<p><strong>ಕಾವೇರಿ ಜಲ ವಿದ್ಯುತ್ ಯೋಜನೆ ಮೇ 20ರಂದು ಮಹತ್ವದ ಸಭೆ</strong></p><p>ನವದೆಹಲಿ, ಮೇ 8– ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಅಂತರರಾಜ್ಯ ಜಲ ವಿದ್ಯುತ್ ಯೋಜನೆಗಳ ಒಡಂಬಡಿಕೆ ಪತ್ರದ ಅಂತಿಮ ಕರಡನ್ನು ಕರ್ನಾಟಕ ಮತ್ತು ತಮಿಳುನಾಡಿಗೆ ಕಳುಹಿಸ<br>ಲಾಗಿದ್ದು ಈ ತಿಂಗಳ 20ರ ನಂತರ ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಎರಡೂ ರಾಜ್ಯಗಳ ಜತೆ ಮಹತ್ವದ ಸಭೆ ನಡೆಸಲಿದೆ. </p><p>ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಲು ಉದ್ದೇಶಿಸಿರುವ ನಾಲ್ಕು ಜಲ ವಿದ್ಯುತ್ ಯೋಜನೆಗಳ ಫಲಾನುಭವಿ ರಾಜ್ಯಗಳ ಪಟ್ಟಿಯಲ್ಲಿ ಪುದಚೇರಿ ಮತ್ತು ಕೇರಳವನ್ನು ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. </p><p><strong>ದಳ ವಿದ್ಯಮಾನ: ಸಚಿವರಿಂದಲೇ ಅಪಸ್ವರ</strong></p><p>ಬೆಂಗಳೂರು, ಮೇ 8– ಜನತಾದಳದ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೆಗಲ ಮೇಲೆ ಕೈಹಾಕಿ ಉಪಾಹಾರ ಹಾಗೂ ಭೋಜನ<br>ಕೂಟಗಳನ್ನು ನಡೆಸಿ ಪಕ್ಷದಲ್ಲಿ ಒಗ್ಗಟ್ಟು ಮೂಡಿಬಂದಿದೆ ಎಂದು ಹೇಳುತ್ತಿರುವುದಕ್ಕೆ ಪಕ್ಷದ ಹಿರಿಯ ಸಚಿವರಿಂದಲೇ ಅಪಸ್ವರ ವ್ಯಕ್ತವಾಗಿದೆ. </p><p>ಕಳೆದ ಒಂದೂವರೆ ವರ್ಷದಿಂದ ದೇವೇಗೌಡರ ಬೆಂಬಲಿಗರದ್ದು ಒಂದು ಗುಂಪು ಹಾಗೂ ಮುಖ್ಯಮಂತ್ರಿ ಪಟೇಲ್ ಅವರ ಬೆಂಬಲಿಗರದ್ದು ಮತ್ತೊಂದು ಗುಂಪು ಎಂಬುದಾಗಿ ಜನತಾದಳದಲ್ಲಿ ಸ್ಪಷ್ಟವಾಗಿ ಕೆಲಸ ಮಾಡಿದವು. ಆದರೆ ಈಗ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಹತ್ತಿರಕ್ಕೆ ಬಂದಿವೆ ಎಂಬ ಕಾರಣದಿಂದ ಈ ನಾಯಕರು ಹಿಂದಿನ ಕಹಿ ಅನುಭವಗಳನ್ನು ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೆಗಲ ಮೇಲೆ ಕೈ ಹಾಕಿಕೊಂಡು ಭಾಯಿ ಭಾಯಿ ಹೇಳಿದರೆ ಪಕ್ಷದ ಒಗ್ಗಟ್ಟಿಗೆ ಅರ್ಥವಿದೆಯೇ ಎಂಬ ಪ್ರಶ್ನೆ ಕೆಲವು ಹಿರಿಯ ಸಚಿವರನ್ನು ಕಾಡುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ ಜಲ ವಿದ್ಯುತ್ ಯೋಜನೆ ಮೇ 20ರಂದು ಮಹತ್ವದ ಸಭೆ</strong></p><p>ನವದೆಹಲಿ, ಮೇ 8– ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಅಂತರರಾಜ್ಯ ಜಲ ವಿದ್ಯುತ್ ಯೋಜನೆಗಳ ಒಡಂಬಡಿಕೆ ಪತ್ರದ ಅಂತಿಮ ಕರಡನ್ನು ಕರ್ನಾಟಕ ಮತ್ತು ತಮಿಳುನಾಡಿಗೆ ಕಳುಹಿಸ<br>ಲಾಗಿದ್ದು ಈ ತಿಂಗಳ 20ರ ನಂತರ ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಎರಡೂ ರಾಜ್ಯಗಳ ಜತೆ ಮಹತ್ವದ ಸಭೆ ನಡೆಸಲಿದೆ. </p><p>ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಲು ಉದ್ದೇಶಿಸಿರುವ ನಾಲ್ಕು ಜಲ ವಿದ್ಯುತ್ ಯೋಜನೆಗಳ ಫಲಾನುಭವಿ ರಾಜ್ಯಗಳ ಪಟ್ಟಿಯಲ್ಲಿ ಪುದಚೇರಿ ಮತ್ತು ಕೇರಳವನ್ನು ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. </p><p><strong>ದಳ ವಿದ್ಯಮಾನ: ಸಚಿವರಿಂದಲೇ ಅಪಸ್ವರ</strong></p><p>ಬೆಂಗಳೂರು, ಮೇ 8– ಜನತಾದಳದ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೆಗಲ ಮೇಲೆ ಕೈಹಾಕಿ ಉಪಾಹಾರ ಹಾಗೂ ಭೋಜನ<br>ಕೂಟಗಳನ್ನು ನಡೆಸಿ ಪಕ್ಷದಲ್ಲಿ ಒಗ್ಗಟ್ಟು ಮೂಡಿಬಂದಿದೆ ಎಂದು ಹೇಳುತ್ತಿರುವುದಕ್ಕೆ ಪಕ್ಷದ ಹಿರಿಯ ಸಚಿವರಿಂದಲೇ ಅಪಸ್ವರ ವ್ಯಕ್ತವಾಗಿದೆ. </p><p>ಕಳೆದ ಒಂದೂವರೆ ವರ್ಷದಿಂದ ದೇವೇಗೌಡರ ಬೆಂಬಲಿಗರದ್ದು ಒಂದು ಗುಂಪು ಹಾಗೂ ಮುಖ್ಯಮಂತ್ರಿ ಪಟೇಲ್ ಅವರ ಬೆಂಬಲಿಗರದ್ದು ಮತ್ತೊಂದು ಗುಂಪು ಎಂಬುದಾಗಿ ಜನತಾದಳದಲ್ಲಿ ಸ್ಪಷ್ಟವಾಗಿ ಕೆಲಸ ಮಾಡಿದವು. ಆದರೆ ಈಗ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಹತ್ತಿರಕ್ಕೆ ಬಂದಿವೆ ಎಂಬ ಕಾರಣದಿಂದ ಈ ನಾಯಕರು ಹಿಂದಿನ ಕಹಿ ಅನುಭವಗಳನ್ನು ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೆಗಲ ಮೇಲೆ ಕೈ ಹಾಕಿಕೊಂಡು ಭಾಯಿ ಭಾಯಿ ಹೇಳಿದರೆ ಪಕ್ಷದ ಒಗ್ಗಟ್ಟಿಗೆ ಅರ್ಥವಿದೆಯೇ ಎಂಬ ಪ್ರಶ್ನೆ ಕೆಲವು ಹಿರಿಯ ಸಚಿವರನ್ನು ಕಾಡುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>