<p><strong>ಮುಂದಿನ ವಾರದಲ್ಲಿ ಪಿಎಸ್ಪಿ–ಎಸ್ಎಸ್ಪಿ ವಿಲೀನದ ಘೋಷಣೆ</strong></p>.<p><strong>ಬೆಂಗಳೂರು, ಜೂನ್ 4– </strong>ಪ್ರಜಾ ಸೋಷಲಿಸ್ಟ್ ಪಕ್ಷ– ಸಂಯುಕ್ತ ಸೋಷಲಿಸ್ಟ್ ಪಕ್ಷಗಳ ವಿಲೀನ ಮುಂದಿನ ವಾರ ನಡೆಯಲಿದೆ. ವಿಲೀನದಿಂದ ಉದ್ಭವಿಸುವ ಪಕ್ಷದ ಹೆಸರು ‘ಸೋಷಲಿಸ್ಟ್ ಪಕ್ಷ’.</p>.<p>ಈ ವಿಷಯವನ್ನು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದ ಸಂಯುಕ್ತ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಅವರು ವಿಲೀನಕ್ಕೆ ಆಧಾರವಾದ ಕರಡು ಒಪ್ಪಂದ ಅಂತಿಮವಾಗಿ ಸಿದ್ಧವಾಗಿದೆಯೆಂದೂ, ಮುಂದಿನ ವಾರ ದೆಹಲಿಯಲ್ಲಿ ಎರಡೂ ಪಕ್ಷಗಳ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿ ಹಾಕುವರೆಂದೂ ತಿಳಿಸಿದರು.</p>.<p><strong>ರೈಲುಗಳ ವಿಳಂಬಕ್ಕೆ ಕಾರಣರಾದವರಿಗೆ ಶಿಕ್ಷೆ: ಕೆಂಗಲ್ ಎಚ್ಚರಿಕೆ</strong></p>.<p><strong>ನವದೆಹಲಿ, ಜೂನ್ 4– </strong>ರೈಲುಗಳ ವಿಳಂಬ ಸಂಚಾರಕ್ಕೆ ಕಾರಣರಾದವರನ್ನು ಶಿಕ್ಷಿಸಲಾಗುವುದೆಂದು ಕೇಂದ್ರ ರೈಲ್ವೆ<br />ಸಚಿವ ಕೆ. ಹನುಮಂತಯ್ಯನವರು ಇಂದು ಇಲ್ಲಿ ರೈಲ್ವೆ ನೌಕರರಿಗೆ ಎಚ್ಚರಿಕೆ ನೀಡಿದರು.</p>.<p>ವಲಯ ರೈಲ್ವೆಗಳು ಮತ್ತು ಉತ್ಪಾದನಾ ಘಟಕಗಳ ಜನರಲ್ ಮ್ಯಾನೇಜರುಗಳ ಮೂರು ದಿನಗಳ ಸಮ್ಮೇಳನ ಉದ್ಘಾಟಿಸಿದ ಅವರು ವೇಳಾಪಟ್ಟಿಗನುಗುಣವಾಗಿ ರೈಲುಗಳ ಸಂಚಾರಕ್ಕೆ ಸಕಲ ಯತ್ನಗಳನ್ನೂ ನಡೆಸುವಂತೆ ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂದಿನ ವಾರದಲ್ಲಿ ಪಿಎಸ್ಪಿ–ಎಸ್ಎಸ್ಪಿ ವಿಲೀನದ ಘೋಷಣೆ</strong></p>.<p><strong>ಬೆಂಗಳೂರು, ಜೂನ್ 4– </strong>ಪ್ರಜಾ ಸೋಷಲಿಸ್ಟ್ ಪಕ್ಷ– ಸಂಯುಕ್ತ ಸೋಷಲಿಸ್ಟ್ ಪಕ್ಷಗಳ ವಿಲೀನ ಮುಂದಿನ ವಾರ ನಡೆಯಲಿದೆ. ವಿಲೀನದಿಂದ ಉದ್ಭವಿಸುವ ಪಕ್ಷದ ಹೆಸರು ‘ಸೋಷಲಿಸ್ಟ್ ಪಕ್ಷ’.</p>.<p>ಈ ವಿಷಯವನ್ನು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದ ಸಂಯುಕ್ತ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಅವರು ವಿಲೀನಕ್ಕೆ ಆಧಾರವಾದ ಕರಡು ಒಪ್ಪಂದ ಅಂತಿಮವಾಗಿ ಸಿದ್ಧವಾಗಿದೆಯೆಂದೂ, ಮುಂದಿನ ವಾರ ದೆಹಲಿಯಲ್ಲಿ ಎರಡೂ ಪಕ್ಷಗಳ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿ ಹಾಕುವರೆಂದೂ ತಿಳಿಸಿದರು.</p>.<p><strong>ರೈಲುಗಳ ವಿಳಂಬಕ್ಕೆ ಕಾರಣರಾದವರಿಗೆ ಶಿಕ್ಷೆ: ಕೆಂಗಲ್ ಎಚ್ಚರಿಕೆ</strong></p>.<p><strong>ನವದೆಹಲಿ, ಜೂನ್ 4– </strong>ರೈಲುಗಳ ವಿಳಂಬ ಸಂಚಾರಕ್ಕೆ ಕಾರಣರಾದವರನ್ನು ಶಿಕ್ಷಿಸಲಾಗುವುದೆಂದು ಕೇಂದ್ರ ರೈಲ್ವೆ<br />ಸಚಿವ ಕೆ. ಹನುಮಂತಯ್ಯನವರು ಇಂದು ಇಲ್ಲಿ ರೈಲ್ವೆ ನೌಕರರಿಗೆ ಎಚ್ಚರಿಕೆ ನೀಡಿದರು.</p>.<p>ವಲಯ ರೈಲ್ವೆಗಳು ಮತ್ತು ಉತ್ಪಾದನಾ ಘಟಕಗಳ ಜನರಲ್ ಮ್ಯಾನೇಜರುಗಳ ಮೂರು ದಿನಗಳ ಸಮ್ಮೇಳನ ಉದ್ಘಾಟಿಸಿದ ಅವರು ವೇಳಾಪಟ್ಟಿಗನುಗುಣವಾಗಿ ರೈಲುಗಳ ಸಂಚಾರಕ್ಕೆ ಸಕಲ ಯತ್ನಗಳನ್ನೂ ನಡೆಸುವಂತೆ ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>