2ನೇ ದಿನವೂ ನಿಲ್ಲದ ಗದ್ದಲ ಸಂಸತ್ ಕಲಾಪಕ್ಕೆ ಅಡ್ಡಿ
ನವದೆಹಲಿ, ಮಾರ್ಚ್ 7 (ಪಿಟಿಐ)– ಹವಾಲ ಹಗರಣ ಕುರಿತಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ರಾಜೀ ನಾಮೆ ಕೊಡಬೇಕು ಎಂದು ಪಟ್ಟುಬಿಡದ ಪ್ರತಿಪಕ್ಷಗಳು ಸತತ ಎರಡನೇ ದಿನವಾದ ಇಂದೂ ಸಂಸತ್ತಿನಲ್ಲಿ ಬಲವಾಗಿ ಒತ್ತಾಯಿಸಿ ಕಲಾಪಕ್ಕೆ ಅವಕಾಶವನ್ನೇ ನೀಡಲಿಲ್ಲ.ಇದರಿಂದಾಗಿ ಎರಡೂ ಸದನಗಳನ್ನು ನಾಳೆಗೆ ಮುಂದೂಡಬೇಕಾಯಿತು.