ಬೆಂಗಳೂರು, ಅ. 23– ನೈಜ ವಿಕೇಂದ್ರೀಕರಣ ವ್ಯವಸ್ಥೆಗೆ ಅಡ್ಡಿಯಾಗಿರುವ ವಿವಿಧ ಪ್ರದೇಶಾಭಿವೃದ್ಧಿ ಮಂಡಳಿಗಳನ್ನು 9ನೇ ಪಂಚವಾರ್ಷಿಕ ಯೋಜನಾಭಿವೃದ್ಧಿಯಲ್ಲಿ ಹಂತಹಂತವಾಗಿ ವಿಸರ್ಜಿಸುವಂತೆ ಹಾಗೂ ದುರ್ಬಲಗೊಂಡಿರುವ ಸಹಕಾರಿ ಕ್ಷೇತ್ರದ ಪುನಶ್ಚೇತನಕ್ಕೆ ಅಗತ್ಯವಾಗಿರುವ ಹೊಸ ಕಾಯ್ದೆಯನ್ನು ರಚಿಸುವಂತೆ ರಾಜ್ಯ ಯೋಜನಾ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.