ಪ್ರಧಾನಿ ಎಚ್.ಡಿ. ದೇವೇಗೌಡರು ಕಳೆದ ಹತ್ತರಂದು ದೆಹಲಿಯಲ್ಲಿ ಕರೆದಿದ್ದ ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ ನಂತರ ಮಂಗಳವಾರ ಬೆಂಗಳೂರಿಗೆ ಹಿಂತಿರುಗಿದ ಮುಖ್ಯಮಂತ್ರಿಗಳು ವಿಧಾನಪರಿಷತ್ತಿನಲ್ಲಿ ಇಂದು ಅಡ್ಡಿ, ಆಕ್ಷೇಪ– ವಾಗ್ವಾದ, ಆರೋಪ– ಪ್ರತ್ಯಾರೋಪಗಳ ನಡುವೆಯೇ ವಿವರವಾದ ಹೇಳಿಕೆ ನೀಡಿ ‘ಆಲಮಟ್ಟಿ ಕೆಲಸ ನಿಲ್ಲುವುದಿಲ್ಲ. ಯಾರೂ ಕೆಲಸ ನಿಲ್ಲಿಸಲು ಆಗುವುದಿಲ್ಲ’ ಎಂದು ಘೋಷಿಸಿದರು.