<p><strong>ವೇತನ–ಭತ್ಯ ಒಪ್ಪಂದಕ್ಕೆ ಸಹಿ: ಸಾರಿಗೆ ಮುಷ್ಕರ ಮುಕ್ತಾಯ</strong></p>.<p><strong>ಬೆಂಗಳೂರು, ಅ. 18– </strong>ಸಾರಿಗೆ ನೌಕರರ ಒಕ್ಕೂಟ ಹಾಗೂ ಆಡಳಿತ ವರ್ಗ ಇಂದು ರಾತ್ರಿ ಒಪ್ಪಂದವೊಂದಕ್ಕೆ ಸಹಿ ಹಾಕುವುದರೊಂದಿಗೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ಮುಕ್ತಾಯಗೊಂಡಿತು.</p>.<p>ರಾತ್ರಿ ಬಹಳ ಹೊತ್ತಿನವರೆಗೆ ಆಡಳಿತ ವರ್ಗ ಮತ್ತು ನೌಕರರ ಒಕ್ಕೂಟದ ನಡುವೆ ನಡೆದ ಮಾತುಕತೆ ಫಲಪ್ರದವಾಗಿ, ಅಂತಿಮವಾಗಿ ನೌಕರರು ಬಯಸಿದಂತೆಯೇ 1995ರ ಡಿಸೆಂಬರ್ 31ಕ್ಕೆ ಹಳೆಯ ಒಪ್ಪಂದವನ್ನು ಕೊನೆಗೊಳಿಸಲು ಆಡಳಿತ ವರ್ಗ ಒಪ್ಪಿಕೊಂಡಿತು. ಈ ಮೂಲಕ, ಕಗ್ಗಂಟಾಗಿದ್ದ ಸಂಧಾನ ಸುಸೂತ್ರವಾಗಿ ಅಂತ್ಯಗೊಂಡು ಅನಿರ್ದಿಷ್ಟ ಕಾಲದ ಉಪವಾಸ ಮುಷ್ಕರ ನಡೆಸುತ್ತಿದ್ದ ಕಾರ್ಮಿಕ ನಾಯಕರು ಆಡಳಿತ ನಿರ್ದೇಶಕ<br />ಪಿ.ಡಿ.ಶೆಣೈ ಅವರಿಂದ ಎಳನೀರು ಕುಡಿಯುವುದರ ಮೂಲಕ ತಮ್ಮ ಮುಷ್ಕರವನ್ನು ಅಂತ್ಯಗೊಳಿಸಿದರು.</p>.<p><strong>ಉತ್ತರ ಪ್ರದೇಶಕ್ಕೆ ರಾಷ್ಟ್ರಪತಿ ಆಡಳಿತ</strong></p>.<p><strong>ನವದೆಹಲಿ, ಅ. 18 (ಯುಎನ್ಐ)– </strong>ಉತ್ತರ ಪ್ರದೇಶದಲ್ಲಿ ಇಂದು ರಾಷ್ಟ್ರಪತಿ ಆಡಳಿತವನ್ನು ವಿಧಿಸಲಾಗಿದೆ. 425 ಮಂದಿ ಸದಸ್ಯರಿರುವ ರಾಜ್ಯ ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ.</p>.<p>ಇದರಿಂದ, ನೀರಿನ ಮೇಲಿನ ಗುಳ್ಳೆಯಂತಿದ್ದ ಮಾಯಾವತಿ ನೇತೃತ್ವದ ಸರ್ಕಾರ ಪತನವಾಗಿದೆ. ಈ ಬೆಳವಣಿಗೆ ಆಶ್ವರ್ಯ ತರುವಂತಹದ್ದೇನಲ್ಲ. ಆದರೆ ಲೋಕಸಭೆ ಚುನಾವಣೆವರೆಗೆ ಮಾತ್ರ ಈ ಸರ್ಕಾರಕ್ಕೆ ಬೆಂಬಲ ಮುಂದುವರಿಸುವುದಾಗಿ ಬಿಜೆಪಿಯೇ ಹೇಳುತ್ತಿತ್ತು. ಅದರ ತೀರ್ಮಾನ ಸ್ವಲ್ಪ ಮುಂಚಿತವಾಗಿಯೇ ಆಗಿದೆ. ಗುಜರಾತ್ ಸಮಸ್ಯೆ ಇನ್ನೂ ಬಗೆಹರಿಯದಿರುವಾಗಲೇ ಉತ್ತರ ಪ್ರದೇಶದ ಬಗೆಗೆ ಬಿಜೆಪಿ ತನ್ನ ನಿರ್ಧಾರವನ್ನು ತೆಗೆದುಕೊಂಡಿದ್ದು ಮಾತ್ರ ರಾಜಕೀಯ ವಲಯದಲ್ಲಿ ಕುತೂಹಲ ಉಂಟು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೇತನ–ಭತ್ಯ ಒಪ್ಪಂದಕ್ಕೆ ಸಹಿ: ಸಾರಿಗೆ ಮುಷ್ಕರ ಮುಕ್ತಾಯ</strong></p>.<p><strong>ಬೆಂಗಳೂರು, ಅ. 18– </strong>ಸಾರಿಗೆ ನೌಕರರ ಒಕ್ಕೂಟ ಹಾಗೂ ಆಡಳಿತ ವರ್ಗ ಇಂದು ರಾತ್ರಿ ಒಪ್ಪಂದವೊಂದಕ್ಕೆ ಸಹಿ ಹಾಕುವುದರೊಂದಿಗೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ಮುಕ್ತಾಯಗೊಂಡಿತು.</p>.<p>ರಾತ್ರಿ ಬಹಳ ಹೊತ್ತಿನವರೆಗೆ ಆಡಳಿತ ವರ್ಗ ಮತ್ತು ನೌಕರರ ಒಕ್ಕೂಟದ ನಡುವೆ ನಡೆದ ಮಾತುಕತೆ ಫಲಪ್ರದವಾಗಿ, ಅಂತಿಮವಾಗಿ ನೌಕರರು ಬಯಸಿದಂತೆಯೇ 1995ರ ಡಿಸೆಂಬರ್ 31ಕ್ಕೆ ಹಳೆಯ ಒಪ್ಪಂದವನ್ನು ಕೊನೆಗೊಳಿಸಲು ಆಡಳಿತ ವರ್ಗ ಒಪ್ಪಿಕೊಂಡಿತು. ಈ ಮೂಲಕ, ಕಗ್ಗಂಟಾಗಿದ್ದ ಸಂಧಾನ ಸುಸೂತ್ರವಾಗಿ ಅಂತ್ಯಗೊಂಡು ಅನಿರ್ದಿಷ್ಟ ಕಾಲದ ಉಪವಾಸ ಮುಷ್ಕರ ನಡೆಸುತ್ತಿದ್ದ ಕಾರ್ಮಿಕ ನಾಯಕರು ಆಡಳಿತ ನಿರ್ದೇಶಕ<br />ಪಿ.ಡಿ.ಶೆಣೈ ಅವರಿಂದ ಎಳನೀರು ಕುಡಿಯುವುದರ ಮೂಲಕ ತಮ್ಮ ಮುಷ್ಕರವನ್ನು ಅಂತ್ಯಗೊಳಿಸಿದರು.</p>.<p><strong>ಉತ್ತರ ಪ್ರದೇಶಕ್ಕೆ ರಾಷ್ಟ್ರಪತಿ ಆಡಳಿತ</strong></p>.<p><strong>ನವದೆಹಲಿ, ಅ. 18 (ಯುಎನ್ಐ)– </strong>ಉತ್ತರ ಪ್ರದೇಶದಲ್ಲಿ ಇಂದು ರಾಷ್ಟ್ರಪತಿ ಆಡಳಿತವನ್ನು ವಿಧಿಸಲಾಗಿದೆ. 425 ಮಂದಿ ಸದಸ್ಯರಿರುವ ರಾಜ್ಯ ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ.</p>.<p>ಇದರಿಂದ, ನೀರಿನ ಮೇಲಿನ ಗುಳ್ಳೆಯಂತಿದ್ದ ಮಾಯಾವತಿ ನೇತೃತ್ವದ ಸರ್ಕಾರ ಪತನವಾಗಿದೆ. ಈ ಬೆಳವಣಿಗೆ ಆಶ್ವರ್ಯ ತರುವಂತಹದ್ದೇನಲ್ಲ. ಆದರೆ ಲೋಕಸಭೆ ಚುನಾವಣೆವರೆಗೆ ಮಾತ್ರ ಈ ಸರ್ಕಾರಕ್ಕೆ ಬೆಂಬಲ ಮುಂದುವರಿಸುವುದಾಗಿ ಬಿಜೆಪಿಯೇ ಹೇಳುತ್ತಿತ್ತು. ಅದರ ತೀರ್ಮಾನ ಸ್ವಲ್ಪ ಮುಂಚಿತವಾಗಿಯೇ ಆಗಿದೆ. ಗುಜರಾತ್ ಸಮಸ್ಯೆ ಇನ್ನೂ ಬಗೆಹರಿಯದಿರುವಾಗಲೇ ಉತ್ತರ ಪ್ರದೇಶದ ಬಗೆಗೆ ಬಿಜೆಪಿ ತನ್ನ ನಿರ್ಧಾರವನ್ನು ತೆಗೆದುಕೊಂಡಿದ್ದು ಮಾತ್ರ ರಾಜಕೀಯ ವಲಯದಲ್ಲಿ ಕುತೂಹಲ ಉಂಟು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>