<p><strong>ರಾಜಕೀಯಕ್ಕೆ ಅನ್ವಯಿಸದ ಹೊಸ ರೀತಿಯ ಸ್ಥಾನಬದ್ಧತೆ ಶಾಸನ ಜಾರಿಗೆ ತರಲು ಕ್ರಮ</strong></p>.<p>ನವದೆಹಲಿ, ಡಿ. 17– ವರ್ಷಾಂತ್ಯದ ನಂತರವೂ ಮುನ್ನೆಚ್ಚರಿಕೆ ಸ್ಥಾನಬದ್ಧತೆ ಶಾಸನವನ್ನು ಮಾರ್ಪಟ್ಟ ರೀತಿಯಲ್ಲಿ ಉಳಿಸಿಕೊಂಡು ಬರುವಂಥ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ತೀವ್ರವಾಗಿ ಆಲೋಚಿಸುತ್ತಿದೆ. ಈ ತಿಂಗಳ ಅಂತ್ಯಕ್ಕೆ ಶಾಸನದ ಅವಧಿ ಮುಗಿಯುತ್ತದೆ.</p>.<p>ಮಾರ್ಪಟ್ಟ ಶಾಸನವು ಪಶ್ಚಿಮ ಬಂಗಾಳವೂ ಸೇರಿ, ದೇಶದ ಈಶಾನ್ಯ ಭಾಗಗಳಿಗೆ ಅನ್ವಯವಾಗುವುದು ಮತ್ತು ಭಾರತದ ಭದ್ರತೆಗೆ ಭಂಗ ತರುವಂಥ ಎಲ್ಲ ಪ್ರಕರಣಗಳಿಗೂ ಅನ್ವಯಿಸುವುದು.</p>.<p><strong>ಮುಖ್ಯಮಂತ್ರಿಗಳ ವಿರುದ್ಧ ಕ್ಷಾಮ ಪರಿಹಾರ ನಿಧಿಯ ದುರುಪಯೋಗ ಆರೋಪ</strong></p>.<p>ಬೆಂಗಳೂರು, ಡಿ. 17– ತಮ್ಮ ಹಿಂಬಾಲಕರು ಅಹಮದಾಬಾದ್ ಕಾಂಗ್ರೆಸ್ ಅಧಿವೇಶನಕ್ಕೆ ಹೋಗುವುದಕ್ಕಾಗಿ ಸಹಾಯ ಮಾಡಲು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಕ್ಷಾಮ ಪರಿಹಾರ ನಿಧಿಯನ್ನು ‘ದುರುಪಯೋಗ ಮಾಡಿದ್ದಾರೆ’ ಎಂದು ಪ್ರಧಾನಿ ಕಾಂಗ್ರೆಸ್ಸಿನ ಪ್ರಮುಖ ವ್ಯವಸ್ಥಾಪಕರಲ್ಲಿ ಒಬ್ಬರಾದ ಶ್ರೀ ಎಂ.ವಿ. ಕೃಷ್ಣಪ್ಪನವರು ಆಪಾದಿಸಿದ್ದಾರೆ.</p>.<p>ಬಿಜಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಹೊಸದಾಗಿ ಕೆಲಸ ನಡೆಸದೆ ಹಳೆಯ ತಾಕುಗಳನ್ನೇ ಮತ್ತೆ ಅಳೆದು ಕ್ಷಾಮ ಪರಿಹಾರಕ್ಕಾಗಿ ಕೇಂದ್ರ ಹಣದಿಂದ ಪಾವತಿ ಮಾಡಲಾಗಿದೆಯೆಂದು ತಮಗೆ ವರದಿಗಳು ಬಂದಿವೆಯೆಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p><strong>ಕೆಲವೇ ಗುಂಪುಗಳ ಕೈಯಲ್ಲಿ ವ್ಯಾಪಕ ಕೈಗಾರಿಕೆ ಸಲ್ಲದು: ಫಕ್ರುದ್ದೀನ್</strong></p>.<p>ನವದೆಹಲಿ, ಡಿ. 17– ಕೆಲವೇ ಜನರ ಕೈಯಲ್ಲಿ ಸಂಪತ್ತು ಮತ್ತು ಆರ್ಥಿಕ ಶಕ್ತಿ ಕೇಂದ್ರೀಕೃತವಾಗುವುದನ್ನು ತಪ್ಪಿಸುವುದೇ ಏಕಸ್ವಾಮ್ಯ ಮತ್ತು ನಿರ್ಬಂಧಿತ ವಾಣಿಜ್ಯ ಪದ್ಧತಿ ಮಸೂದೆಯ ಮೂಲೋದ್ದೇಶ ವಾಗಿದೆ ಎಂದು ಕೇಂದ್ರ ಕೈಗಾರಿಕಾಭಿವೃದ್ಧಿ ಸಚಿವ ಶ್ರೀ ಫಕ್ರುದ್ದೀನ್ ಅಲಿ ಅಹಮದ್ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ವ್ಯಾಪಕ ಕೈಗಾರಿಕೆಗಳಲ್ಲಿ ಕೆಲವೇ ಗುಂಪುಗಳವರು ಹರಡುವುದನ್ನು ತಪ್ಪಿಸುವುದೇ ಈ ಮಸೂದೆಯ ಗುರಿ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜಕೀಯಕ್ಕೆ ಅನ್ವಯಿಸದ ಹೊಸ ರೀತಿಯ ಸ್ಥಾನಬದ್ಧತೆ ಶಾಸನ ಜಾರಿಗೆ ತರಲು ಕ್ರಮ</strong></p>.<p>ನವದೆಹಲಿ, ಡಿ. 17– ವರ್ಷಾಂತ್ಯದ ನಂತರವೂ ಮುನ್ನೆಚ್ಚರಿಕೆ ಸ್ಥಾನಬದ್ಧತೆ ಶಾಸನವನ್ನು ಮಾರ್ಪಟ್ಟ ರೀತಿಯಲ್ಲಿ ಉಳಿಸಿಕೊಂಡು ಬರುವಂಥ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ತೀವ್ರವಾಗಿ ಆಲೋಚಿಸುತ್ತಿದೆ. ಈ ತಿಂಗಳ ಅಂತ್ಯಕ್ಕೆ ಶಾಸನದ ಅವಧಿ ಮುಗಿಯುತ್ತದೆ.</p>.<p>ಮಾರ್ಪಟ್ಟ ಶಾಸನವು ಪಶ್ಚಿಮ ಬಂಗಾಳವೂ ಸೇರಿ, ದೇಶದ ಈಶಾನ್ಯ ಭಾಗಗಳಿಗೆ ಅನ್ವಯವಾಗುವುದು ಮತ್ತು ಭಾರತದ ಭದ್ರತೆಗೆ ಭಂಗ ತರುವಂಥ ಎಲ್ಲ ಪ್ರಕರಣಗಳಿಗೂ ಅನ್ವಯಿಸುವುದು.</p>.<p><strong>ಮುಖ್ಯಮಂತ್ರಿಗಳ ವಿರುದ್ಧ ಕ್ಷಾಮ ಪರಿಹಾರ ನಿಧಿಯ ದುರುಪಯೋಗ ಆರೋಪ</strong></p>.<p>ಬೆಂಗಳೂರು, ಡಿ. 17– ತಮ್ಮ ಹಿಂಬಾಲಕರು ಅಹಮದಾಬಾದ್ ಕಾಂಗ್ರೆಸ್ ಅಧಿವೇಶನಕ್ಕೆ ಹೋಗುವುದಕ್ಕಾಗಿ ಸಹಾಯ ಮಾಡಲು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಕ್ಷಾಮ ಪರಿಹಾರ ನಿಧಿಯನ್ನು ‘ದುರುಪಯೋಗ ಮಾಡಿದ್ದಾರೆ’ ಎಂದು ಪ್ರಧಾನಿ ಕಾಂಗ್ರೆಸ್ಸಿನ ಪ್ರಮುಖ ವ್ಯವಸ್ಥಾಪಕರಲ್ಲಿ ಒಬ್ಬರಾದ ಶ್ರೀ ಎಂ.ವಿ. ಕೃಷ್ಣಪ್ಪನವರು ಆಪಾದಿಸಿದ್ದಾರೆ.</p>.<p>ಬಿಜಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಹೊಸದಾಗಿ ಕೆಲಸ ನಡೆಸದೆ ಹಳೆಯ ತಾಕುಗಳನ್ನೇ ಮತ್ತೆ ಅಳೆದು ಕ್ಷಾಮ ಪರಿಹಾರಕ್ಕಾಗಿ ಕೇಂದ್ರ ಹಣದಿಂದ ಪಾವತಿ ಮಾಡಲಾಗಿದೆಯೆಂದು ತಮಗೆ ವರದಿಗಳು ಬಂದಿವೆಯೆಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p><strong>ಕೆಲವೇ ಗುಂಪುಗಳ ಕೈಯಲ್ಲಿ ವ್ಯಾಪಕ ಕೈಗಾರಿಕೆ ಸಲ್ಲದು: ಫಕ್ರುದ್ದೀನ್</strong></p>.<p>ನವದೆಹಲಿ, ಡಿ. 17– ಕೆಲವೇ ಜನರ ಕೈಯಲ್ಲಿ ಸಂಪತ್ತು ಮತ್ತು ಆರ್ಥಿಕ ಶಕ್ತಿ ಕೇಂದ್ರೀಕೃತವಾಗುವುದನ್ನು ತಪ್ಪಿಸುವುದೇ ಏಕಸ್ವಾಮ್ಯ ಮತ್ತು ನಿರ್ಬಂಧಿತ ವಾಣಿಜ್ಯ ಪದ್ಧತಿ ಮಸೂದೆಯ ಮೂಲೋದ್ದೇಶ ವಾಗಿದೆ ಎಂದು ಕೇಂದ್ರ ಕೈಗಾರಿಕಾಭಿವೃದ್ಧಿ ಸಚಿವ ಶ್ರೀ ಫಕ್ರುದ್ದೀನ್ ಅಲಿ ಅಹಮದ್ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ವ್ಯಾಪಕ ಕೈಗಾರಿಕೆಗಳಲ್ಲಿ ಕೆಲವೇ ಗುಂಪುಗಳವರು ಹರಡುವುದನ್ನು ತಪ್ಪಿಸುವುದೇ ಈ ಮಸೂದೆಯ ಗುರಿ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>