<p><strong>ಮಕ್ಕಳ ಪ್ರಜ್ಞೆ ತಪ್ಪಿಸಿದ ಮೆಹಂದಿ</strong></p><p>ನಮಕ್ಕಲ್, ಜುಲೈ 13 (ಯುಎನ್ಐ)– ಕುಮಾರಪಾಳ್ಯಂ ಎಂಬಲ್ಲಿ ಶಾಲೆಯ ಮಕ್ಕಳ ಕೈ ಮೇಲೆ ಮೆಹಂದಿಯಲ್ಲಿ ಚಿತ್ತಾರ ಬಿಡಿಸಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.</p><p>ಅವನು ಚಿತ್ರ ಬಿಡಿಸಿದ ನಂತರ ಅದನ್ನು ಮೂಸಿ ನೋಡಲು ಮಕ್ಕಳಿಗೆ ಹೇಳಿದಾಗ, ಅವರಲ್ಲಿ 30 ಮಂದಿ ಪ್ರಜ್ಞೆ ತಪ್ಪಿದರು. ಆಗ ಇತರರು ಕಿರುಚಿಕೊಂಡಾಗ ಅವನು ಅಲ್ಲಿಂದ ಪರಾರಿಯಾದ.</p><p><strong>ಕರಾವಳಿ, ಮಲೆನಾಡಿನಲ್ಲಿ ಮಳೆಯ ರುದ್ರ ನರ್ತನ</strong></p><p>ಬೆಂಗಳೂರು, ಜುಲೈ 13– ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಇಂದೂ ಮುಂದುವರಿದಿದ್ದು, ನದಿಗಳು ತುಂಬಿ ಪ್ರವಾಹ ಉಂಟಾಗಿದೆ. ಕೊಡಗು ಜಿಲ್ಲೆಯ ಹಲವೆಡೆ ಕಾವೇರಿ ಅಪಾಯದ ಮಟ್ಟವನ್ನು ಮೀರಿದ್ದು, ಹತ್ತಾರು ಗ್ರಾಮಗಳು ಜಲಾವೃತವಾಗಿವೆ.</p><p>ಕಡೂರು– ಮಂಗಳೂರು ಹೆದ್ದಾರಿಯ ಚಾರ್ಮಾಡಿ ಘಟ್ಟದಲ್ಲಿ ಇಂದು ಬೆಳಗ್ಗಿನ ಜಾವ ಭಾರೀ ಮಳೆಯಿಂದಾಗಿ ಅನೇಕ ಭಾಗಗಳಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.</p><p>ಗಂಜಿ ಕೇಂದ್ರ: ಕೊಡಗಿನ ಕರಡಿಗೋಡು ಬಳಿ ಕಾವೇರಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಎಂಟು ಮನೆಗಳನ್ನು ತೆರವು ಮಾಡಿಸಿ 35 ಮಂದಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಕ್ಕಳ ಪ್ರಜ್ಞೆ ತಪ್ಪಿಸಿದ ಮೆಹಂದಿ</strong></p><p>ನಮಕ್ಕಲ್, ಜುಲೈ 13 (ಯುಎನ್ಐ)– ಕುಮಾರಪಾಳ್ಯಂ ಎಂಬಲ್ಲಿ ಶಾಲೆಯ ಮಕ್ಕಳ ಕೈ ಮೇಲೆ ಮೆಹಂದಿಯಲ್ಲಿ ಚಿತ್ತಾರ ಬಿಡಿಸಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.</p><p>ಅವನು ಚಿತ್ರ ಬಿಡಿಸಿದ ನಂತರ ಅದನ್ನು ಮೂಸಿ ನೋಡಲು ಮಕ್ಕಳಿಗೆ ಹೇಳಿದಾಗ, ಅವರಲ್ಲಿ 30 ಮಂದಿ ಪ್ರಜ್ಞೆ ತಪ್ಪಿದರು. ಆಗ ಇತರರು ಕಿರುಚಿಕೊಂಡಾಗ ಅವನು ಅಲ್ಲಿಂದ ಪರಾರಿಯಾದ.</p><p><strong>ಕರಾವಳಿ, ಮಲೆನಾಡಿನಲ್ಲಿ ಮಳೆಯ ರುದ್ರ ನರ್ತನ</strong></p><p>ಬೆಂಗಳೂರು, ಜುಲೈ 13– ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಇಂದೂ ಮುಂದುವರಿದಿದ್ದು, ನದಿಗಳು ತುಂಬಿ ಪ್ರವಾಹ ಉಂಟಾಗಿದೆ. ಕೊಡಗು ಜಿಲ್ಲೆಯ ಹಲವೆಡೆ ಕಾವೇರಿ ಅಪಾಯದ ಮಟ್ಟವನ್ನು ಮೀರಿದ್ದು, ಹತ್ತಾರು ಗ್ರಾಮಗಳು ಜಲಾವೃತವಾಗಿವೆ.</p><p>ಕಡೂರು– ಮಂಗಳೂರು ಹೆದ್ದಾರಿಯ ಚಾರ್ಮಾಡಿ ಘಟ್ಟದಲ್ಲಿ ಇಂದು ಬೆಳಗ್ಗಿನ ಜಾವ ಭಾರೀ ಮಳೆಯಿಂದಾಗಿ ಅನೇಕ ಭಾಗಗಳಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.</p><p>ಗಂಜಿ ಕೇಂದ್ರ: ಕೊಡಗಿನ ಕರಡಿಗೋಡು ಬಳಿ ಕಾವೇರಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಎಂಟು ಮನೆಗಳನ್ನು ತೆರವು ಮಾಡಿಸಿ 35 ಮಂದಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>