<p><strong>ಸಣ್ಣ ಕೈಗಾರಿಕೆ ಉತ್ಪನ್ನಗಳಿಗೆ ಎಕ್ಸೈಜ್ ಸುಂಕ ರಿಯಾಯಿತಿ</strong><br /><strong>ನವದೆಹಲಿ, ಮೇ 1–</strong> ಇಂದು ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸಿದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು 1970– 71ನೇ ಸಾಲಿನ ಆಯವ್ಯಯ ಮುಂಗಡಪತ್ರದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಪ್ರಕಟಿಸಿದರು.</p>.<p>ಪರಿಣಾಮವಾಗಿ ಎಕ್ಸೈಜ್ ಸುಂಕದಿಂದ ಸರ್ಕಾರಕ್ಕೆ ಬರಬೇಕಾಗಿರುವ ಆದಾಯದಲ್ಲಿ ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿ ಖೋತಾ ಆಗಲಿದೆ.</p>.<p>ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳಿಂದಾಗಿ ಉದ್ಭವಿಸಿರಬಹುದಾದ ನಿಜವಾದ ಕಷ್ಟಗಳನ್ನು ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಸಣ್ಣಪುಟ್ಟ ಬದಲಾವಣೆಗಳನ್ನು ಪ್ರಕಟಿಸಿದ ಶ್ರೀಮತಿ ಗಾಂಧಿ ತಿಳಿಸಿದರು.</p>.<p>ಸಣ್ಣ ಕೈಗಾರಿಕೆಗಳಲ್ಲಿನ ತಯಾರಿಕೆಗಾರರು ಎದುರಿಸಬಹುದಾದ ಕಷ್ಟನಷ್ಟಗಳನ್ನು ನಿವಾರಿಸುವುದೇ ಪರೋಕ್ಷ ತೆರಿಗೆಗಳಲ್ಲಿ ಮಾರ್ಪಾಟು ಮಾಡಿರುವುದರ ಮುಖ್ಯ ಉದ್ದೇಶವೆಂದು ಶ್ರೀಮತಿ ಗಾಂಧಿ ನುಡಿದರು.</p>.<p><strong>ಆಸ್ತಿಪಾಸ್ತಿ ಹಕ್ಕು ತೆಗೆದುಹಾಕಬೇಕೆಂಬ ನಿರ್ಣಯ ತಿರಸ್ಕೃತ</strong><br /><strong>ನವದೆಹಲಿ, ಮೇ 1–</strong> ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಿಂದ ಆಸ್ತಿಪಾಸ್ತಿ ಹಕ್ಕನ್ನು ತೆಗೆದುಹಾಕಬೇಕೆಂಬ ಪಿ.ರಾಮಮೂರ್ತಿ (ಮಾರ್ಕ್ಸ್ವಾದಿ ಕಮ್ಯುನಿಸ್ಟ್) ಅವರ ಖಾಸಗಿ ನಿರ್ಣಯವನ್ನು ಲೋಕಸಭೆ ಇಂದು ಧ್ವನಿಮತದಿಂದ ತಿರಸ್ಕರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಣ್ಣ ಕೈಗಾರಿಕೆ ಉತ್ಪನ್ನಗಳಿಗೆ ಎಕ್ಸೈಜ್ ಸುಂಕ ರಿಯಾಯಿತಿ</strong><br /><strong>ನವದೆಹಲಿ, ಮೇ 1–</strong> ಇಂದು ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸಿದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು 1970– 71ನೇ ಸಾಲಿನ ಆಯವ್ಯಯ ಮುಂಗಡಪತ್ರದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಪ್ರಕಟಿಸಿದರು.</p>.<p>ಪರಿಣಾಮವಾಗಿ ಎಕ್ಸೈಜ್ ಸುಂಕದಿಂದ ಸರ್ಕಾರಕ್ಕೆ ಬರಬೇಕಾಗಿರುವ ಆದಾಯದಲ್ಲಿ ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿ ಖೋತಾ ಆಗಲಿದೆ.</p>.<p>ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳಿಂದಾಗಿ ಉದ್ಭವಿಸಿರಬಹುದಾದ ನಿಜವಾದ ಕಷ್ಟಗಳನ್ನು ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಸಣ್ಣಪುಟ್ಟ ಬದಲಾವಣೆಗಳನ್ನು ಪ್ರಕಟಿಸಿದ ಶ್ರೀಮತಿ ಗಾಂಧಿ ತಿಳಿಸಿದರು.</p>.<p>ಸಣ್ಣ ಕೈಗಾರಿಕೆಗಳಲ್ಲಿನ ತಯಾರಿಕೆಗಾರರು ಎದುರಿಸಬಹುದಾದ ಕಷ್ಟನಷ್ಟಗಳನ್ನು ನಿವಾರಿಸುವುದೇ ಪರೋಕ್ಷ ತೆರಿಗೆಗಳಲ್ಲಿ ಮಾರ್ಪಾಟು ಮಾಡಿರುವುದರ ಮುಖ್ಯ ಉದ್ದೇಶವೆಂದು ಶ್ರೀಮತಿ ಗಾಂಧಿ ನುಡಿದರು.</p>.<p><strong>ಆಸ್ತಿಪಾಸ್ತಿ ಹಕ್ಕು ತೆಗೆದುಹಾಕಬೇಕೆಂಬ ನಿರ್ಣಯ ತಿರಸ್ಕೃತ</strong><br /><strong>ನವದೆಹಲಿ, ಮೇ 1–</strong> ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಿಂದ ಆಸ್ತಿಪಾಸ್ತಿ ಹಕ್ಕನ್ನು ತೆಗೆದುಹಾಕಬೇಕೆಂಬ ಪಿ.ರಾಮಮೂರ್ತಿ (ಮಾರ್ಕ್ಸ್ವಾದಿ ಕಮ್ಯುನಿಸ್ಟ್) ಅವರ ಖಾಸಗಿ ನಿರ್ಣಯವನ್ನು ಲೋಕಸಭೆ ಇಂದು ಧ್ವನಿಮತದಿಂದ ತಿರಸ್ಕರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>