ನವದೆಹಲಿ, ಏ. 19– ಲೋಕಸಭೆಯು ಬುಧವಾರ ಬಜೆಟ್ಗೆ ಸಂಬಂಧಿಸಿದ ಹಣಕಾಸು ಮಸೂದೆಗಳನ್ನು ಅಂಗೀಕರಿಸಿದ ಬಳಿಕ, ನೂತನ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗುವುದು ಖಚಿತವಾಗಿದೆ.
ಬಜೆಟ್ಗೆ ಸಂಬಂಧಿಸಿದ ವಿಧಿವಿಧಾನ ಗಳೆಲ್ಲವೂ ಮುಗಿದ ಬಳಿಕ ರಾಷ್ಟ್ರಪತಿ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸರ್ಕಾರ ರಚನೆಗೆ ಅಧಿಕೃತ ಆಮಂತ್ರಣ ನೀಡುವ ಸಾಧ್ಯತೆಯಿರುವುದಾಗಿ ಗೊತ್ತಾಗಿದೆ.
ಮಂಗಳಾ ಎಕ್ಸ್ಪ್ರೆಸ್ ಹಳಿ ತಪ್ಪಿ 25 ಮಂದಿಗೆ ಗಾಯ
ಮಂಗಳೂರು, ಏ. 19– ಮಂಜೇಶ್ವರದ ಬಳಿಯ ಪೊಸ್ಸೊಟ್ಟುವಿನಲ್ಲಿ ಭಾನುವಾರ ರಾತ್ರಿ 11.35ಕ್ಕೆ ಮಂಗಳಾ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ್ದರಿಂದ, ಆರು ಬೋಗಿಗಳು ಕೆಳಕ್ಕುರುಳಿ 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.