ನವದೆಹಲಿ, ನ. 26 (ಯುಎನ್ಐ, ಪಿಟಿಐ)– ಡಿಸೆಂಬರ್ 10ರಂದು ನಡೆಯಲಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಚುನಾವಣೆ ಯನ್ನು ಮುಂದೂಡುವಂತೆ ಕೆಲವರು ಒತ್ತಡ ಹೇರುತ್ತಿರುವುದರ ಬೆನ್ನಲ್ಲೇ
ಪಿ.ವಿ.ನರಸಿಂಹ ರಾವ್ ಅವರ ಬೆಂಬಲಿಗರು ಅಂದೇ ಚುನಾವಣೆ ನಡೆಸಲು ಸಜ್ಜಾಗುತ್ತಿದ್ದು ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಹಾಗೂ ರಾವ್ ನಡುವಿನ ಶೀತಲ ಸಮರ ಹೊಸ ತಿರುವು ಪಡೆದುಕೊಂಡಿದೆ.