ಬೆಂಗಳೂರು, ನ. 7– ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪುತ್ರ ಎಚ್.ಡಿ. ರೇವಣ್ಣ ಅವರ ಮನೆಯಲ್ಲಿ ಈಚೆಗೆ ಕರೆದಿದ್ದ ಜನತಾದಳದ ಶಾಸಕರ ಸಭೆ ಬಗ್ಗೆ ಮನ ನೊಂದಿರುವ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು, ‘ಬೇಕಿದ್ದರೆ ಈ ಸ್ಥಾನ ಬಿಟ್ಟುಬಿಡುತ್ತೇನೆ; ಏನಾದರೂ ಮಾಡಿಕೊಳ್ಳಿ’ ಎಂದು ಸಂಪುಟ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.