<div><p><strong>ಐಆರ್ಎಸ್–1ಸಿ: ಕ್ಯಾಮೆರಾ ಚಾಲನೆ ಯಶಸ್ವಿ<br />ಬೆಂಗಳೂರು, ಡಿ. 30–</strong> ಒಂದೇ ಪ್ರದೇಶವನ್ನು ಎರಡು ಆಯಾಮಗಳಿಂದ ಚಿತ್ರಿಸಬಲ್ಲ ಐಆರ್ಎಸ್– 1ಸಿ ದೂರ ಸಂವೇದಿ ಉಪಗ್ರಹದ ‘ಪಂಕ್ರೋಮ್ಯಾಟಿಕ್ ಕ್ಯಾಮೆರಾ’ವನ್ನು ಯಶಸ್ವಿಯಾಗಿ ನಿಗದಿತ ಸ್ಥಿತಿಯಲ್ಲಿ ತೆರೆಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.</p><p>ಈ ಕ್ಯಾಮೆರಾ ಸೆರೆ ಹಿಡಿಯುವ ಮಾಹಿತಿಯ ಮೂಲಕ ಭೂ ಮೇಲ್ಮೈಯ ಡಿಜಿಟಲ್ ನಕ್ಷೆಗಳು ಲಭ್ಯ. ಬಹು ಸೂಕ್ಷ್ಮ ಸ್ತರದ ನಗರ ಯೋಜನೆ ಮತ್ತು ಅಧ್ಯಯನ ದಲ್ಲಿ ಇವು ಬಹು ಉಪಯುಕ್ತ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಪ್ರಕಟಣೆ ತಿಳಿಸಿದೆ.</p><p><strong>ಕಾವೇರಿ ಸಭೆ ಅಪೂರ್ಣ ಮತ್ತೆ ಪ್ರಧಾನಿ ಚರ್ಚೆ<br />ನವದೆಹಲಿ, ಡಿ. 30–</strong> ಭಾರಿ ಕುತೂಹಲ ಕೆರಳಿಸಿದ್ದ, ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಅಧ್ಯಕ್ಷತೆಯಲ್ಲಿ ಇಂದು ರಾತ್ರಿ ನಡೆದ ಕಾವೇರಿ ವಿವಾದ ಕುರಿತ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ನಾಯಕರ ಸಂಧಾನ ಸಭೆ ಯಾವುದೇ ಸ್ಪಷ್ಟ<br />ನಿರ್ಧಾರವಿಲ್ಲದೆ ನಾಳೆಗೆ ಮುಂದಕ್ಕೆ ಹೋಯಿತು.</p><p>ಪ್ರಧಾನಿ ಅವರು ನಾಳೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಮುಖ್ಯಮಂತ್ರಿಗಳನ್ನೊಳಗೊಂಡಂತೆ ಆಯಾ ರಾಜ್ಯಗಳ ನಿಯೋಗ ಗಳನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.</p></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div><p><strong>ಐಆರ್ಎಸ್–1ಸಿ: ಕ್ಯಾಮೆರಾ ಚಾಲನೆ ಯಶಸ್ವಿ<br />ಬೆಂಗಳೂರು, ಡಿ. 30–</strong> ಒಂದೇ ಪ್ರದೇಶವನ್ನು ಎರಡು ಆಯಾಮಗಳಿಂದ ಚಿತ್ರಿಸಬಲ್ಲ ಐಆರ್ಎಸ್– 1ಸಿ ದೂರ ಸಂವೇದಿ ಉಪಗ್ರಹದ ‘ಪಂಕ್ರೋಮ್ಯಾಟಿಕ್ ಕ್ಯಾಮೆರಾ’ವನ್ನು ಯಶಸ್ವಿಯಾಗಿ ನಿಗದಿತ ಸ್ಥಿತಿಯಲ್ಲಿ ತೆರೆಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.</p><p>ಈ ಕ್ಯಾಮೆರಾ ಸೆರೆ ಹಿಡಿಯುವ ಮಾಹಿತಿಯ ಮೂಲಕ ಭೂ ಮೇಲ್ಮೈಯ ಡಿಜಿಟಲ್ ನಕ್ಷೆಗಳು ಲಭ್ಯ. ಬಹು ಸೂಕ್ಷ್ಮ ಸ್ತರದ ನಗರ ಯೋಜನೆ ಮತ್ತು ಅಧ್ಯಯನ ದಲ್ಲಿ ಇವು ಬಹು ಉಪಯುಕ್ತ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಪ್ರಕಟಣೆ ತಿಳಿಸಿದೆ.</p><p><strong>ಕಾವೇರಿ ಸಭೆ ಅಪೂರ್ಣ ಮತ್ತೆ ಪ್ರಧಾನಿ ಚರ್ಚೆ<br />ನವದೆಹಲಿ, ಡಿ. 30–</strong> ಭಾರಿ ಕುತೂಹಲ ಕೆರಳಿಸಿದ್ದ, ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಅಧ್ಯಕ್ಷತೆಯಲ್ಲಿ ಇಂದು ರಾತ್ರಿ ನಡೆದ ಕಾವೇರಿ ವಿವಾದ ಕುರಿತ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ನಾಯಕರ ಸಂಧಾನ ಸಭೆ ಯಾವುದೇ ಸ್ಪಷ್ಟ<br />ನಿರ್ಧಾರವಿಲ್ಲದೆ ನಾಳೆಗೆ ಮುಂದಕ್ಕೆ ಹೋಯಿತು.</p><p>ಪ್ರಧಾನಿ ಅವರು ನಾಳೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಮುಖ್ಯಮಂತ್ರಿಗಳನ್ನೊಳಗೊಂಡಂತೆ ಆಯಾ ರಾಜ್ಯಗಳ ನಿಯೋಗ ಗಳನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.</p></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>