಲಿಯ ಕಥೆ ಮತ್ತು ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಧಾರೆ ಎರೆದಿದ್ದ ಸ್ವಾತಂತ್ರ್ಯ ಹೋರಾಟಗಾರ ಸತ್ಯಕಾಮ (ಅನಂತ ಕೃಷ್ಣ ಶಹಾಪೂರ) ಅವರು ಇಂದು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>