<p><strong>ಸಚಿವರ ಹತೋಟಿ ಅಸಾಧ್ಯವಾದರೆ ಅರಸು ರಾಜೀನಾಮೆಗೆ ಒತ್ತಾಯ</strong></p><p><strong>ಬೆಂಗಳೂರು, ಡಿ. 1–</strong> ಪೌರಾಡಳಿತ ಸಚಿವ ಬಿ. ಬಸವಲಿಂಗಪ್ಪ ಅವರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಆಗದಿದ್ದರೆ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡ ಒತ್ತಾಯಿಸಿದ್ದಾರೆ. </p><p>ವಿದ್ಯಾರ್ಥಿಗಳ ಚಳವಳಿಯ ಸಂಬಂಧದಲ್ಲಿ ಮುಖ್ಯಮಂತ್ರಿಯವರು, ರಾಮನಗರದಲ್ಲಿ ವ್ಯಕ್ತಪಡಿಸಿದ ಪ್ರತಿಕ್ರಿಯೆಯ ನಂತರ, ರಾಜ್ಯದಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಚಳವಳಿ ಬೆಳೆದಿದೆ ಎಂದೂ, ಆ ಬಗ್ಗೆ ಏನೂ ಹೇಳದೆ ಅಸಡ್ಡೆ ಮನೋಭಾವ ತೋರಿದರೆ ಇಂದಿನ ಅನಾಹುತಕ್ಕೆ ಮುಖ್ಯಮಂತ್ರಿ ಅರಸು ಅವರೇ ಕಾರಣರಾಗಲಿದ್ದಾರೆ ಎಂದೂ ಅವರು ಹೇಳಿದರು. </p><p><strong>ನಗರದಲ್ಲಿ ಉದ್ರಿಕ್ತ ಗುಂಪಿನಿಂದ ಎರಡು ಬಸ್ಸುಗಳಿಗೆ ಬೆಂಕಿ: ಕಲ್ಲು ತೂರಾಟ</strong></p><p><strong>ಬೆಂಗಳೂರು, ಡಿ. 1–</strong> ವಿದ್ಯಾರ್ಥಿಗಳ ಒಂದು ಗುಂಪಿನವರು ಇಂದು ವಿಜಯ ಕಾಲೇಜಿನ ಬಳಿ ಸಾರಿಗೆ ಬಸ್ಸೊಂದಕ್ಕೆ ಬೆಂಕಿ ಹಚ್ಚಿದ ಹಾಗೂ ನಗರದ ಅನೇಕ ಕಡೆಗಳಲ್ಲಿ ಬಸ್ಸುಗಳಿಗೆ ಕಲ್ಲು ಹೊಡೆದ ಪ್ರಕರಣಗಳು ವರದಿಯಾಗಿವೆ. </p><p>ಮತ್ತೊಂದು ಗುಂಪು ಒಂದು ಚಿತ್ರಮಂದಿರಕ್ಕೆ ಕಲ್ಲು ಹೊಡೆದ ಪರಿಣಾಮವಾಗಿ ಮಂದಿರದ ಗಾಜುಗಳು ಪುಡಿಪುಡಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಚಿವರ ಹತೋಟಿ ಅಸಾಧ್ಯವಾದರೆ ಅರಸು ರಾಜೀನಾಮೆಗೆ ಒತ್ತಾಯ</strong></p><p><strong>ಬೆಂಗಳೂರು, ಡಿ. 1–</strong> ಪೌರಾಡಳಿತ ಸಚಿವ ಬಿ. ಬಸವಲಿಂಗಪ್ಪ ಅವರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಆಗದಿದ್ದರೆ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡ ಒತ್ತಾಯಿಸಿದ್ದಾರೆ. </p><p>ವಿದ್ಯಾರ್ಥಿಗಳ ಚಳವಳಿಯ ಸಂಬಂಧದಲ್ಲಿ ಮುಖ್ಯಮಂತ್ರಿಯವರು, ರಾಮನಗರದಲ್ಲಿ ವ್ಯಕ್ತಪಡಿಸಿದ ಪ್ರತಿಕ್ರಿಯೆಯ ನಂತರ, ರಾಜ್ಯದಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಚಳವಳಿ ಬೆಳೆದಿದೆ ಎಂದೂ, ಆ ಬಗ್ಗೆ ಏನೂ ಹೇಳದೆ ಅಸಡ್ಡೆ ಮನೋಭಾವ ತೋರಿದರೆ ಇಂದಿನ ಅನಾಹುತಕ್ಕೆ ಮುಖ್ಯಮಂತ್ರಿ ಅರಸು ಅವರೇ ಕಾರಣರಾಗಲಿದ್ದಾರೆ ಎಂದೂ ಅವರು ಹೇಳಿದರು. </p><p><strong>ನಗರದಲ್ಲಿ ಉದ್ರಿಕ್ತ ಗುಂಪಿನಿಂದ ಎರಡು ಬಸ್ಸುಗಳಿಗೆ ಬೆಂಕಿ: ಕಲ್ಲು ತೂರಾಟ</strong></p><p><strong>ಬೆಂಗಳೂರು, ಡಿ. 1–</strong> ವಿದ್ಯಾರ್ಥಿಗಳ ಒಂದು ಗುಂಪಿನವರು ಇಂದು ವಿಜಯ ಕಾಲೇಜಿನ ಬಳಿ ಸಾರಿಗೆ ಬಸ್ಸೊಂದಕ್ಕೆ ಬೆಂಕಿ ಹಚ್ಚಿದ ಹಾಗೂ ನಗರದ ಅನೇಕ ಕಡೆಗಳಲ್ಲಿ ಬಸ್ಸುಗಳಿಗೆ ಕಲ್ಲು ಹೊಡೆದ ಪ್ರಕರಣಗಳು ವರದಿಯಾಗಿವೆ. </p><p>ಮತ್ತೊಂದು ಗುಂಪು ಒಂದು ಚಿತ್ರಮಂದಿರಕ್ಕೆ ಕಲ್ಲು ಹೊಡೆದ ಪರಿಣಾಮವಾಗಿ ಮಂದಿರದ ಗಾಜುಗಳು ಪುಡಿಪುಡಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>