<h2>ಜಯಾ ನಿರ್ಧಾರದಿಂದ ವಾಜಪೇಯಿ ಸರ್ಕಾರ ಬಿಕ್ಕಟ್ಟಿನಲ್ಲಿ: ಎಐಎಡಿಎಂಕೆ ಸಚಿವರು ಸಂಪುಟದಿಂದ ಹೊರಕ್ಕೆ</h2>.<p><strong>ಚೆನ್ನೈ, ಏ. 5 (ಪಿಟಿಐ)–</strong> ತಮ್ಮ ಪಕ್ಷದ ಇಬ್ಬರು ಸಚಿವರನ್ನು ಕೇಂದ್ರದ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಿಂದ ಹಿಂದಕ್ಕೆ ಕರೆಸಿಕೊಳ್ಳಲು ತೀರ್ಮಾನಿಸುವ ಮೂಲಕ ಎಐಎಡಿಎಂಕೆ ಪಕ್ಷ ಸರ್ಕಾರದ ಜತೆಗಿನ ಸಂಬಂಧ ತೊರೆದು, ಕೇಂದ್ರದಲ್ಲಿ ಪರ್ಯಾಯ ಸರ್ಕಾರ ರಚನೆಗೆ ಪ್ರಯತ್ನ ನಡೆಸುವ ತೀರ್ಮಾನವನ್ನು ಪ್ರಕಟಿಸಿದೆ.</p>.<p>ಎಐಎಡಿಎಂಕೆಯ ಮೂರು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸಚಿವ ಸಂಪುಟ ತಿರಸ್ಕರಿಸಿದ್ದರ ಹಿನ್ನೆಲೆಯಲ್ಲಿ ಸಂಪುಟದಿಂದ ತನ್ನ ಇಬ್ಬರು ಸಚಿವರನ್ನು ವಾಪಸು ಕರೆಸಿಕೊಳ್ಳಲು ಪಕ್ಷದ ನಾಯಕಿ ಜಯಲಲಿತಾ ಅವರು ನಿರ್ಧರಿಸಿದರು.</p>.<h2>ಪ್ರತ್ಯೇಕ ರಾಜ್ಯ ಬೇಡಿಕೆ ಮಾತೃದ್ರೋಹ: ಪಟೇಲ್</h2>.<p><strong>ಚಿಕ್ಕಮಗಳೂರು, ಏ. 5–</strong> ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆಯನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ‘ರಾಜ್ಯ ಒಡೆಯೋದೂ ಇಲ್ಲ. ಒಡೆಯಲು ಬಿಡೋದು ಇಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>ಇಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುವುದು ಮಾತೃದ್ರೋಹ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಜಯಾ ನಿರ್ಧಾರದಿಂದ ವಾಜಪೇಯಿ ಸರ್ಕಾರ ಬಿಕ್ಕಟ್ಟಿನಲ್ಲಿ: ಎಐಎಡಿಎಂಕೆ ಸಚಿವರು ಸಂಪುಟದಿಂದ ಹೊರಕ್ಕೆ</h2>.<p><strong>ಚೆನ್ನೈ, ಏ. 5 (ಪಿಟಿಐ)–</strong> ತಮ್ಮ ಪಕ್ಷದ ಇಬ್ಬರು ಸಚಿವರನ್ನು ಕೇಂದ್ರದ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಿಂದ ಹಿಂದಕ್ಕೆ ಕರೆಸಿಕೊಳ್ಳಲು ತೀರ್ಮಾನಿಸುವ ಮೂಲಕ ಎಐಎಡಿಎಂಕೆ ಪಕ್ಷ ಸರ್ಕಾರದ ಜತೆಗಿನ ಸಂಬಂಧ ತೊರೆದು, ಕೇಂದ್ರದಲ್ಲಿ ಪರ್ಯಾಯ ಸರ್ಕಾರ ರಚನೆಗೆ ಪ್ರಯತ್ನ ನಡೆಸುವ ತೀರ್ಮಾನವನ್ನು ಪ್ರಕಟಿಸಿದೆ.</p>.<p>ಎಐಎಡಿಎಂಕೆಯ ಮೂರು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸಚಿವ ಸಂಪುಟ ತಿರಸ್ಕರಿಸಿದ್ದರ ಹಿನ್ನೆಲೆಯಲ್ಲಿ ಸಂಪುಟದಿಂದ ತನ್ನ ಇಬ್ಬರು ಸಚಿವರನ್ನು ವಾಪಸು ಕರೆಸಿಕೊಳ್ಳಲು ಪಕ್ಷದ ನಾಯಕಿ ಜಯಲಲಿತಾ ಅವರು ನಿರ್ಧರಿಸಿದರು.</p>.<h2>ಪ್ರತ್ಯೇಕ ರಾಜ್ಯ ಬೇಡಿಕೆ ಮಾತೃದ್ರೋಹ: ಪಟೇಲ್</h2>.<p><strong>ಚಿಕ್ಕಮಗಳೂರು, ಏ. 5–</strong> ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆಯನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ‘ರಾಜ್ಯ ಒಡೆಯೋದೂ ಇಲ್ಲ. ಒಡೆಯಲು ಬಿಡೋದು ಇಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>ಇಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುವುದು ಮಾತೃದ್ರೋಹ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>