<p><strong>ಆದಾಯ ತೆರಿಗೆಗೆ ಕೃಷಿ ವರಮಾನ ಸೇರಿಸಲು ರಾಜ್ಯಗಳ ವಿರೋಧ</strong></p>.<p><strong>ನವದೆಹಲಿ, ಅ. 12– </strong>ಆದಾಯ ತೆರಿಗೆಯೊಡನೆ ಕೃಷಿ ಆದಾಯದ ತೆರಿಗೆಯನ್ನು ವಿಲೀನಗೊಳಿಸಿದರೆ ರಾಜ್ಯಗಳ ಆದಾಯದ ಸಂಪನ್ಮೂಲಗಳು ಕುಗ್ಗುವುದರ ಜೊತೆಗೆ ಅಂತಹ ಕ್ರಮವು ತಮ್ಮ ಸ್ವಾಯತ್ತತೆಯನ್ನು ಅತಿಕ್ರಮಿಸುವುದರಿಂದ ಆ ಸಂಬಂಧದ ಕೇಂದ್ರದ ಸಲಹೆಯನ್ನು ಇಂದು ಮುಖ್ಯಮಂತ್ರಿಗಳು ಸಾಮಾನ್ಯವಾಗಿ ವಿರೋಧಿಸಿದರು.</p>.<p>ಕೇಂದ್ರ ಹಣಕಾಸು ಸಚಿವ ಶ್ರೀ ಚವಾಣರು ಕರೆದಿರುವ ತಮ್ಮ ಒಂದು ದಿನದ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳು ಮಾತನಾಡಿ, ಕೃಷಿ ಆದಾಯ ತೆರಿಗೆ ವಿಧಿಸುವ ತತ್ವವನ್ನು ಬಹುಮಟ್ಟಿಗೆ ಒಪ್ಪಿದರೂ ಅದರ ಅಧಿಕಾರವನ್ನು ರಾಜ್ಯಗಳಿಗ ಬಿಡುವಂತೆ ಅಪೇಕ್ಷೆ ವ್ಯಕ್ತಪಡಿಸಿದರೆಂದು ಗೊತ್ತಾಗಿದೆ.</p>.<p><strong>ತಜ್ಞ ಸಮಿತಿಯ ಅಧ್ಯಯನಕ್ಕೆ</strong></p>.<p><strong>ನವದೆಹಲಿ, ಅ. 12– </strong>ಆದಾಯ ತೆರಿಗೆ ವಿಧಿಸುವಾಗ ಕೃಷಿ ವರಮಾನ ಸೇರಿಸಬೇಕೆಂಬ ಕೇಂದ್ರ ಸರ್ಕಾರದ ಸಲಹೆಯ ಎಲ್ಲ ರೀತಿಯ ಸಾಧಕ–ಬಾಧಕಗಳನ್ನೂ ಕೂಲಂಕಷವಾಗಿ ತಜ್ಞರ ಸಮಿತಿಯೊಂದು ಪರಿಶೀಲಿಸ<br />ಬೇಕೆಂದು ಮುಖ್ಯಮಂತ್ರಿಗಳ ಸಮ್ಮೇಳನ ಇಂದು ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆದಾಯ ತೆರಿಗೆಗೆ ಕೃಷಿ ವರಮಾನ ಸೇರಿಸಲು ರಾಜ್ಯಗಳ ವಿರೋಧ</strong></p>.<p><strong>ನವದೆಹಲಿ, ಅ. 12– </strong>ಆದಾಯ ತೆರಿಗೆಯೊಡನೆ ಕೃಷಿ ಆದಾಯದ ತೆರಿಗೆಯನ್ನು ವಿಲೀನಗೊಳಿಸಿದರೆ ರಾಜ್ಯಗಳ ಆದಾಯದ ಸಂಪನ್ಮೂಲಗಳು ಕುಗ್ಗುವುದರ ಜೊತೆಗೆ ಅಂತಹ ಕ್ರಮವು ತಮ್ಮ ಸ್ವಾಯತ್ತತೆಯನ್ನು ಅತಿಕ್ರಮಿಸುವುದರಿಂದ ಆ ಸಂಬಂಧದ ಕೇಂದ್ರದ ಸಲಹೆಯನ್ನು ಇಂದು ಮುಖ್ಯಮಂತ್ರಿಗಳು ಸಾಮಾನ್ಯವಾಗಿ ವಿರೋಧಿಸಿದರು.</p>.<p>ಕೇಂದ್ರ ಹಣಕಾಸು ಸಚಿವ ಶ್ರೀ ಚವಾಣರು ಕರೆದಿರುವ ತಮ್ಮ ಒಂದು ದಿನದ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳು ಮಾತನಾಡಿ, ಕೃಷಿ ಆದಾಯ ತೆರಿಗೆ ವಿಧಿಸುವ ತತ್ವವನ್ನು ಬಹುಮಟ್ಟಿಗೆ ಒಪ್ಪಿದರೂ ಅದರ ಅಧಿಕಾರವನ್ನು ರಾಜ್ಯಗಳಿಗ ಬಿಡುವಂತೆ ಅಪೇಕ್ಷೆ ವ್ಯಕ್ತಪಡಿಸಿದರೆಂದು ಗೊತ್ತಾಗಿದೆ.</p>.<p><strong>ತಜ್ಞ ಸಮಿತಿಯ ಅಧ್ಯಯನಕ್ಕೆ</strong></p>.<p><strong>ನವದೆಹಲಿ, ಅ. 12– </strong>ಆದಾಯ ತೆರಿಗೆ ವಿಧಿಸುವಾಗ ಕೃಷಿ ವರಮಾನ ಸೇರಿಸಬೇಕೆಂಬ ಕೇಂದ್ರ ಸರ್ಕಾರದ ಸಲಹೆಯ ಎಲ್ಲ ರೀತಿಯ ಸಾಧಕ–ಬಾಧಕಗಳನ್ನೂ ಕೂಲಂಕಷವಾಗಿ ತಜ್ಞರ ಸಮಿತಿಯೊಂದು ಪರಿಶೀಲಿಸ<br />ಬೇಕೆಂದು ಮುಖ್ಯಮಂತ್ರಿಗಳ ಸಮ್ಮೇಳನ ಇಂದು ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>