ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ, 4–1–1973

Last Updated 3 ಜನವರಿ 2023, 19:45 IST
ಅಕ್ಷರ ಗಾತ್ರ

ಪ್ರಧಾನಿಗೆ ರಾಜ್ಯದ ಪತ್ರ: ಬರಗಾಲ ನಿವಾರಣೆಗೆ 150 ಕೋಟಿ ಬೃಹತ್‌ ಕಾರ್ಯಕ್ರಮ

ಬೆಂಗಳೂರು, ಜ. 3– ಬರಗಾಲದಿಂದ ತೀವ್ರ ತೊಂದರೆಗೊಳಗಾದ ಜನತೆಗೆ ಎಲ್ಲ ವಿಧದ ಸಹಾಯ ಮಾಡಲು ಸರ್ಕಾರ ಈವರೆಗೆ ಕಂಡರಿಯದ ಭಾರೀ ಪ್ರಮಾಣದ ಪರಿಹಾರ ಕಾರ್ಯಕ್ರಮವನ್ನು ರೂಪಿಸಿ ಸಹಾಯಕ್ಕಾಗಿ ಪ್ರಧಾನಮಂತ್ರಿಯವರಿಗೆ ಕಳುಹಿಸಿದೆ.

ಸುಮಾರು 150 ಕೋಟಿ ಕಾರ್ಯಕ್ರಮದ ವಿವರಗಳನ್ನು ಒಳಗೊಂಡ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಬರೆದಿರುವ ಪತ್ರವನ್ನು ಇಂದೇ ಸಚಿವ ಸಂಪುಟದ ಸಭೆಯ ನಂತರ ದೆಹಲಿಗೆ ರವಾನಿಸಲಾಯಿತು.

ಲೆ.ಜ. ಬೇವೂರ್‌: ನೂತನ ಪ್ರಧಾನ ದಂಡನಾಯಕರು

ನವದೆಹಲಿ, ಜ. 3– ಲೆ.ಜ. ಗೋಪಾಲಗುರುನಾಥ ಬೇವೂರ್‌ ಅವರನ್ನು ಭಾರತ ಸೈನ್ಯದ ನೂತನ ಪ್ರಧಾನ
ದಂಡನಾಯಕರನ್ನಾಗಿ ನೇಮಿಸಲಾಗಿದೆ.

ಜನರಲ್‌ ಪದವಿ ಸಹಿತ ಅವರು ಜನವರಿ 15ರಂದು ಫೀಲ್ಡ್‌ ಮಾರ್ಷಲ್‌ ಸ್ಯಾಂ ಮಾಣೆಕ್‌ ಷಾ ಅವರಿಂದ ಅಧಿಕಾರ ಸ್ವೀಕರಿಸುವರೆಂದು ರಕ್ಷಣಾ ಸಚಿವ ಶಾಖೆ ಇಂದು ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT