ಮೈಸೂರು, ಅ. 4– ಇನ್ನೊಂದು ದಿನ ಕಾದರೆ ವಿಶ್ವವಿಖ್ಯಾತ ಮೈಸೂರು ದಸರಾದ ತೆರೆ ಏಳಬೇಕಾಗಿದೆ. ಈ ತೆರೆ ಏಳುತ್ತದೆಯೇ ಇಲ್ಲವೇ ಎಂಬುದು ಈಗಲೂ ಅನಿಶ್ಚಿತವಾಗಿಯೇ ಉಳಿದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಒಂದು ಕಡೆ ಪ್ಲೇಗ್ ಭೀತಿಯಿಂದ ಕಂಗಾಲಾಗಿರುವ ಮೈಸೂರು ನಗರದ ನಾಗರಿಕರು, ಇನ್ನೊಂದು ಕಡೆ ದಸರಾ ಕುರಿತಂತೆ ದಿನಕ್ಕೊಂದು ರೀತಿಯಲ್ಲಿ ಪ್ರಕಟವಾಗುತ್ತಿರುವ ಸರ್ಕಾರದ ನಿಲುವಿನಿಂದ ಗಾಬರಿಗೊಳ್ಳುತ್ತಿದ್ದಾರೆ.