<p>ಪ್ರಧಾನಿಗೆ ರಾಜ್ಯದ ಪತ್ರ: ಬರಗಾಲ ನಿವಾರಣೆಗೆ 150 ಕೋಟಿ ಬೃಹತ್ ಕಾರ್ಯಕ್ರಮ</p>.<p>ಬೆಂಗಳೂರು, ಜ. 3– ಬರಗಾಲದಿಂದ ತೀವ್ರ ತೊಂದರೆಗೊಳಗಾದ ಜನತೆಗೆ ಎಲ್ಲ ವಿಧದ ಸಹಾಯ ಮಾಡಲು ಸರ್ಕಾರ ಈವರೆಗೆ ಕಂಡರಿಯದ ಭಾರೀ ಪ್ರಮಾಣದ ಪರಿಹಾರ ಕಾರ್ಯಕ್ರಮವನ್ನು ರೂಪಿಸಿ ಸಹಾಯಕ್ಕಾಗಿ ಪ್ರಧಾನಮಂತ್ರಿಯವರಿಗೆ ಕಳುಹಿಸಿದೆ.</p>.<p>ಸುಮಾರು 150 ಕೋಟಿ ಕಾರ್ಯಕ್ರಮದ ವಿವರಗಳನ್ನು ಒಳಗೊಂಡ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಬರೆದಿರುವ ಪತ್ರವನ್ನು ಇಂದೇ ಸಚಿವ ಸಂಪುಟದ ಸಭೆಯ ನಂತರ ದೆಹಲಿಗೆ ರವಾನಿಸಲಾಯಿತು.</p>.<p>ಲೆ.ಜ. ಬೇವೂರ್: ನೂತನ ಪ್ರಧಾನ ದಂಡನಾಯಕರು</p>.<p>ನವದೆಹಲಿ, ಜ. 3– ಲೆ.ಜ. ಗೋಪಾಲಗುರುನಾಥ ಬೇವೂರ್ ಅವರನ್ನು ಭಾರತ ಸೈನ್ಯದ ನೂತನ ಪ್ರಧಾನ<br />ದಂಡನಾಯಕರನ್ನಾಗಿ ನೇಮಿಸಲಾಗಿದೆ.</p>.<p>ಜನರಲ್ ಪದವಿ ಸಹಿತ ಅವರು ಜನವರಿ 15ರಂದು ಫೀಲ್ಡ್ ಮಾರ್ಷಲ್ ಸ್ಯಾಂ ಮಾಣೆಕ್ ಷಾ ಅವರಿಂದ ಅಧಿಕಾರ ಸ್ವೀಕರಿಸುವರೆಂದು ರಕ್ಷಣಾ ಸಚಿವ ಶಾಖೆ ಇಂದು ಪ್ರಕಟಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಧಾನಿಗೆ ರಾಜ್ಯದ ಪತ್ರ: ಬರಗಾಲ ನಿವಾರಣೆಗೆ 150 ಕೋಟಿ ಬೃಹತ್ ಕಾರ್ಯಕ್ರಮ</p>.<p>ಬೆಂಗಳೂರು, ಜ. 3– ಬರಗಾಲದಿಂದ ತೀವ್ರ ತೊಂದರೆಗೊಳಗಾದ ಜನತೆಗೆ ಎಲ್ಲ ವಿಧದ ಸಹಾಯ ಮಾಡಲು ಸರ್ಕಾರ ಈವರೆಗೆ ಕಂಡರಿಯದ ಭಾರೀ ಪ್ರಮಾಣದ ಪರಿಹಾರ ಕಾರ್ಯಕ್ರಮವನ್ನು ರೂಪಿಸಿ ಸಹಾಯಕ್ಕಾಗಿ ಪ್ರಧಾನಮಂತ್ರಿಯವರಿಗೆ ಕಳುಹಿಸಿದೆ.</p>.<p>ಸುಮಾರು 150 ಕೋಟಿ ಕಾರ್ಯಕ್ರಮದ ವಿವರಗಳನ್ನು ಒಳಗೊಂಡ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಬರೆದಿರುವ ಪತ್ರವನ್ನು ಇಂದೇ ಸಚಿವ ಸಂಪುಟದ ಸಭೆಯ ನಂತರ ದೆಹಲಿಗೆ ರವಾನಿಸಲಾಯಿತು.</p>.<p>ಲೆ.ಜ. ಬೇವೂರ್: ನೂತನ ಪ್ರಧಾನ ದಂಡನಾಯಕರು</p>.<p>ನವದೆಹಲಿ, ಜ. 3– ಲೆ.ಜ. ಗೋಪಾಲಗುರುನಾಥ ಬೇವೂರ್ ಅವರನ್ನು ಭಾರತ ಸೈನ್ಯದ ನೂತನ ಪ್ರಧಾನ<br />ದಂಡನಾಯಕರನ್ನಾಗಿ ನೇಮಿಸಲಾಗಿದೆ.</p>.<p>ಜನರಲ್ ಪದವಿ ಸಹಿತ ಅವರು ಜನವರಿ 15ರಂದು ಫೀಲ್ಡ್ ಮಾರ್ಷಲ್ ಸ್ಯಾಂ ಮಾಣೆಕ್ ಷಾ ಅವರಿಂದ ಅಧಿಕಾರ ಸ್ವೀಕರಿಸುವರೆಂದು ರಕ್ಷಣಾ ಸಚಿವ ಶಾಖೆ ಇಂದು ಪ್ರಕಟಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>