ಭಂಡಾರಿ ರಾಜೀನಾಮೆ ಸಂಭವ; ಬಿಜೆಪಿಯಲ್ಲಿ ತೀವ್ರ ಬಿಕ್ಕಟ್ಟು
ಪಟ್ನಾ, ಫೆ. 17 (ಪಿಟಿಐ)– ಬಿಹಾರದ ರಾಜ್ಯಪಾಲ ಸುಂದರ್ ಸಿಂಗ್ ಭಂಡಾರಿ ಅವರ ಮುಂದುವರಿಕೆ ಕುರಿತು ತಲೆದೋರಿರುವ ಅನಿಶ್ಚಯತೆ ನಡುವೆಯೇ ಅವರು ರಾಜ್ಯದ ಆಡಳಿತವನ್ನು ಅರ್ಧಕ್ಕೆ ಬಿಟ್ಟು ತಮ್ಮ ಸಾಮಾನು– ಸರಂಜಾಮು ಸಹಿತ ಇಂದು ದೆಹಲಿಗೆ ಪ್ರಯಾಣಿಸಿದರು.
ಭಂಡಾರಿ ಅವರು ಅಧಿಕಾರ ತ್ಯಜಿಸಲು ನಿರ್ಧರಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿದರೆ, ‘ರಾಜ್ಯಪಾಲರನ್ನು ಬದಲಿಸುವ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿ ಅಧ್ಯಕ್ಷ ಕುಶಭಾವು ಠಾಕ್ರೆ ಹೇಳಿದ್ದಾರೆ.