ಆಂಧ್ರ ಪ್ರದೇಶದಲ್ಲಾದ ಬೆಳವಣಿಗೆಯಿಂದ ತೆಲುಗು ದೇಶಂ ಇಬ್ಭಾಗವಾಗಿದ್ದರೆ, ಈ ಘಟನೆಯಿಂದ ಜನತಾದಳವು ಆಘಾತಕ್ಕೊಳಗಾಗಿದೆ. ಇತ್ತ ಸಮತಾ ಪಕ್ಷವು ಬಿಜೆಪಿ ಜತೆ ನಂಟು ಬೆಳೆಸಲು ಹೋಗಿ ಬಹುತೇಕ ಮಟ್ಟಿಗೆ ಹೋಳಾಗಿದೆ. ಇನ್ನು ಎಡಪಕ್ಷಗಳು ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎನ್ನುವಂತಿವೆ. ಸಂಸತ್ತಿನ ಪ್ರಮುಖ ಪಕ್ಷಗಳ ಈ ಸ್ಥಿತಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ.