<p><strong>ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 29 ಸಾವು</strong></p>.<p><strong>ಝಾನ್ಸಿ, ಅ. 4 (ಪಿಟಿಐ)– </strong>ಇಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದಾಗ ಅದರಲ್ಲಿ ಕೆಲಸ ಮಾಡುತ್ತಿದ್ದ ಹಲವು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ 29 ಕಾರ್ಮಿಕರು ಸತ್ತರು.</p>.<p><strong>ದಸರಾ: ಇನ್ನೂ ಅನಿಶ್ಚಿತ</strong></p>.<p><strong>ಮೈಸೂರು, ಅ. 4–</strong> ಇನ್ನೊಂದು ದಿನ ಕಾದರೆ ವಿಶ್ವವಿಖ್ಯಾತ ಮೈಸೂರು ದಸರಾದ ತೆರೆ ಏಳಬೇಕಾಗಿದೆ. ಈ ತೆರೆ ಏಳುತ್ತದೆಯೇ ಇಲ್ಲವೇ ಎಂಬುದು ಈಗಲೂ ಅನಿಶ್ಚಿತವಾಗಿಯೇ ಉಳಿದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಒಂದು ಕಡೆ ಪ್ಲೇಗ್ ಭೀತಿಯಿಂದ ಕಂಗಾಲಾಗಿರುವ ಮೈಸೂರು ನಗರದ ನಾಗರಿಕರು, ಇನ್ನೊಂದು ಕಡೆ ದಸರಾ ಕುರಿತಂತೆ ದಿನಕ್ಕೊಂದು ರೀತಿಯಲ್ಲಿ ಪ್ರಕಟವಾಗುತ್ತಿರುವ ಸರ್ಕಾರದ ನಿಲುವಿನಿಂದ ಗಾಬರಿಗೊಳ್ಳುತ್ತಿದ್ದಾರೆ.</p>.<p>ಮೈಸೂರು ನಗರದ ಸೋಂಕು ರೋಗ ಆಸ್ಪತ್ರೆಯಲ್ಲಿ ಪ್ಲೇಗ್ ರೋಗ ಶಂಕಿತ ಆರು ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರ ರಕ್ತದ ಸ್ಯಾಂಪಲ್ಗಳನ್ನು ಪರೀಕ್ಷೆಗಾಗಿ ಕಳಿಸಿದ್ದರೂ ಫಲಿತಾಂಶ ಮಾತ್ರ ಪ್ರಕಟವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 29 ಸಾವು</strong></p>.<p><strong>ಝಾನ್ಸಿ, ಅ. 4 (ಪಿಟಿಐ)– </strong>ಇಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದಾಗ ಅದರಲ್ಲಿ ಕೆಲಸ ಮಾಡುತ್ತಿದ್ದ ಹಲವು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ 29 ಕಾರ್ಮಿಕರು ಸತ್ತರು.</p>.<p><strong>ದಸರಾ: ಇನ್ನೂ ಅನಿಶ್ಚಿತ</strong></p>.<p><strong>ಮೈಸೂರು, ಅ. 4–</strong> ಇನ್ನೊಂದು ದಿನ ಕಾದರೆ ವಿಶ್ವವಿಖ್ಯಾತ ಮೈಸೂರು ದಸರಾದ ತೆರೆ ಏಳಬೇಕಾಗಿದೆ. ಈ ತೆರೆ ಏಳುತ್ತದೆಯೇ ಇಲ್ಲವೇ ಎಂಬುದು ಈಗಲೂ ಅನಿಶ್ಚಿತವಾಗಿಯೇ ಉಳಿದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಒಂದು ಕಡೆ ಪ್ಲೇಗ್ ಭೀತಿಯಿಂದ ಕಂಗಾಲಾಗಿರುವ ಮೈಸೂರು ನಗರದ ನಾಗರಿಕರು, ಇನ್ನೊಂದು ಕಡೆ ದಸರಾ ಕುರಿತಂತೆ ದಿನಕ್ಕೊಂದು ರೀತಿಯಲ್ಲಿ ಪ್ರಕಟವಾಗುತ್ತಿರುವ ಸರ್ಕಾರದ ನಿಲುವಿನಿಂದ ಗಾಬರಿಗೊಳ್ಳುತ್ತಿದ್ದಾರೆ.</p>.<p>ಮೈಸೂರು ನಗರದ ಸೋಂಕು ರೋಗ ಆಸ್ಪತ್ರೆಯಲ್ಲಿ ಪ್ಲೇಗ್ ರೋಗ ಶಂಕಿತ ಆರು ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರ ರಕ್ತದ ಸ್ಯಾಂಪಲ್ಗಳನ್ನು ಪರೀಕ್ಷೆಗಾಗಿ ಕಳಿಸಿದ್ದರೂ ಫಲಿತಾಂಶ ಮಾತ್ರ ಪ್ರಕಟವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>