<p><strong>ಏಳು ಜನ ಸಾಹಿತಿಗಳು, ಸಮಾಜಸೇವಕರಿಗೆ ಆಜೀವ ಗೌರವ ಸಂಭಾವನೆ</strong></p>.<p><strong>ಬೆಂಗಳೂರು, ಏ. 9– </strong>ರಾಜ್ಯದ ಏಳು ಮಂದಿ ಸಾಹಿತಿಗಳು, ಸಮಾಜಸೇವಕರಿಗೆ ಆಜೀವ ಗೌರವ ಸಂಭಾವನೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.</p>.<p>ಮಂತ್ರಿಮಂಡಲ ಇಂದು ಕೈಗೊಂಡ ನಿರ್ಧಾರದಂತೆ ತಿಂಗಳಿಗೆ 250 ರೂ. ಗೌರವ ಸಂಭಾವನೆ ನೀಡಲಾಗುವುದು. ಕವಿ ಶ್ರೀ ದ.ರಾ.ಬೇಂದ್ರೆಯವರ ಸಂಭಾವನೆಯನ್ನು 500 ರೂ.ಗೆಹೆಚ್ಚಿಸಲಾಗುವುದು.</p>.<p>ನೇತ್ರದಾನಿ ಡಾ. ಎಂ.ಸಿ.ಮೋದಿ, ಸಾಹಿತಿಗಳಾದ ಶ್ರೀ ಬೆಟಗೇರಿ ಕೃಷ್ಣ ಶರ್ಮಾ, ಶ್ರೀ ವೀರಕೇಸರಿ ಸೀತಾರಾಮ ಶಾಸ್ತ್ರಿ ಮತ್ತು ಶ್ರೀ ಸಿದ್ಧವನಹಳ್ಳಿ ಕೃಷ್ಣ ಶರ್ಮಾ, ಮಹರ್ಷಿ ಗಜಾನನ ಶರ್ಮಾ ಅವರುಗಳಿಗೆ ಗೌರವ ಸಂಭಾವನೆ ನೀಡಲಾಗುವುದು.</p>.<p><strong>ತಾರಕ ಯೋಜನೆಗೆ ಸಂಪುಟದ ಒಪ್ಪಿಗೆ</strong></p>.<p><strong>ಬೆಂಗಳೂರು, ಏ. 9– </strong>ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ನಿರ್ಮಾಣವಾಗುವ ಒಂದು ಕೋಟಿ ಎಪ್ಪತ್ತು ಲಕ್ಷ ರೂ. ವೆಚ್ಚದ ತಾರಕ ನೀರಾವರಿ ಯೋಜನೆಗೆ ಮಂತ್ರಿಮಂಡಲ ಇಂದು ಮಂಜೂರಾತಿ ನೀಡಿತು.</p>.<p>ಕಬಿನಿ ನದಿಗೆ ತಾರಕ ಉಪನದಿ. 18 ಸಾವಿರ ಎಕರೆಗೆ ನೀರುಣಿಸಲಿರುವ ಈ ಯೋಜನೆಯಿಂದ 2,268 ಎಕರೆ ಮುಳುಗಡೆಯಾಗಲಿದೆ. ಮುಳುಗಡೆಯಾಗಲಿರುವ ಜಮೀನಿನಲ್ಲಿ 40 ಎಕರೆ ನದಿ ನೀರಿನಿಂದ ಸಾಗುವಳಿಯಾಗುತ್ತಿರುವ ಭೂಮಿ, ಉಳಿದುದು ಅರಣ್ಯಭೂಮಿ. ಗ್ರಾಮಗಳಾಗಲೀ ಮನೆಗಳಾಗಲೀ<br />ಮುಳುಗಡೆಯಾಗುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಏಳು ಜನ ಸಾಹಿತಿಗಳು, ಸಮಾಜಸೇವಕರಿಗೆ ಆಜೀವ ಗೌರವ ಸಂಭಾವನೆ</strong></p>.<p><strong>ಬೆಂಗಳೂರು, ಏ. 9– </strong>ರಾಜ್ಯದ ಏಳು ಮಂದಿ ಸಾಹಿತಿಗಳು, ಸಮಾಜಸೇವಕರಿಗೆ ಆಜೀವ ಗೌರವ ಸಂಭಾವನೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.</p>.<p>ಮಂತ್ರಿಮಂಡಲ ಇಂದು ಕೈಗೊಂಡ ನಿರ್ಧಾರದಂತೆ ತಿಂಗಳಿಗೆ 250 ರೂ. ಗೌರವ ಸಂಭಾವನೆ ನೀಡಲಾಗುವುದು. ಕವಿ ಶ್ರೀ ದ.ರಾ.ಬೇಂದ್ರೆಯವರ ಸಂಭಾವನೆಯನ್ನು 500 ರೂ.ಗೆಹೆಚ್ಚಿಸಲಾಗುವುದು.</p>.<p>ನೇತ್ರದಾನಿ ಡಾ. ಎಂ.ಸಿ.ಮೋದಿ, ಸಾಹಿತಿಗಳಾದ ಶ್ರೀ ಬೆಟಗೇರಿ ಕೃಷ್ಣ ಶರ್ಮಾ, ಶ್ರೀ ವೀರಕೇಸರಿ ಸೀತಾರಾಮ ಶಾಸ್ತ್ರಿ ಮತ್ತು ಶ್ರೀ ಸಿದ್ಧವನಹಳ್ಳಿ ಕೃಷ್ಣ ಶರ್ಮಾ, ಮಹರ್ಷಿ ಗಜಾನನ ಶರ್ಮಾ ಅವರುಗಳಿಗೆ ಗೌರವ ಸಂಭಾವನೆ ನೀಡಲಾಗುವುದು.</p>.<p><strong>ತಾರಕ ಯೋಜನೆಗೆ ಸಂಪುಟದ ಒಪ್ಪಿಗೆ</strong></p>.<p><strong>ಬೆಂಗಳೂರು, ಏ. 9– </strong>ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ನಿರ್ಮಾಣವಾಗುವ ಒಂದು ಕೋಟಿ ಎಪ್ಪತ್ತು ಲಕ್ಷ ರೂ. ವೆಚ್ಚದ ತಾರಕ ನೀರಾವರಿ ಯೋಜನೆಗೆ ಮಂತ್ರಿಮಂಡಲ ಇಂದು ಮಂಜೂರಾತಿ ನೀಡಿತು.</p>.<p>ಕಬಿನಿ ನದಿಗೆ ತಾರಕ ಉಪನದಿ. 18 ಸಾವಿರ ಎಕರೆಗೆ ನೀರುಣಿಸಲಿರುವ ಈ ಯೋಜನೆಯಿಂದ 2,268 ಎಕರೆ ಮುಳುಗಡೆಯಾಗಲಿದೆ. ಮುಳುಗಡೆಯಾಗಲಿರುವ ಜಮೀನಿನಲ್ಲಿ 40 ಎಕರೆ ನದಿ ನೀರಿನಿಂದ ಸಾಗುವಳಿಯಾಗುತ್ತಿರುವ ಭೂಮಿ, ಉಳಿದುದು ಅರಣ್ಯಭೂಮಿ. ಗ್ರಾಮಗಳಾಗಲೀ ಮನೆಗಳಾಗಲೀ<br />ಮುಳುಗಡೆಯಾಗುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>