<p><strong>ನದಿಗೆ ಬಸ್ ಬಿದ್ದು 66 ವಿದ್ಯಾರ್ಥಿಗಳ ಸಾವು<br />ಮುರ್ಶಿದಾಬಾದ್, (ಪ. ಬಂಗಾಳ) ಜ.13 (ಪಿಟಿಐ)– </strong>ಇಲ್ಲಿಗೆ ಸಮೀಪದ ಜಲಂಗಿ ಎಂಬಲ್ಲಿ ಪ್ರವಾಸಿ ಬಸ್ಸು ರಸ್ತೆಯಿಂದ ಉರುಳಿ ಪದ್ಮಾ ನದಿಗೆ ಬಿದ್ದುದರಿಂದ ಅದರಲ್ಲಿ ಇದ್ದ ವಿದ್ಯಾರ್ಥಿಗಳಲ್ಲಿ ಕನಿಷ್ಠ 66 ವಿದ್ಯಾರ್ಥಿಗಳು ನೀರುಪಾಲಾಗಿರಬೇಕೆಂದು ಶಂಕಿಸಲಾಗಿದೆ.</p>.<p>ಇಂದು ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಭಾರಿ ಪ್ರಮಾಣದಲ್ಲಿ ಮಂಜು ಕವಿದುದೇ ಇದಕ್ಕೆ ಕಾರಣ ಎನ್ನಲಾಗಿದೆ. 53 ವಿದ್ಯಾರ್ಥಿಗಳು ಮುಳುಗಿ ಸತ್ತಿದ್ದು, ನಾಪತ್ತೆಯಾಗಿರುವ 13 ವಿದ್ಯಾರ್ಥಿಗಳೂ ಸತ್ತಿರಬೇಕೆಂದು ಶಂಕಿಸಲಾಗಿದೆ. ಶೋಧ ಮುಂದುವರೆದಿದೆ. 46 ಮೃತದೇಹಗಳನ್ನು ನೀರಿನಿಂದ ಮೇಲೆತ್ತಲಾಗಿದೆ.</p>.<p>ಮುರ್ಶಿದಾಬಾದ್ ಜಿಲ್ಲೆಯಲ್ಲಿರುವ ಕೊನೆಯ ಮೊಘಲ್ ನವಾಬರಿಗೆ ಸೇರಿದ್ದ ಚಾರಿತ್ರಿಕ ಸ್ಥಳ ಲಾಲ್ಬಾಗ್ಗೆ ವಿಹಾರಕ್ಕೆ ತೆರಳಿದ 86 ಪ್ರೌಢಶಾಲಾ ವಿದ್ಯಾರ್ಥಿಗಳಿದ್ದ ಬಸ್ಸು ಕರೀಂಪುರಕ್ಕೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.</p>.<p><strong>ರೈತರ ಮೇಲೆ ಗುಂಡು: 18 ಸಾವು, 100 ಗಾಯ<br />ಭೋಪಾಲ್, ಜ.13–</strong> ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆಯಲ್ಲಿ ಸತ್ತವರ ಸಂಖ್ಯೆ 18ಕ್ಕೆ ಏರಿದೆ. ಈ ಘಟನೆಯಲ್ಲಿ ಇನ್ನೂ 100 ಜನರಿಗೆ ಗಾಯಗಳಾಗಿವೆ.</p>.<p>ಜಿಲ್ಲೆಯ ಮುಲ್ತಾಯ್ ತಾಲ್ಲೂಕಿನಲ್ಲಿ ಅಕಾಲಿಕ ಮಳೆ ಮತ್ತು ಗಾಳಿಯಿಂದ ಹಾಳಾಗಿರುವ ಬೆಳೆಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಒತ್ತಾಯಿಸುತ್ತಿದ್ದರು. ಅವರು ತಹಸೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಿ ಖಜಾನೆಯನ್ನು ದೋಚಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನದಿಗೆ ಬಸ್ ಬಿದ್ದು 66 ವಿದ್ಯಾರ್ಥಿಗಳ ಸಾವು<br />ಮುರ್ಶಿದಾಬಾದ್, (ಪ. ಬಂಗಾಳ) ಜ.13 (ಪಿಟಿಐ)– </strong>ಇಲ್ಲಿಗೆ ಸಮೀಪದ ಜಲಂಗಿ ಎಂಬಲ್ಲಿ ಪ್ರವಾಸಿ ಬಸ್ಸು ರಸ್ತೆಯಿಂದ ಉರುಳಿ ಪದ್ಮಾ ನದಿಗೆ ಬಿದ್ದುದರಿಂದ ಅದರಲ್ಲಿ ಇದ್ದ ವಿದ್ಯಾರ್ಥಿಗಳಲ್ಲಿ ಕನಿಷ್ಠ 66 ವಿದ್ಯಾರ್ಥಿಗಳು ನೀರುಪಾಲಾಗಿರಬೇಕೆಂದು ಶಂಕಿಸಲಾಗಿದೆ.</p>.<p>ಇಂದು ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಭಾರಿ ಪ್ರಮಾಣದಲ್ಲಿ ಮಂಜು ಕವಿದುದೇ ಇದಕ್ಕೆ ಕಾರಣ ಎನ್ನಲಾಗಿದೆ. 53 ವಿದ್ಯಾರ್ಥಿಗಳು ಮುಳುಗಿ ಸತ್ತಿದ್ದು, ನಾಪತ್ತೆಯಾಗಿರುವ 13 ವಿದ್ಯಾರ್ಥಿಗಳೂ ಸತ್ತಿರಬೇಕೆಂದು ಶಂಕಿಸಲಾಗಿದೆ. ಶೋಧ ಮುಂದುವರೆದಿದೆ. 46 ಮೃತದೇಹಗಳನ್ನು ನೀರಿನಿಂದ ಮೇಲೆತ್ತಲಾಗಿದೆ.</p>.<p>ಮುರ್ಶಿದಾಬಾದ್ ಜಿಲ್ಲೆಯಲ್ಲಿರುವ ಕೊನೆಯ ಮೊಘಲ್ ನವಾಬರಿಗೆ ಸೇರಿದ್ದ ಚಾರಿತ್ರಿಕ ಸ್ಥಳ ಲಾಲ್ಬಾಗ್ಗೆ ವಿಹಾರಕ್ಕೆ ತೆರಳಿದ 86 ಪ್ರೌಢಶಾಲಾ ವಿದ್ಯಾರ್ಥಿಗಳಿದ್ದ ಬಸ್ಸು ಕರೀಂಪುರಕ್ಕೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.</p>.<p><strong>ರೈತರ ಮೇಲೆ ಗುಂಡು: 18 ಸಾವು, 100 ಗಾಯ<br />ಭೋಪಾಲ್, ಜ.13–</strong> ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆಯಲ್ಲಿ ಸತ್ತವರ ಸಂಖ್ಯೆ 18ಕ್ಕೆ ಏರಿದೆ. ಈ ಘಟನೆಯಲ್ಲಿ ಇನ್ನೂ 100 ಜನರಿಗೆ ಗಾಯಗಳಾಗಿವೆ.</p>.<p>ಜಿಲ್ಲೆಯ ಮುಲ್ತಾಯ್ ತಾಲ್ಲೂಕಿನಲ್ಲಿ ಅಕಾಲಿಕ ಮಳೆ ಮತ್ತು ಗಾಳಿಯಿಂದ ಹಾಳಾಗಿರುವ ಬೆಳೆಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಒತ್ತಾಯಿಸುತ್ತಿದ್ದರು. ಅವರು ತಹಸೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಿ ಖಜಾನೆಯನ್ನು ದೋಚಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>