ಬೆಂಗಳೂರು, ಸೆಪ್ಟೆಂಬರ್ 3– ಕಾವೇರಿ ನದಿ ಜಲ ವಿವಾದಕ್ಕೆ ಸಂಬಂಧಿಸಿದ ನ್ಯಾಯ ಮಂಡಲಿ ಇನ್ನೂ ತನ್ನ ಅಂತಿಮ ತೀರ್ಪು ನೀಡದಿರುವ ಈ ಹಂತದಲ್ಲಿ ಕಾವೇರಿ ನದಿ ಪ್ರಾಧಿಕಾರದ ರಚನೆ ಅಗತ್ಯವಿಲ್ಲ. ಆದರೆ ಅದರ ಬದಲಿಗೆ ಸಮನ್ವಯ ಸಮಿತಿಯೊಂದನ್ನು ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.