<p><strong>ಢಾಕಾ, ಜೂನ್ 19 (ಯುಎನ್ಐ, ಪಿಟಿಐ)–</strong> ಕಲ್ಕತ್ತಾ ನಗರದಿಂದ ಹೊರಟ ಮೊಟ್ಟ ಮೊದಲ ಬಸ್ ‘ಸೌಹಾರ್ದ’ ಇಂದು ಸಂಜೆ ಇಲ್ಲಿಗೆ ಬಂದು ಸೇರುವುದರೊಂದಿಗೆ ಭಾರತ– ಬಾಂಗ್ಲಾದೇಶ ಸಂಬಂಧದ ಇತಿಹಾಸಕ್ಕೆ ಹೊಸದೊಂದು ಅಧ್ಯಾಯ ಸೇರ್ಪಡೆಯಾಯಿತು.</p><p>ರಾಜಧಾನಿಯ ಓಸ್ಮಾನಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಸುಮಾರು 380 ಕಿ. ಮೀ ಕ್ರಮಿಸಿದ ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಗೆ ಸೇರಿದ ಹವಾ ನಿಯಂತ್ರಿತ ಬಸ್ಸನ್ನು ಬರಮಾಡಿಕೊಂಡರು.</p><p>‘ಭಾರತ– ಬಾಂಗ್ಲಾ ಎರಡೂ ದೇಶಗಳಿಗೂ ಇದೊಂದು ಸಂತಸದ ಸಮಾರಂಭ’ ಎಂದು ವಾಜಪೇಯಿ ತಿಳಿಸಿದರು.</p><p>ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು, ವಿದೇಶಾಂಗ ಸಚಿವ ಜಸ್ವಂತ್ ಸಿಂಗ್, ರೈಲ್ವೆ ಸಚಿವ ನಿತೀಶ್ ಕುಮಾರ್ ಹಾಗೂ ಹಸೀನಾ ಸಂಪುಟ ಸಹೋದ್ಯೋಗಿಗಳು ಸಮಾರಂಭದಲ್ಲಿ ಹಾಜರಿದ್ದರು.</p><p><strong>ಜರ್ಮನಿ: ಭಾರತದ ರೈತರ ಬಂಧನ</strong></p><p><strong>ನವದೆಹಲಿ, ಜೂನ್ 19 (ಯುಎನ್ಐ)–</strong> ವಿಶ್ವ ವಾಣಿಜ್ಯ ಸಂಘಟನೆ (ಡಬ್ಲುಟಿಒ) ಪ್ರತಿಪಾದಿಸುತ್ತಿರುವ ನೀತಿಗಳನ್ನು ವಿರೋಧಿಸಿ ಜಿ–8 ರಾಷ್ಟ್ರಗಳ ಶೃಂಗಮೇಳ ನಡೆಯುತ್ತಿರುವ ಜರ್ಮನಿಯ ಕಲೋನ್ ನಗರದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ಭಾರತದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.</p><p>ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸುಮಾರು 500 ಮಂದಿ ರೈತರು ನಗರದ ಕೇಂದ್ರ ಸ್ಥಾನಕ್ಕಿರುವ ಉಪ ರಸ್ತೆಯನ್ನು ಪ್ರವೇಶಿಸುತ್ತಿದ್ದಂತೆ ಪೊಲೀಸರು ತಡೆದರು. ಬಂಧಿತರಲ್ಲಿ ಆರು ಮಂದಿ ಇನ್ನೂ ಪೊಲೀಸರ ವಶದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ, ಜೂನ್ 19 (ಯುಎನ್ಐ, ಪಿಟಿಐ)–</strong> ಕಲ್ಕತ್ತಾ ನಗರದಿಂದ ಹೊರಟ ಮೊಟ್ಟ ಮೊದಲ ಬಸ್ ‘ಸೌಹಾರ್ದ’ ಇಂದು ಸಂಜೆ ಇಲ್ಲಿಗೆ ಬಂದು ಸೇರುವುದರೊಂದಿಗೆ ಭಾರತ– ಬಾಂಗ್ಲಾದೇಶ ಸಂಬಂಧದ ಇತಿಹಾಸಕ್ಕೆ ಹೊಸದೊಂದು ಅಧ್ಯಾಯ ಸೇರ್ಪಡೆಯಾಯಿತು.</p><p>ರಾಜಧಾನಿಯ ಓಸ್ಮಾನಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಸುಮಾರು 380 ಕಿ. ಮೀ ಕ್ರಮಿಸಿದ ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಗೆ ಸೇರಿದ ಹವಾ ನಿಯಂತ್ರಿತ ಬಸ್ಸನ್ನು ಬರಮಾಡಿಕೊಂಡರು.</p><p>‘ಭಾರತ– ಬಾಂಗ್ಲಾ ಎರಡೂ ದೇಶಗಳಿಗೂ ಇದೊಂದು ಸಂತಸದ ಸಮಾರಂಭ’ ಎಂದು ವಾಜಪೇಯಿ ತಿಳಿಸಿದರು.</p><p>ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು, ವಿದೇಶಾಂಗ ಸಚಿವ ಜಸ್ವಂತ್ ಸಿಂಗ್, ರೈಲ್ವೆ ಸಚಿವ ನಿತೀಶ್ ಕುಮಾರ್ ಹಾಗೂ ಹಸೀನಾ ಸಂಪುಟ ಸಹೋದ್ಯೋಗಿಗಳು ಸಮಾರಂಭದಲ್ಲಿ ಹಾಜರಿದ್ದರು.</p><p><strong>ಜರ್ಮನಿ: ಭಾರತದ ರೈತರ ಬಂಧನ</strong></p><p><strong>ನವದೆಹಲಿ, ಜೂನ್ 19 (ಯುಎನ್ಐ)–</strong> ವಿಶ್ವ ವಾಣಿಜ್ಯ ಸಂಘಟನೆ (ಡಬ್ಲುಟಿಒ) ಪ್ರತಿಪಾದಿಸುತ್ತಿರುವ ನೀತಿಗಳನ್ನು ವಿರೋಧಿಸಿ ಜಿ–8 ರಾಷ್ಟ್ರಗಳ ಶೃಂಗಮೇಳ ನಡೆಯುತ್ತಿರುವ ಜರ್ಮನಿಯ ಕಲೋನ್ ನಗರದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ಭಾರತದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.</p><p>ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸುಮಾರು 500 ಮಂದಿ ರೈತರು ನಗರದ ಕೇಂದ್ರ ಸ್ಥಾನಕ್ಕಿರುವ ಉಪ ರಸ್ತೆಯನ್ನು ಪ್ರವೇಶಿಸುತ್ತಿದ್ದಂತೆ ಪೊಲೀಸರು ತಡೆದರು. ಬಂಧಿತರಲ್ಲಿ ಆರು ಮಂದಿ ಇನ್ನೂ ಪೊಲೀಸರ ವಶದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>