<h2>ಯೋಧರ ಅಂಗಾಂಗ ಛಿದ್ರ: ಪಾಕ್ಗೆ ಭಾರತ ಖಂಡನೆ</h2>. <p><strong>ನವದೆಹಲಿ, ಜೂನ್ 10–</strong> ಪಾಕಿಸ್ತಾನದ ಸೈನಿಕರು ಆರು ಮಂದಿ ಭಾರತೀಯ ಯೋಧರ ಕೆಲವು ಅಂಗಾಂಗಗಳನ್ನು ಕತ್ತರಿಸಿದ ದೇಹಗಳನ್ನು ನೀಡಿದ್ದು, ಇದು ಅತ್ಯಂತ ಅಮಾನುಷ ಮತ್ತು ಬರ್ಬರ ಕೃತ್ಯ ಎಂದು ಇಂದು ಭಾರತ ಕಟುವಾಗಿ ಖಂಡಿಸಿದೆ.</p><p>ಕಣ್ಮರೆಯಾಗಿದ್ದ ಹದಿನಾಲ್ಕು ಮಂದಿಯಲ್ಲಿ ಈ ಆರು ಮಂದಿ ಯೋಧರು ಪಾಕಿಸ್ತಾನದ ಘೋರ ಕೃತ್ಯಕ್ಕೆ ಒಳಗಾದವರು. ಈ ಅಮಾನುಷ ಕೃತ್ಯವು ಹಿಂದೆಂದೂ ನಡೆದಿಲ್ಲ, ಇದು ಅಂತರರಾಷ್ಟ್ರೀಯ ಸಂಪ್ರದಾಯದ ಉಲ್ಲಂಘನೆಯಾಗಿದೆ ಎಂದು ಭೂಸೇನಾ ಪಡೆಯ ವಕ್ತಾರ ಕರ್ನಲ್ ವಿಕ್ರಂ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಇಂದು ಪಾಕಿಸ್ತಾನದ ನಡೆಯನ್ನು ಖಂಡಿಸಿದರು.</p><p>ಈ ನಡುವೆ, ಕಾರ್ಗಿಲ್ ವಲಯದಿಂದ ಅತಿಕ್ರಮಣಕಾರರನ್ನು ಓಡಿಸುವ ತನಕ ಭಾರತೀಯ ಪಡೆಗಳು ವಿರಮಿಸುವುದಿಲ್ಲ ಎಂದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಪಟ್ನಾದಲ್ಲಿ ಎಚ್ಚರಿಕೆ ನೀಡಿದ್ದಾರೆ.</p>.<h2></h2><h2>ಅಮೆರಿಕ ಆರ್ಥಿಕ ನಿಷೇಧ: ಐದು ವರ್ಷ ಕಾಲ ಸ್ಥಗಿತ</h2>. <p><strong>ವಾಷಿಂಗ್ಟನ್, ಜೂನ್ 10 (ಯುಎನ್ಐ)–</strong> ಅಣ್ವಸ್ತ್ರ ಸ್ಫೋಟಗಳ ಕಾರಣ ಅಮೆರಿಕವು ಭಾರತ ಹಾಗೂ ಪಾಕಿಸ್ತಾನದ ಮೇಲೆ ಹೇರಿರುವ ಎಲ್ಲಾ ಆರ್ಥಿಕ ನಿಷೇಧಗಳನ್ನು ಐದು ವರ್ಷದ ಅವಧಿಗೆ ರದ್ದುಪಡಿಸುವ ತಿದ್ದುಪಡಿಯೊಂದನ್ನು ಅಮೆರಿಕದ ಸೆನೆಟ್ ಅಂಗೀಕರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಯೋಧರ ಅಂಗಾಂಗ ಛಿದ್ರ: ಪಾಕ್ಗೆ ಭಾರತ ಖಂಡನೆ</h2>. <p><strong>ನವದೆಹಲಿ, ಜೂನ್ 10–</strong> ಪಾಕಿಸ್ತಾನದ ಸೈನಿಕರು ಆರು ಮಂದಿ ಭಾರತೀಯ ಯೋಧರ ಕೆಲವು ಅಂಗಾಂಗಗಳನ್ನು ಕತ್ತರಿಸಿದ ದೇಹಗಳನ್ನು ನೀಡಿದ್ದು, ಇದು ಅತ್ಯಂತ ಅಮಾನುಷ ಮತ್ತು ಬರ್ಬರ ಕೃತ್ಯ ಎಂದು ಇಂದು ಭಾರತ ಕಟುವಾಗಿ ಖಂಡಿಸಿದೆ.</p><p>ಕಣ್ಮರೆಯಾಗಿದ್ದ ಹದಿನಾಲ್ಕು ಮಂದಿಯಲ್ಲಿ ಈ ಆರು ಮಂದಿ ಯೋಧರು ಪಾಕಿಸ್ತಾನದ ಘೋರ ಕೃತ್ಯಕ್ಕೆ ಒಳಗಾದವರು. ಈ ಅಮಾನುಷ ಕೃತ್ಯವು ಹಿಂದೆಂದೂ ನಡೆದಿಲ್ಲ, ಇದು ಅಂತರರಾಷ್ಟ್ರೀಯ ಸಂಪ್ರದಾಯದ ಉಲ್ಲಂಘನೆಯಾಗಿದೆ ಎಂದು ಭೂಸೇನಾ ಪಡೆಯ ವಕ್ತಾರ ಕರ್ನಲ್ ವಿಕ್ರಂ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಇಂದು ಪಾಕಿಸ್ತಾನದ ನಡೆಯನ್ನು ಖಂಡಿಸಿದರು.</p><p>ಈ ನಡುವೆ, ಕಾರ್ಗಿಲ್ ವಲಯದಿಂದ ಅತಿಕ್ರಮಣಕಾರರನ್ನು ಓಡಿಸುವ ತನಕ ಭಾರತೀಯ ಪಡೆಗಳು ವಿರಮಿಸುವುದಿಲ್ಲ ಎಂದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಪಟ್ನಾದಲ್ಲಿ ಎಚ್ಚರಿಕೆ ನೀಡಿದ್ದಾರೆ.</p>.<h2></h2><h2>ಅಮೆರಿಕ ಆರ್ಥಿಕ ನಿಷೇಧ: ಐದು ವರ್ಷ ಕಾಲ ಸ್ಥಗಿತ</h2>. <p><strong>ವಾಷಿಂಗ್ಟನ್, ಜೂನ್ 10 (ಯುಎನ್ಐ)–</strong> ಅಣ್ವಸ್ತ್ರ ಸ್ಫೋಟಗಳ ಕಾರಣ ಅಮೆರಿಕವು ಭಾರತ ಹಾಗೂ ಪಾಕಿಸ್ತಾನದ ಮೇಲೆ ಹೇರಿರುವ ಎಲ್ಲಾ ಆರ್ಥಿಕ ನಿಷೇಧಗಳನ್ನು ಐದು ವರ್ಷದ ಅವಧಿಗೆ ರದ್ದುಪಡಿಸುವ ತಿದ್ದುಪಡಿಯೊಂದನ್ನು ಅಮೆರಿಕದ ಸೆನೆಟ್ ಅಂಗೀಕರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>