<p><strong>ಭಾರತೀಯರು 100 ಕೋಟಿ; ಪ್ರಧಾನಿ ಕಳವಳ</strong></p><p>ನವದೆಹಲಿ, ಮೇ 11– ಭಾರತದ ಜನಸಂಖ್ಯೆಯು ಇಂದು ನೂರು ಕೋಟಿ ದಾಟಿದ ಬಗೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರಾದರೂ, ಜನಸಂಖ್ಯಾ ನಿಯಂತ್ರಣ ಮತ್ತು ಜನರ ಆರೋಗ್ಯ ಹಾಗೂ ಮೂಲ ಸೌಕರ್ಯಗಳ ಬಗೆಗೆ ಹೊಸ ಜನಸಂಖ್ಯಾ ನೀತಿಯೊಂದನ್ನು ಪ್ರಕಟಿಸಿದರು.</p><p>ಯೋಜನಾ ಆಯೋಗವು ಸಿದ್ಧಪಡಿಸಿದ ಜನಸಂಖ್ಯಾ ನೀತಿಯನ್ನು ಆಯೋಗದ ಉಪಾಧ್ಯಕ್ಷ ಕೆ.ಸಿ. ಪಂತ್ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿ, ಪ್ರಸ್ತುತ ವರ್ಷದಲ್ಲಿ ತುರ್ತಾಗಿ ಕೈಗೆತ್ತಿಕೊಳ್ಳಬೇಕಾದ ಕಾರ್ಯಕ್ರಮಗಳ ವಿವರ ನೀಡಿದರು.</p><p>ನೂತನ ಜನಸಂಖ್ಯಾ ನೀತಿಯನ್ನು ಅಕ್ಷರಶಃ ಜಾರಿಗೆ ತಂದದ್ದೇ ಆದರೆ, ಮುಂದಿನ 2010ನೇ ಇಸವಿ ವೇಳೆಗೆ ಒಟ್ಟು ಜನಸಂಖ್ಯೆಯು 110 ಕೋಟಿ ಮಾತ್ರ ಮುಟ್ಟಲು ಸಾಧ್ಯ ಎಂದು ಅಂದಾಜಿಸಲಾಗಿದೆ.</p><p><strong>ಅಮೆರಿಕ ಕಂಪನಿಯ ಬೇವಿನ ಪೇಟೆಂಟ್ ರದ್ದು</strong></p><p>ಬರ್ಲಿನ್, ಮೇ 11 (ಪಿಟಿಐ)– ಅಮೆರಿಕದ ಕೃಷಿ ಇಲಾಖೆ ಮತ್ತು ಡಬ್ಲ್ಯು.ಆರ್. ಗ್ರೇಸ್<br>ರಾಸಾಯನಿಕ ಸಂಸ್ಥೆಗೆ 1995ರಲ್ಲಿ ಜಂಟಿಯಾಗಿ ನೀಡಿದ್ದ ಬೇವಿನ ಮರದ ಎಣ್ಣೆ ತೆಗೆಯುವ ಪೇಟೆಂಟ್ ಅನ್ನು ಯುರೋಪಿನ ಪೇಟೆಂಟ್ ಕಾರ್ಯಾಲಯ ವಾಪಸ್ ಪಡೆದಿದೆ. ಭಾರತದ ಬೇವು ಕೃಷಿಕರಿಗೆ ಇದು ವರದಾನವಾಗಿದೆ ಎಂದು ವರ್ಣಿಸಲಾಗಿದೆ.</p><p>ಈ ಬೇವಿನ ಪೇಟೆಂಟ್ ನೀಡಿಕೆ ವಿರುದ್ಧ ಮೂರು ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಯುರೋಪ್ ಪೇಟೆಂಟ್ ಕಾರ್ಯಾಲಯ ಪುರಸ್ಕರಿಸಿತು. ಬೇವಿನ ಮರದಿಂದ ಎಣ್ಣೆ ತೆಗೆಯುವ ಕಾರ್ಯ 1994ಕ್ಕಿಂತ ಹಿಂದೆ ಭಾರತದಲ್ಲಿ ನಡೆಯುತ್ತಿತ್ತು ಎಂಬ ವಾದವನ್ನು ಎತ್ತಿ ಹಿಡಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತೀಯರು 100 ಕೋಟಿ; ಪ್ರಧಾನಿ ಕಳವಳ</strong></p><p>ನವದೆಹಲಿ, ಮೇ 11– ಭಾರತದ ಜನಸಂಖ್ಯೆಯು ಇಂದು ನೂರು ಕೋಟಿ ದಾಟಿದ ಬಗೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರಾದರೂ, ಜನಸಂಖ್ಯಾ ನಿಯಂತ್ರಣ ಮತ್ತು ಜನರ ಆರೋಗ್ಯ ಹಾಗೂ ಮೂಲ ಸೌಕರ್ಯಗಳ ಬಗೆಗೆ ಹೊಸ ಜನಸಂಖ್ಯಾ ನೀತಿಯೊಂದನ್ನು ಪ್ರಕಟಿಸಿದರು.</p><p>ಯೋಜನಾ ಆಯೋಗವು ಸಿದ್ಧಪಡಿಸಿದ ಜನಸಂಖ್ಯಾ ನೀತಿಯನ್ನು ಆಯೋಗದ ಉಪಾಧ್ಯಕ್ಷ ಕೆ.ಸಿ. ಪಂತ್ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿ, ಪ್ರಸ್ತುತ ವರ್ಷದಲ್ಲಿ ತುರ್ತಾಗಿ ಕೈಗೆತ್ತಿಕೊಳ್ಳಬೇಕಾದ ಕಾರ್ಯಕ್ರಮಗಳ ವಿವರ ನೀಡಿದರು.</p><p>ನೂತನ ಜನಸಂಖ್ಯಾ ನೀತಿಯನ್ನು ಅಕ್ಷರಶಃ ಜಾರಿಗೆ ತಂದದ್ದೇ ಆದರೆ, ಮುಂದಿನ 2010ನೇ ಇಸವಿ ವೇಳೆಗೆ ಒಟ್ಟು ಜನಸಂಖ್ಯೆಯು 110 ಕೋಟಿ ಮಾತ್ರ ಮುಟ್ಟಲು ಸಾಧ್ಯ ಎಂದು ಅಂದಾಜಿಸಲಾಗಿದೆ.</p><p><strong>ಅಮೆರಿಕ ಕಂಪನಿಯ ಬೇವಿನ ಪೇಟೆಂಟ್ ರದ್ದು</strong></p><p>ಬರ್ಲಿನ್, ಮೇ 11 (ಪಿಟಿಐ)– ಅಮೆರಿಕದ ಕೃಷಿ ಇಲಾಖೆ ಮತ್ತು ಡಬ್ಲ್ಯು.ಆರ್. ಗ್ರೇಸ್<br>ರಾಸಾಯನಿಕ ಸಂಸ್ಥೆಗೆ 1995ರಲ್ಲಿ ಜಂಟಿಯಾಗಿ ನೀಡಿದ್ದ ಬೇವಿನ ಮರದ ಎಣ್ಣೆ ತೆಗೆಯುವ ಪೇಟೆಂಟ್ ಅನ್ನು ಯುರೋಪಿನ ಪೇಟೆಂಟ್ ಕಾರ್ಯಾಲಯ ವಾಪಸ್ ಪಡೆದಿದೆ. ಭಾರತದ ಬೇವು ಕೃಷಿಕರಿಗೆ ಇದು ವರದಾನವಾಗಿದೆ ಎಂದು ವರ್ಣಿಸಲಾಗಿದೆ.</p><p>ಈ ಬೇವಿನ ಪೇಟೆಂಟ್ ನೀಡಿಕೆ ವಿರುದ್ಧ ಮೂರು ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಯುರೋಪ್ ಪೇಟೆಂಟ್ ಕಾರ್ಯಾಲಯ ಪುರಸ್ಕರಿಸಿತು. ಬೇವಿನ ಮರದಿಂದ ಎಣ್ಣೆ ತೆಗೆಯುವ ಕಾರ್ಯ 1994ಕ್ಕಿಂತ ಹಿಂದೆ ಭಾರತದಲ್ಲಿ ನಡೆಯುತ್ತಿತ್ತು ಎಂಬ ವಾದವನ್ನು ಎತ್ತಿ ಹಿಡಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>