<p><strong>ಕಡ್ಡಾಯ ಗುರುತು ಚೀಟಿ ಕೈಬಿಟ್ಟು ಚುನಾವಣೆ</strong></p>.<p><strong>ನವದೆಹಲಿ, ಮಾರ್ಚ್ 21–</strong> ಈ ಬಾರಿ ಲೋಕಸಭೆಯ ಚುನಾವಣೆಗೂ ಚುನಾವಣಾ ಆಯೋಗ ಕಡ್ಡಾಯ ಗುರುತಿನ ಚೀಟಿಯನ್ನು ಕೈಬಿಟ್ಟಿದೆ.</p>.<p>ಈ ವಿಷಯದಲ್ಲಿ ಆಯೋಗದ ಕಡ್ಡಾಯ ನೀತಿಯನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್ ತಳ್ಳಿಹಾಕಿದ್ದು ಈಗಿನ ನಿರ್ಧಾರಕ್ಕೆ ನಿಜವಾದ ಕಾರಣವಾಗಿದೆಯಾದರೂ, ಹಲವು ರಾಜ್ಯಗಳು ಫೋಟೊ ಇರುವ ಮತದಾನದ ಗುರುತಿನ ಚೀಟಿಯ ಕಾರ್ಯವನ್ನು ಇನ್ನೂ ಪೂರೈಸಿಲ್ಲವಾದ್ದರಿಂದ ಈ ವರ್ಷವೂ ವಿನಾಯಿತಿ ನೀಡಿದೆ.</p>.<p>ಮತದಾರರಿಗೆ ಫೋಟೊ ಇರುವ ಗುರುತಿನ ಚೀಟಿಯನ್ನು ವಿತರಿಸಬೇಕೆಂದು ಚುನಾವಣೆ ಆಯೋಗ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ. ಅದರಂತೆ ಈ ವಿಷಯದಲ್ಲಿ ಪ್ರತೀ ವಾರವೂ ಪ್ರಗತಿಯ ಮೇಲುಸ್ತುವಾರಿ ನೋಡುತ್ತಿದ್ದರೂ ಹಲವು ರಾಜ್ಯಗಳಲ್ಲಿನ ಈ ಕಾರ್ಯ ಇನ್ನೂ ಮುಕ್ತಾಯಗೊಂಡಿಲ್ಲ ಎಂದು ಆಯೋಗ ಹೇಳಿದೆ.</p>.<p><strong>ಪಿಎಸ್ಎಲ್ವಿ– ಡಿ3 ಯಶಸ್ವಿ ಉಡಾವಣೆ</strong></p>.<p><strong>ಶ್ರೀಹರಿಕೋಟ, ಮಾರ್ಚ್ 21–</strong> ಸಂಪೂರ್ಣ ಸ್ವದೇಶಿ ನಿರ್ಮಿತ ಉಪಗ್ರಹವಾಹಕ ‘ಪಿಎಸ್ಎಲ್ವಿ– ಡಿ3’ ಇಂದು ಬೆಳಿಗ್ಗೆ ‘ಐಆರ್ಎಸ್– ಪಿ3’ ಉಪಗ್ರಹವನ್ನು ನಿರಾಳವಾಗಿ ಸೂರ್ಯ ಸಮಾಂತರ ಕಕ್ಷೆಗೆ ಸೇರಿಸುವುದರೊಂದಿಗೆ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮತ್ತೊಂದು<br />ಮಹತ್ತರ ಉಡ್ಡಯನಕ್ಕೆ ಭಾರತ ಸಜ್ಜಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡ್ಡಾಯ ಗುರುತು ಚೀಟಿ ಕೈಬಿಟ್ಟು ಚುನಾವಣೆ</strong></p>.<p><strong>ನವದೆಹಲಿ, ಮಾರ್ಚ್ 21–</strong> ಈ ಬಾರಿ ಲೋಕಸಭೆಯ ಚುನಾವಣೆಗೂ ಚುನಾವಣಾ ಆಯೋಗ ಕಡ್ಡಾಯ ಗುರುತಿನ ಚೀಟಿಯನ್ನು ಕೈಬಿಟ್ಟಿದೆ.</p>.<p>ಈ ವಿಷಯದಲ್ಲಿ ಆಯೋಗದ ಕಡ್ಡಾಯ ನೀತಿಯನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್ ತಳ್ಳಿಹಾಕಿದ್ದು ಈಗಿನ ನಿರ್ಧಾರಕ್ಕೆ ನಿಜವಾದ ಕಾರಣವಾಗಿದೆಯಾದರೂ, ಹಲವು ರಾಜ್ಯಗಳು ಫೋಟೊ ಇರುವ ಮತದಾನದ ಗುರುತಿನ ಚೀಟಿಯ ಕಾರ್ಯವನ್ನು ಇನ್ನೂ ಪೂರೈಸಿಲ್ಲವಾದ್ದರಿಂದ ಈ ವರ್ಷವೂ ವಿನಾಯಿತಿ ನೀಡಿದೆ.</p>.<p>ಮತದಾರರಿಗೆ ಫೋಟೊ ಇರುವ ಗುರುತಿನ ಚೀಟಿಯನ್ನು ವಿತರಿಸಬೇಕೆಂದು ಚುನಾವಣೆ ಆಯೋಗ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ. ಅದರಂತೆ ಈ ವಿಷಯದಲ್ಲಿ ಪ್ರತೀ ವಾರವೂ ಪ್ರಗತಿಯ ಮೇಲುಸ್ತುವಾರಿ ನೋಡುತ್ತಿದ್ದರೂ ಹಲವು ರಾಜ್ಯಗಳಲ್ಲಿನ ಈ ಕಾರ್ಯ ಇನ್ನೂ ಮುಕ್ತಾಯಗೊಂಡಿಲ್ಲ ಎಂದು ಆಯೋಗ ಹೇಳಿದೆ.</p>.<p><strong>ಪಿಎಸ್ಎಲ್ವಿ– ಡಿ3 ಯಶಸ್ವಿ ಉಡಾವಣೆ</strong></p>.<p><strong>ಶ್ರೀಹರಿಕೋಟ, ಮಾರ್ಚ್ 21–</strong> ಸಂಪೂರ್ಣ ಸ್ವದೇಶಿ ನಿರ್ಮಿತ ಉಪಗ್ರಹವಾಹಕ ‘ಪಿಎಸ್ಎಲ್ವಿ– ಡಿ3’ ಇಂದು ಬೆಳಿಗ್ಗೆ ‘ಐಆರ್ಎಸ್– ಪಿ3’ ಉಪಗ್ರಹವನ್ನು ನಿರಾಳವಾಗಿ ಸೂರ್ಯ ಸಮಾಂತರ ಕಕ್ಷೆಗೆ ಸೇರಿಸುವುದರೊಂದಿಗೆ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮತ್ತೊಂದು<br />ಮಹತ್ತರ ಉಡ್ಡಯನಕ್ಕೆ ಭಾರತ ಸಜ್ಜಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>