<p><strong>ಕ್ಷಿಪಣಿ ನಾಶ ಸಾಮರ್ಥ್ಯದ ‘ಆಕಾಶ್’ ಪ್ರಯೋಗ</strong></p><p>ಚಂಡೀಪುರ (ಒರಿಸ್ಸಾ), ಸೆ. 30 (ಪಿಟಿಐ)– ಭೂಮಿಯಿಂದಲೇ ಶತ್ರು ವಿಮಾನಗಳ ಮೇಲೆ ದಾಳಿ ನಡೆಸಲು ಶಕ್ತವಾದ ‘ಆಕಾಶ್’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಇಂದು ಯಶಸ್ವಿಯಾಗಿ ನಡೆಸಿತು.</p> <p>ಪೈಲಟ್ರಹಿತ ನಿಶಾಂತ್ ಯುದ್ಧ ತರಬೇತಿ ವಿಮಾನವನ್ನು ಹೊಡೆದು ಉರುಳಿಸಿದ ಆಕಾಶ್, ಸುಮಾರು 25 ಕಿ.ಮೀ. ಎತ್ತರದಲ್ಲಿ ಹಾರಾಡುವ ಶತ್ರು ಕ್ಷಿಪಣಿಗಳನ್ನು ಕೂಡ ಹೊಡೆದು ಉರುಳಿಸಲು ತಾನು ಸಮರ್ಥ ಎಂದು ತೋರಿಸಿಕೊಟ್ಟಿತು.</p> <p><strong>ಜಪಾನ್: ಅಣು ಸ್ಥಾವರದಲ್ಲಿ ಅಪಘಾತ</strong></p><p>ಟೋಕಿಯೊ, ಸೆ. 30– ಟೊಕಾಯಿಮುರಾ ಎಂಬಲ್ಲಿ ಪರಮಾಣು ಇಂಧನ ಸಂಸ್ಕರಣ ಸ್ಥಾವರವೊಂದರಲ್ಲಿ ಅಪಘಾತವುಂಟಾಗಿ ಸುರಕ್ಷಾ ಮಟ್ಟಕ್ಕಿಂತ 4,000 ಪಟ್ಟು ವಿಕಿರಣ ಹೊರಹೊಮ್ಮಿದೆ.</p> <p>ಇದು ಜಪಾನ್ನ ಈವರೆಗಿನ ಅತ್ಯಂತ ದುರ್ಭರ ಅಪಘಾತ. ಸ್ಥಾವರಕ್ಕೆಂದು ಯುರೇನಿಯಂ ಇಂಧನವನ್ನು ಸಂಸ್ಕರಿಸುವಲ್ಲಿ ಈ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ವಿಕಿರಣ ಜ್ವಾಲೆಗೆ ಸಿಕ್ಕಿದ 19 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಮೀಪದ 50 ಮನೆಗಳ ತೆರವಿಗೆ ಸೂಚಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ಷಿಪಣಿ ನಾಶ ಸಾಮರ್ಥ್ಯದ ‘ಆಕಾಶ್’ ಪ್ರಯೋಗ</strong></p><p>ಚಂಡೀಪುರ (ಒರಿಸ್ಸಾ), ಸೆ. 30 (ಪಿಟಿಐ)– ಭೂಮಿಯಿಂದಲೇ ಶತ್ರು ವಿಮಾನಗಳ ಮೇಲೆ ದಾಳಿ ನಡೆಸಲು ಶಕ್ತವಾದ ‘ಆಕಾಶ್’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಇಂದು ಯಶಸ್ವಿಯಾಗಿ ನಡೆಸಿತು.</p> <p>ಪೈಲಟ್ರಹಿತ ನಿಶಾಂತ್ ಯುದ್ಧ ತರಬೇತಿ ವಿಮಾನವನ್ನು ಹೊಡೆದು ಉರುಳಿಸಿದ ಆಕಾಶ್, ಸುಮಾರು 25 ಕಿ.ಮೀ. ಎತ್ತರದಲ್ಲಿ ಹಾರಾಡುವ ಶತ್ರು ಕ್ಷಿಪಣಿಗಳನ್ನು ಕೂಡ ಹೊಡೆದು ಉರುಳಿಸಲು ತಾನು ಸಮರ್ಥ ಎಂದು ತೋರಿಸಿಕೊಟ್ಟಿತು.</p> <p><strong>ಜಪಾನ್: ಅಣು ಸ್ಥಾವರದಲ್ಲಿ ಅಪಘಾತ</strong></p><p>ಟೋಕಿಯೊ, ಸೆ. 30– ಟೊಕಾಯಿಮುರಾ ಎಂಬಲ್ಲಿ ಪರಮಾಣು ಇಂಧನ ಸಂಸ್ಕರಣ ಸ್ಥಾವರವೊಂದರಲ್ಲಿ ಅಪಘಾತವುಂಟಾಗಿ ಸುರಕ್ಷಾ ಮಟ್ಟಕ್ಕಿಂತ 4,000 ಪಟ್ಟು ವಿಕಿರಣ ಹೊರಹೊಮ್ಮಿದೆ.</p> <p>ಇದು ಜಪಾನ್ನ ಈವರೆಗಿನ ಅತ್ಯಂತ ದುರ್ಭರ ಅಪಘಾತ. ಸ್ಥಾವರಕ್ಕೆಂದು ಯುರೇನಿಯಂ ಇಂಧನವನ್ನು ಸಂಸ್ಕರಿಸುವಲ್ಲಿ ಈ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ವಿಕಿರಣ ಜ್ವಾಲೆಗೆ ಸಿಕ್ಕಿದ 19 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಮೀಪದ 50 ಮನೆಗಳ ತೆರವಿಗೆ ಸೂಚಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>