<p>ಬೆಂಗಳೂರು, ಮೇ 23– ರಾಜ್ಯದ ವಿವಿಧ ಸರ್ಕಸ್ ತಂಡಗಳಲ್ಲಿರುವ 25 ಪ್ರಾಣಿಗಳ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ಐದು ಪ್ರಕಾರದ ಸರ್ಕಸ್ ಪ್ರಾಣಿಗಳ ಪ್ರದರ್ಶನ ವನ್ನು ನಿಷೇಧಿಸಿ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ಪ್ರಾಣಿಗಳ ಪುನರ್ವಸತಿಗೆ ಸ್ಪಷ್ಟ ಯೋಜನೆ ಇಲ್ಲದಿರುವುದೇ ಇದಕ್ಕೆ ಕಾರಣ.</p><p>ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಲ್ಲಿಸಿದ ಅರ್ಜಿಯನ್ನು ಎತ್ತಿಹಿಡಿದ ನ್ಯಾಯಾಲಯ, ಕಳೆದ ಡಿಸೆಂಬರ್ನಲ್ಲಿ (1998) ಹುಲಿ, ಸಿಂಹ, ಮಂಗ, ಚಿರತೆ ಮತ್ತು ಕರಡಿಗಳನ್ನು ಸರ್ಕಸ್ನಲ್ಲಿ ಬಳಸುವುದಕ್ಕೆ ನಿಷೇಧ ವಿಧಿಸಿತು.</p><p>ನಾಲ್ಕುನೂರರಷ್ಟಿದ್ದ ಈ ವರ್ಗದ ಪ್ರಾಣಿಗಳು ತಂಡಕ್ಕೆ ಆದಾಯ ತರುವುದನ್ನು ನಿಲ್ಲಿಸಿದ್ದು, ರಾಷ್ಟ್ರದಾದ್ಯಂತ ಇರುವ ಸುಮಾರು 64 ಸರ್ಕಸ್ ತಂಡಗಳಿಗೆ ಇವುಗಳ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.</p><p><strong>ನಂಜನಗೂಡಿನಲ್ಲಿ ಡಕಾಯಿತಿ ರೂ. 3 ಲಕ್ಷ ಲೂಟಿ</strong></p><p>ನಂಜನಗೂಡು, ಮೇ 23– ಪಟ್ಟಣದ ಹೊರ ವಲಯದಲ್ಲಿ ಊಟಿ ರಸ್ತೆಯಲ್ಲಿನ, ನಿರ್ಮಾಣ ಹಂತದಲ್ಲಿರುವ ಶ್ರೀಪತಿ ಬಡಾವಣೆಯ ಮೇಲೆ ದಾಳಿ ನಡೆಸಿದ ನಾಲ್ವರು ಡಕಾಯಿತರ ತಂಡವೊಂದು, ಎರಡು ಮನೆಗಳಿಗೆ ನುಗ್ಗಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದೆ.</p><p>ಜಿಲ್ಲೆಯ ಹುಣಸೂರು ಭಾಗದಲ್ಲಿ ಕೆಲ ದಿನಗಳ ಹಿಂದೆ ನಡೆದ ಡಕಾಯಿತಿ ಮಾದರಿಯಲ್ಲೇ ಲೂಟಿ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು, ಮೇ 23– ರಾಜ್ಯದ ವಿವಿಧ ಸರ್ಕಸ್ ತಂಡಗಳಲ್ಲಿರುವ 25 ಪ್ರಾಣಿಗಳ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ಐದು ಪ್ರಕಾರದ ಸರ್ಕಸ್ ಪ್ರಾಣಿಗಳ ಪ್ರದರ್ಶನ ವನ್ನು ನಿಷೇಧಿಸಿ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ಪ್ರಾಣಿಗಳ ಪುನರ್ವಸತಿಗೆ ಸ್ಪಷ್ಟ ಯೋಜನೆ ಇಲ್ಲದಿರುವುದೇ ಇದಕ್ಕೆ ಕಾರಣ.</p><p>ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಲ್ಲಿಸಿದ ಅರ್ಜಿಯನ್ನು ಎತ್ತಿಹಿಡಿದ ನ್ಯಾಯಾಲಯ, ಕಳೆದ ಡಿಸೆಂಬರ್ನಲ್ಲಿ (1998) ಹುಲಿ, ಸಿಂಹ, ಮಂಗ, ಚಿರತೆ ಮತ್ತು ಕರಡಿಗಳನ್ನು ಸರ್ಕಸ್ನಲ್ಲಿ ಬಳಸುವುದಕ್ಕೆ ನಿಷೇಧ ವಿಧಿಸಿತು.</p><p>ನಾಲ್ಕುನೂರರಷ್ಟಿದ್ದ ಈ ವರ್ಗದ ಪ್ರಾಣಿಗಳು ತಂಡಕ್ಕೆ ಆದಾಯ ತರುವುದನ್ನು ನಿಲ್ಲಿಸಿದ್ದು, ರಾಷ್ಟ್ರದಾದ್ಯಂತ ಇರುವ ಸುಮಾರು 64 ಸರ್ಕಸ್ ತಂಡಗಳಿಗೆ ಇವುಗಳ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.</p><p><strong>ನಂಜನಗೂಡಿನಲ್ಲಿ ಡಕಾಯಿತಿ ರೂ. 3 ಲಕ್ಷ ಲೂಟಿ</strong></p><p>ನಂಜನಗೂಡು, ಮೇ 23– ಪಟ್ಟಣದ ಹೊರ ವಲಯದಲ್ಲಿ ಊಟಿ ರಸ್ತೆಯಲ್ಲಿನ, ನಿರ್ಮಾಣ ಹಂತದಲ್ಲಿರುವ ಶ್ರೀಪತಿ ಬಡಾವಣೆಯ ಮೇಲೆ ದಾಳಿ ನಡೆಸಿದ ನಾಲ್ವರು ಡಕಾಯಿತರ ತಂಡವೊಂದು, ಎರಡು ಮನೆಗಳಿಗೆ ನುಗ್ಗಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದೆ.</p><p>ಜಿಲ್ಲೆಯ ಹುಣಸೂರು ಭಾಗದಲ್ಲಿ ಕೆಲ ದಿನಗಳ ಹಿಂದೆ ನಡೆದ ಡಕಾಯಿತಿ ಮಾದರಿಯಲ್ಲೇ ಲೂಟಿ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>