ಬೆಂಗಳೂರು, ಜ. 7– ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಪ್ರತಿಭಟಿಸಿ ಕನ್ನಡ ಸಂಘಟನೆಗಳ ಕೆಲವು ಕಾರ್ಯಕರ್ತರು ಇಂದು ನಗರದಲ್ಲಿ ಬಿಟಿಎಸ್ ಬಸ್ಸೊಂದಕ್ಕೆ ಬೆಂಕಿ ಹಚ್ಚಿ, ಹಲವು ವಾಹನಗಳ ಮೇಲೆ ಕಲ್ಲುಗಳನ್ನು ತೂರಿದರು. ಸೋಮವಾರದ ಬೆಂಗಳೂರು ಬಂದ್ಗೆ ಹಿಂದೆಂದೂ ಇರದಷ್ಟು ವ್ಯಾಪಕ ಬಂದೋಬಸ್ತ್ ಮಾಡುತ್ತಿರುವುದರ ನಡುವೆಯೇ ಈ ಘಟನೆಗಳು ನಡೆದಿವೆ.