<p><strong>ಉತ್ತರ ಭಾರತ: ಚಳಿಗೆ 23 ಸಾವು</strong></p><p>ನವದೆಹಲಿ, ಜ. 4 (ಪಿಟಿಐ)– ಚಳಿ ತಡೆಯಲಾಗದೆ ಉತ್ತರ ಪ್ರದೇಶದಲ್ಲಿ 23 ಮಂದಿ ಮೃತಪಟ್ಟಿದ್ದಾರೆ.</p><p>ಬರೇಲಿಯಲ್ಲಿ ಏಳು, ಆಗ್ರಾ ಮತ್ತು ಅಂಬೇಡ್ಕರ್ ನಗರದಲ್ಲಿ ತಲಾ ಐವರು, ಬಲ್ಲಿಯಾದಲ್ಲಿ ಮೂವರು, ಸಿದ್ಧಾರ್ಥನಗರದಲ್ಲಿ ಇಬ್ಬರು ಹಾಗೂ ಮೊರದಾಬಾದ್ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಈ ಪ್ರದೇಶಗಳಲ್ಲಿ ಉಷ್ಣಾಂಶ ಕುಸಿದಿತ್ತು.ಉತ್ತರಪ್ರದೇಶದ ಕೆಲವು ಪಟ್ಟಣಗಳಲ್ಲಿ ದಟ್ಟ ಮಂಜಿನಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಪರಿಸ್ಥಿತಿ ಇನ್ನೂ 2 ದಿನ ಹೀಗೇ ಇರುವ ಸಂಭವವಿದೆ.</p>.<p><strong>ಹಗುರ ಯುದ್ಧ ವಿಮಾನ ಹಾರಾಟ ಯಶಸ್ವಿ ಪ್ರಯೋಗ</strong></p><p>ಬೆಂಗಳೂರು, ಜ. 4– ದೇಶದ ಮೊಟ್ಟಮೊದಲ ಅತ್ಯಾಧುನಿಕ ಮತ್ತು ಶರವೇಗದ ಹಗುರ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಇಂದು ಬೆಳಿಗ್ಗೆ ನಗರದ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ನಡೆಯಿತು. </p><p>ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಸಮ್ಮುಖದಲ್ಲಿ ಈ ಮಹತ್ವದ ಪ್ರಯೋಗಾರ್ಥ ಹಾರಾಟ ನಡೆಯಿತು. 1983ರಲ್ಲಿ ರೂಪುಗೊಂಡ ಎಲ್ಸಿಎ ತಯಾರಿಕೆ ಯೋಜನೆ ಕಾರ್ಯಾರಂಭವಾಗಿದ್ದು, 1993ರಲ್ಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉತ್ತರ ಭಾರತ: ಚಳಿಗೆ 23 ಸಾವು</strong></p><p>ನವದೆಹಲಿ, ಜ. 4 (ಪಿಟಿಐ)– ಚಳಿ ತಡೆಯಲಾಗದೆ ಉತ್ತರ ಪ್ರದೇಶದಲ್ಲಿ 23 ಮಂದಿ ಮೃತಪಟ್ಟಿದ್ದಾರೆ.</p><p>ಬರೇಲಿಯಲ್ಲಿ ಏಳು, ಆಗ್ರಾ ಮತ್ತು ಅಂಬೇಡ್ಕರ್ ನಗರದಲ್ಲಿ ತಲಾ ಐವರು, ಬಲ್ಲಿಯಾದಲ್ಲಿ ಮೂವರು, ಸಿದ್ಧಾರ್ಥನಗರದಲ್ಲಿ ಇಬ್ಬರು ಹಾಗೂ ಮೊರದಾಬಾದ್ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಈ ಪ್ರದೇಶಗಳಲ್ಲಿ ಉಷ್ಣಾಂಶ ಕುಸಿದಿತ್ತು.ಉತ್ತರಪ್ರದೇಶದ ಕೆಲವು ಪಟ್ಟಣಗಳಲ್ಲಿ ದಟ್ಟ ಮಂಜಿನಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಪರಿಸ್ಥಿತಿ ಇನ್ನೂ 2 ದಿನ ಹೀಗೇ ಇರುವ ಸಂಭವವಿದೆ.</p>.<p><strong>ಹಗುರ ಯುದ್ಧ ವಿಮಾನ ಹಾರಾಟ ಯಶಸ್ವಿ ಪ್ರಯೋಗ</strong></p><p>ಬೆಂಗಳೂರು, ಜ. 4– ದೇಶದ ಮೊಟ್ಟಮೊದಲ ಅತ್ಯಾಧುನಿಕ ಮತ್ತು ಶರವೇಗದ ಹಗುರ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಇಂದು ಬೆಳಿಗ್ಗೆ ನಗರದ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ನಡೆಯಿತು. </p><p>ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಸಮ್ಮುಖದಲ್ಲಿ ಈ ಮಹತ್ವದ ಪ್ರಯೋಗಾರ್ಥ ಹಾರಾಟ ನಡೆಯಿತು. 1983ರಲ್ಲಿ ರೂಪುಗೊಂಡ ಎಲ್ಸಿಎ ತಯಾರಿಕೆ ಯೋಜನೆ ಕಾರ್ಯಾರಂಭವಾಗಿದ್ದು, 1993ರಲ್ಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>