ಚಿಕ್ಕಮಗಳೂರು, ಆ. 9– ಆಹಾರ ಧಾನ್ಯ ಮತ್ತಿತರ ಅಗತ್ಯ ವಸ್ತುಗಳ ಕಾಳಸಂತೆಕೋರರನ್ನು ಬೀದಿ ಮೆರವಣಿಗೆ ಮಾಡಿಸಲಾಗುವುದು. ಇದರಿಂದ ಅವರು ಮಾಡುತ್ತಿರುವ ತಪ್ಪು ಎಷ್ಟು ಕರಾಳವಾದುದು ಎಂಬುದು ಅವರಿಗೆ ತಿಳಿಯುವುದು ಮಾತ್ರವಲ್ಲ, ಇತರರಿಗೂ ಇದರಿಂದ ಬುದ್ಧಿ ಬರುತ್ತದೆ ಎಂದು ರಾಜ್ಯದ ಆಹಾರ ಸಚಿವೆ ಇನಾನಾಜ್ ಅವರು ಇಂದು ಇಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.