<p><strong>ಚಿಂತಾಮಣಿ ಬಳಿ ಗುಂಪು ಘರ್ಷಣೆ: ಪೊಲೀಸರು ಸೇರಿ ನಾಲ್ವರ ಸಾವು<br />ಚಿಂತಾಮಣಿ, ಸೆ. 1–</strong> ಇಲ್ಲಿಗೆ ಸಮೀಪದ ಆಂಧ್ರ ಗಡಿ ಭಾಗದ ಬಿಲ್ಲಾಂಡ್ಲಹಳ್ಳಿಯ ದಲಿತರು ಮತ್ತು ಸವರ್ಣೀಯರ ನಡುವೆ ನಡೆದ ಗುಂಪು ಘರ್ಷಣೆಯಲ್ಲಿ ಮೂವರು ಪೊಲೀಸರು ಹಾಗೂ ಒಬ್ಬ ನಾಗರಿಕ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ.</p>.<p>ದಂಗೆಕೋರರ ಆಕ್ರಮಣಕ್ಕೆ ಸಿಕ್ಕಿ ಮೀಸಲು ಪಡೆಯ ಮುಖ್ಯ ಪದೇದೆ ಅಬ್ದುಲ್ ಬಷೀರ್, ಪೇದೆ ನರಸಿಂಹಪ್ಪ, ಕಾನೂನು ಸುವ್ಯವಸ್ಥೆಯ ಪೊಲೀಸ್ ಪೇದೆ ಸುಧಾಕರ ಮತ್ತು ಓಬಳಾಪುರದ ಸುಧಾಕರ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ 16 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p><strong>ಹಿನ್ನೆಲೆ: </strong>ಬಿಲ್ಲಾಂಡ್ಲಹಳ್ಳಿಯಲ್ಲಿ ಚಿಂತಾಮಣಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಕಲಾ ಮಂಡಳಿಯ ಶಾಖೆಯನ್ನು ಇಂದು ಆರಂಭಿಸುವ ಕಾರ್ಯಕ್ರಮ ಇತ್ತು. ಇದಕ್ಕೆ ಆ ಪ್ರದೇಶದ ಗ್ರಾಮಸ್ಥರು, ಬಿಲ್ಲಾಂಡ್ಲಹಳ್ಳಿಯ ಸವರ್ಣೀಯರು ವಿರೋಧ ವ್ಯಕ್ತಪಡಿಸಿ, ಚಿಂತಾಮಣಿ ವೃತ್ತನಿರೀಕ್ಷಕರಿಗೆ ಶನಿವಾರವೇ ದೂರು ನೀಡಿದ್ದರು ಎಂದು ತಿಳಿದುಬಂದಿದೆ.</p>.<p>ಪೊಲೀಸರು ದಲಿತ ಮುಖಂಡರನ್ನು ಕರೆಸಿ ಇಂದಿನ ಕಾರ್ಯಕ್ರಮ ರದ್ದುಪಡಿಸುವಂತೆ ಕೇಳಿದ್ದರು. ಅದಕ್ಕೆ ಒಪ್ಪದ ದಲಿತ ಮುಖಂಡರು ‘ಸಂಘವನ್ನು ಸಂಘಟಿಸುವುದು ನಮ್ಮ ಜನತಾಂತ್ರಿಕ ಹಕ್ಕು’ ಎಂದು ಪ್ರತಿಪಾದಿಸಿದ್ದರು. ಇದರಿಂದ ಗ್ರಾಮದಲ್ಲಿ ಎರಡೂ ಜನಾಂಗದ ನಡುವೆ ಗಲಭೆ ನಡೆಯುವುದೆಂದು ಶಂಕಿಸಿದ ಪೊಲೀಸರು ಸಿಬ್ಬಂದಿಯನ್ನು ಆ ಗ್ರಾಮಕ್ಕೆ ಕಳುಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ ಬಳಿ ಗುಂಪು ಘರ್ಷಣೆ: ಪೊಲೀಸರು ಸೇರಿ ನಾಲ್ವರ ಸಾವು<br />ಚಿಂತಾಮಣಿ, ಸೆ. 1–</strong> ಇಲ್ಲಿಗೆ ಸಮೀಪದ ಆಂಧ್ರ ಗಡಿ ಭಾಗದ ಬಿಲ್ಲಾಂಡ್ಲಹಳ್ಳಿಯ ದಲಿತರು ಮತ್ತು ಸವರ್ಣೀಯರ ನಡುವೆ ನಡೆದ ಗುಂಪು ಘರ್ಷಣೆಯಲ್ಲಿ ಮೂವರು ಪೊಲೀಸರು ಹಾಗೂ ಒಬ್ಬ ನಾಗರಿಕ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ.</p>.<p>ದಂಗೆಕೋರರ ಆಕ್ರಮಣಕ್ಕೆ ಸಿಕ್ಕಿ ಮೀಸಲು ಪಡೆಯ ಮುಖ್ಯ ಪದೇದೆ ಅಬ್ದುಲ್ ಬಷೀರ್, ಪೇದೆ ನರಸಿಂಹಪ್ಪ, ಕಾನೂನು ಸುವ್ಯವಸ್ಥೆಯ ಪೊಲೀಸ್ ಪೇದೆ ಸುಧಾಕರ ಮತ್ತು ಓಬಳಾಪುರದ ಸುಧಾಕರ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ 16 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p><strong>ಹಿನ್ನೆಲೆ: </strong>ಬಿಲ್ಲಾಂಡ್ಲಹಳ್ಳಿಯಲ್ಲಿ ಚಿಂತಾಮಣಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಕಲಾ ಮಂಡಳಿಯ ಶಾಖೆಯನ್ನು ಇಂದು ಆರಂಭಿಸುವ ಕಾರ್ಯಕ್ರಮ ಇತ್ತು. ಇದಕ್ಕೆ ಆ ಪ್ರದೇಶದ ಗ್ರಾಮಸ್ಥರು, ಬಿಲ್ಲಾಂಡ್ಲಹಳ್ಳಿಯ ಸವರ್ಣೀಯರು ವಿರೋಧ ವ್ಯಕ್ತಪಡಿಸಿ, ಚಿಂತಾಮಣಿ ವೃತ್ತನಿರೀಕ್ಷಕರಿಗೆ ಶನಿವಾರವೇ ದೂರು ನೀಡಿದ್ದರು ಎಂದು ತಿಳಿದುಬಂದಿದೆ.</p>.<p>ಪೊಲೀಸರು ದಲಿತ ಮುಖಂಡರನ್ನು ಕರೆಸಿ ಇಂದಿನ ಕಾರ್ಯಕ್ರಮ ರದ್ದುಪಡಿಸುವಂತೆ ಕೇಳಿದ್ದರು. ಅದಕ್ಕೆ ಒಪ್ಪದ ದಲಿತ ಮುಖಂಡರು ‘ಸಂಘವನ್ನು ಸಂಘಟಿಸುವುದು ನಮ್ಮ ಜನತಾಂತ್ರಿಕ ಹಕ್ಕು’ ಎಂದು ಪ್ರತಿಪಾದಿಸಿದ್ದರು. ಇದರಿಂದ ಗ್ರಾಮದಲ್ಲಿ ಎರಡೂ ಜನಾಂಗದ ನಡುವೆ ಗಲಭೆ ನಡೆಯುವುದೆಂದು ಶಂಕಿಸಿದ ಪೊಲೀಸರು ಸಿಬ್ಬಂದಿಯನ್ನು ಆ ಗ್ರಾಮಕ್ಕೆ ಕಳುಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>