<p><strong>ಎಂಸಿಎಫ್ ಬಿಕ್ಕಟ್ಟು ಅಂತ್ಯ: 29ರಿಂದ ಉತ್ಪಾದನೆ</strong></p>.<p><strong>ಮಂಗಳೂರು, ಮಾರ್ಚ್ 26– </strong>ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಇಂದು ನಡೆದ ಸಭೆಯಲ್ಲಿ, ಇಲ್ಲಿಯ ಮಂಗಳೂರು ರಸಗೊಬ್ಬರ ಕಾರ್ಖಾನೆಯ ಮುಷ್ಕರನಿರತ ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ಒಪ್ಪಿಕೊಂಡಿದ್ದು, ಆಡಳಿತ ಮಂಡಳಿಯು ಈ ಹಿಂದೆ ವಜಾ ಮಾಡಿದ್ದ ಆರು ಮಂದಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಒಪ್ಪಿಗೆ ನೀಡಿದೆ.</p>.<p>ಕಳೆದ ಮೂರು ತಿಂಗಳಿನಿಂದ ಹಲವು ಸಮಸ್ಯೆಗಳನ್ನು ಎದುರಿಸಿ ರಸಗೊಬ್ಬರ ಉತ್ಪಾದನೆಯನ್ನು ಅನಿವಾರ್ಯವಾಗಿ ನಿಲ್ಲಿಸಿದ್ದ ಕಾರ್ಖಾನೆಯು ಈ ತಿಂಗಳ 29ರಿಂದ ಮತ್ತೆ ಆರಂಭವಾಗಲಿದೆ ಎಂದು ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.</p>.<p><strong>ರಾಜ್ಯ ರೈತ ಸಂಘ ಇಬ್ಭಾಗ ಸಂಭವ</strong></p>.<p><strong>ಬೆಂಗಳೂರು, ಮಾರ್ಚ್ 26– </strong>ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆಗೆ ರಾಜ್ಯ ರೈತ ಸಂಘದ ಕೆಲ ಪ್ರಮುಖರು ಮುಂದಾಗಿದ್ದು, ಇದರಿಂದ ರೈತ ಸಂಘ ಹೋಳಾಗುವ ಸಾಧ್ಯತೆಗಳು ದಟ್ಟವಾಗಿವೆ.</p>.<p><strong>ರೇಖೆಗಳಲ್ಲಿ ಜಗತ್ತು ಕಂಡ ಹೆಬ್ಬಾರ ಇನ್ನಿಲ್ಲ</strong></p>.<p><strong>ಬೆಂಗಳೂರು, ಮಾರ್ಚ್ 26–</strong> ಸರಳ ರೇಖಾ ಚಿತ್ರಗಳಲ್ಲಿ ಬದುಕಿನ ದಟ್ಟ ಚಿತ್ರಣ ನೀಡಿದ, ನಾಡಿನ ಸಮಕಾಲೀನ ಕಲೆಗೆ ರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟ ಅನುಭಾವಿ ಕಲಾಕಾರ ಕಟ್ಟಂಗೇರಿ ಕೃಷ್ಣ ಹೆಬ್ಬಾರರು (85) ಇಂದು ಸಂಜೆ ಮುಂಬೈನ ಅವರ ಮಗಳ ನಿವಾಸದಲ್ಲಿ ಕೊನೆ ಉಸಿರೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಂಸಿಎಫ್ ಬಿಕ್ಕಟ್ಟು ಅಂತ್ಯ: 29ರಿಂದ ಉತ್ಪಾದನೆ</strong></p>.<p><strong>ಮಂಗಳೂರು, ಮಾರ್ಚ್ 26– </strong>ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಇಂದು ನಡೆದ ಸಭೆಯಲ್ಲಿ, ಇಲ್ಲಿಯ ಮಂಗಳೂರು ರಸಗೊಬ್ಬರ ಕಾರ್ಖಾನೆಯ ಮುಷ್ಕರನಿರತ ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ಒಪ್ಪಿಕೊಂಡಿದ್ದು, ಆಡಳಿತ ಮಂಡಳಿಯು ಈ ಹಿಂದೆ ವಜಾ ಮಾಡಿದ್ದ ಆರು ಮಂದಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಒಪ್ಪಿಗೆ ನೀಡಿದೆ.</p>.<p>ಕಳೆದ ಮೂರು ತಿಂಗಳಿನಿಂದ ಹಲವು ಸಮಸ್ಯೆಗಳನ್ನು ಎದುರಿಸಿ ರಸಗೊಬ್ಬರ ಉತ್ಪಾದನೆಯನ್ನು ಅನಿವಾರ್ಯವಾಗಿ ನಿಲ್ಲಿಸಿದ್ದ ಕಾರ್ಖಾನೆಯು ಈ ತಿಂಗಳ 29ರಿಂದ ಮತ್ತೆ ಆರಂಭವಾಗಲಿದೆ ಎಂದು ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.</p>.<p><strong>ರಾಜ್ಯ ರೈತ ಸಂಘ ಇಬ್ಭಾಗ ಸಂಭವ</strong></p>.<p><strong>ಬೆಂಗಳೂರು, ಮಾರ್ಚ್ 26– </strong>ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆಗೆ ರಾಜ್ಯ ರೈತ ಸಂಘದ ಕೆಲ ಪ್ರಮುಖರು ಮುಂದಾಗಿದ್ದು, ಇದರಿಂದ ರೈತ ಸಂಘ ಹೋಳಾಗುವ ಸಾಧ್ಯತೆಗಳು ದಟ್ಟವಾಗಿವೆ.</p>.<p><strong>ರೇಖೆಗಳಲ್ಲಿ ಜಗತ್ತು ಕಂಡ ಹೆಬ್ಬಾರ ಇನ್ನಿಲ್ಲ</strong></p>.<p><strong>ಬೆಂಗಳೂರು, ಮಾರ್ಚ್ 26–</strong> ಸರಳ ರೇಖಾ ಚಿತ್ರಗಳಲ್ಲಿ ಬದುಕಿನ ದಟ್ಟ ಚಿತ್ರಣ ನೀಡಿದ, ನಾಡಿನ ಸಮಕಾಲೀನ ಕಲೆಗೆ ರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟ ಅನುಭಾವಿ ಕಲಾಕಾರ ಕಟ್ಟಂಗೇರಿ ಕೃಷ್ಣ ಹೆಬ್ಬಾರರು (85) ಇಂದು ಸಂಜೆ ಮುಂಬೈನ ಅವರ ಮಗಳ ನಿವಾಸದಲ್ಲಿ ಕೊನೆ ಉಸಿರೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>