<p><strong>ರಾಜ್ಯದಲ್ಲಿ ಜನಗಣತಿ ಆರಂಭ</strong></p>.<p>ಬೆಂಗಳೂರು, ಫೆ. 9– ರಾಷ್ಟ್ರೀಯ ಮಹತ್ವವುಳ್ಳ ಜನಗಣತಿ ಕಾರ್ಯವು ರಾಜ್ಯವ್ಯಾಪಿ ಇಂದು ಬೆಳಗ್ಗೆ ಆರಂಭವಾಯಿತು. ಎಲ್ಲ ಜನರ ಸ್ಥಿತಿಗತಿ ಬಗ್ಗೆ ವಿವರಗಳನ್ನು ಸಂಗ್ರಹಿಸುವ ಈ ಗಣತಿಯು ಈ ತಿಂಗಳ 28ರವರೆಗೆ ನಡೆಯಲಿದೆ.</p>.<p>ರಾಜಭವನದಲ್ಲಿ ರಾಜ್ಯಪಾಲರಾದ ವಿ.ಎಸ್. ರಮಾದೇವಿ ಹಾಗೂ ‘ಅನುಗ್ರಹ’ದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ತಮ್ಮ ತಮ್ಮ ಕುಟುಂಬದ ವಿವರಗಳನ್ನು ಉತ್ಸಾಹದಿಂದಲೇ ಗಣತಿ ಸಿಬ್ಬಂದಿಗೆ ತಿಳಿಸಿದರು. ಆ ಮೂಲಕ ಗಣತಿ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.</p>.<p><strong>ಅವಶೇಷಗಳ ಅಡಿಯಿಂದ ಹೊರಬಂದ ರೂ. 20 ಕೋಟಿ</strong></p>.<p>ಬಚಾವ್, ಫೆ. 9– ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಚಾವ್ ಶಾಖೆಯ ಕಟ್ಟಡದ ಅವಶೇಷಗಳಡಿ ಹೂತು ಹೋಗಿದ್ದ 20 ಕೋಟಿ ರೂಪಾಯಿಗಳನ್ನು ಹೊರ ತೆಗೆಯಲು ಸೇನೆ ನಿರಂತರ ಎಂಟು ಗಂಟೆಗಳ ಯಶಸ್ವಿ ಕಾರ್ಯಾಚರಣೆ ನಡೆಸಿತು.</p>.<p>ಸೈನಿಕರು ಭಗ್ನಾವಶೇಷಗಳನ್ನು ತೆರವುಗೊಳಿಸಿದರು. ಗೋದ್ರೆಜ್ ಕಂಪನಿಯ ಬೀಗ ತೆರೆಯುವ ಪರಿಣತರನ್ನು ಕರೆಯಿಸಿ ಭದ್ರತಾ ಕೋಣೆಯ ಬೀಗ ತೆರೆದು ಭಾರಿ ಮೊತ್ತ ಪಡೆಯಲಾಯಿತು. ಕಾರ್ಯಾಚರಣೆಯಲ್ಲಿ ಗ್ರಾಹಕರಿಗೆ ಸೇರಿದ ಮೂರು ಲಾಕರ್ಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದಲ್ಲಿ ಜನಗಣತಿ ಆರಂಭ</strong></p>.<p>ಬೆಂಗಳೂರು, ಫೆ. 9– ರಾಷ್ಟ್ರೀಯ ಮಹತ್ವವುಳ್ಳ ಜನಗಣತಿ ಕಾರ್ಯವು ರಾಜ್ಯವ್ಯಾಪಿ ಇಂದು ಬೆಳಗ್ಗೆ ಆರಂಭವಾಯಿತು. ಎಲ್ಲ ಜನರ ಸ್ಥಿತಿಗತಿ ಬಗ್ಗೆ ವಿವರಗಳನ್ನು ಸಂಗ್ರಹಿಸುವ ಈ ಗಣತಿಯು ಈ ತಿಂಗಳ 28ರವರೆಗೆ ನಡೆಯಲಿದೆ.</p>.<p>ರಾಜಭವನದಲ್ಲಿ ರಾಜ್ಯಪಾಲರಾದ ವಿ.ಎಸ್. ರಮಾದೇವಿ ಹಾಗೂ ‘ಅನುಗ್ರಹ’ದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ತಮ್ಮ ತಮ್ಮ ಕುಟುಂಬದ ವಿವರಗಳನ್ನು ಉತ್ಸಾಹದಿಂದಲೇ ಗಣತಿ ಸಿಬ್ಬಂದಿಗೆ ತಿಳಿಸಿದರು. ಆ ಮೂಲಕ ಗಣತಿ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.</p>.<p><strong>ಅವಶೇಷಗಳ ಅಡಿಯಿಂದ ಹೊರಬಂದ ರೂ. 20 ಕೋಟಿ</strong></p>.<p>ಬಚಾವ್, ಫೆ. 9– ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಚಾವ್ ಶಾಖೆಯ ಕಟ್ಟಡದ ಅವಶೇಷಗಳಡಿ ಹೂತು ಹೋಗಿದ್ದ 20 ಕೋಟಿ ರೂಪಾಯಿಗಳನ್ನು ಹೊರ ತೆಗೆಯಲು ಸೇನೆ ನಿರಂತರ ಎಂಟು ಗಂಟೆಗಳ ಯಶಸ್ವಿ ಕಾರ್ಯಾಚರಣೆ ನಡೆಸಿತು.</p>.<p>ಸೈನಿಕರು ಭಗ್ನಾವಶೇಷಗಳನ್ನು ತೆರವುಗೊಳಿಸಿದರು. ಗೋದ್ರೆಜ್ ಕಂಪನಿಯ ಬೀಗ ತೆರೆಯುವ ಪರಿಣತರನ್ನು ಕರೆಯಿಸಿ ಭದ್ರತಾ ಕೋಣೆಯ ಬೀಗ ತೆರೆದು ಭಾರಿ ಮೊತ್ತ ಪಡೆಯಲಾಯಿತು. ಕಾರ್ಯಾಚರಣೆಯಲ್ಲಿ ಗ್ರಾಹಕರಿಗೆ ಸೇರಿದ ಮೂರು ಲಾಕರ್ಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>