<p><strong>ಕಾನೂನು ಕಾಗದದ ಮೇಲೆ ಮಾತ್ರ: ಒಡೆಯರಿಂದ ಒಕ್ಕಲುಗಳ ಬೇಟೆ</strong></p><p><strong>ಬೆಂಗಳೂರು, ಜುಲೈ 2–</strong> ಗೇಣಿದಾರ ಬೆಳೆದ ಬೆಳೆ, ಜಮೀನ್ದಾರರಿಂದ ಕಟಾವು. ಗೇಣಿದಾರರನ್ನು ಹತ್ತಿರದ ಕಾಡಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಅವನಿಗೆ ಹೊಡೆತ.</p><p>–ರಾಜ್ಯದಲ್ಲಿ ಭೂಸುಧಾರಣೆ ತಿದ್ದುಪಡಿ ಶಾಸನ ಜಾರಿಗೆ ಬರಲು ಆರಂಭವಾಗುತ್ತಿದ್ದಂತೆ, ಸರ್ಕಾರಕ್ಕೆ ಪ್ರತಿದಿನ ಬರುತ್ತಿರುವ ಹತ್ತಾರು ಬಗೆಯ ದೂರುಗಳಲ್ಲಿ ಇದೊಂದು. ಇದು ಕಾರ್ಕಳ ತಾಲ್ಲೂಕಿನಿಂದ ಬಂದ ದೂರು.</p><p>ತಂತಿ ಹಾಗೂ ಪತ್ರಗಳ ಮೂಲಕ ಬರುವ ದೂರುಗಳನ್ನು ಕಂದಾಯ ಸಚಿವ ಶ್ರೀ ಎನ್. ಹುಚ್ಚಮಾಸ್ತಿಗೌಡ ಅವರು ತತ್ಕ್ಷಣ ಅವುಗಳನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸುತ್ತಿದ್ದಾರೆ. ದೂರುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡುತ್ತಿದ್ದಾರೆ.</p><p>***</p><p><strong>ಸ್ಪಷ್ಟಗುರಿಗಾಗಿ ಒಗ್ಗಟ್ಟಿನ ದುಡಿಮೆ ಏಳಿಗೆಗೆ ಹಾದಿ: ಹಿಂದುಳಿದವರಿಗೆ ಅರಸು ಕರೆ</strong></p><p><strong>ಬೆಂಗಳೂರು ಜುಲೈ 2</strong>– ಹಿಂದುಳಿದವರು ತಮ್ಮ ಗೊತ್ತು ಗುರಿಗಳ ವಿಚಾರದಲ್ಲಿ ಸೂಕ್ತ ತಿಳಿವಳಿಕೆ ಹೊಂದಿ ಒಗ್ಗಟ್ಟಿನಿಂದ ದುಡಿದರೆ ಮಾತ್ರ ಅವರ ಉದ್ಧಾರ ತ್ವರಿತವಾಗಿ ಆಗುವುದು ಎಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ಇಲ್ಲಿ ಹೇಳಿದರು.</p><p>ನಗರಭವನದಲ್ಲಿ ಕೆ.ಪಿ.ಸಿ.ಸಿ. ಹಿಂದುಳಿದ ಜನಾಂಗಗಳ ವಿಭಾಗವನ್ನು ಉದ್ಘಾಟಿಸಿದ ಅವರು ನಿರ್ಲಕ್ಷಿಸಲ್ಪಟ್ಟಿದ್ದ ನಾನಾ ವರ್ಗಗಳ ಹಿತ ಸಾಧನೆಗೆ ರಚಿಸಲ್ಪಟ್ಟಿರುವ ನಾನಾ ಅಂಗಸಂಸ್ಥೆಗಳು ಮಾತೃ ಸಂಸ್ಥೆಯ ಕಾರ್ಯಕ್ರಮಕ್ಕೆ ಅನುಗುಣವಾಗಿ ನಡೆಯಬೇಕೆಂದೂ ಇಲ್ಲದಿದ್ದರೆ ಅನಾರೋಗ್ಯಕರ ಬೆಳವಣಿಗೆಯಿಂದ ಅವುಗಳ ಕರ್ತವ್ಯಪಾಲನೆಗೆ ತೊಡಕಾಗುವುದೆಂದೂ ಎಚ್ಚರಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನೂನು ಕಾಗದದ ಮೇಲೆ ಮಾತ್ರ: ಒಡೆಯರಿಂದ ಒಕ್ಕಲುಗಳ ಬೇಟೆ</strong></p><p><strong>ಬೆಂಗಳೂರು, ಜುಲೈ 2–</strong> ಗೇಣಿದಾರ ಬೆಳೆದ ಬೆಳೆ, ಜಮೀನ್ದಾರರಿಂದ ಕಟಾವು. ಗೇಣಿದಾರರನ್ನು ಹತ್ತಿರದ ಕಾಡಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಅವನಿಗೆ ಹೊಡೆತ.</p><p>–ರಾಜ್ಯದಲ್ಲಿ ಭೂಸುಧಾರಣೆ ತಿದ್ದುಪಡಿ ಶಾಸನ ಜಾರಿಗೆ ಬರಲು ಆರಂಭವಾಗುತ್ತಿದ್ದಂತೆ, ಸರ್ಕಾರಕ್ಕೆ ಪ್ರತಿದಿನ ಬರುತ್ತಿರುವ ಹತ್ತಾರು ಬಗೆಯ ದೂರುಗಳಲ್ಲಿ ಇದೊಂದು. ಇದು ಕಾರ್ಕಳ ತಾಲ್ಲೂಕಿನಿಂದ ಬಂದ ದೂರು.</p><p>ತಂತಿ ಹಾಗೂ ಪತ್ರಗಳ ಮೂಲಕ ಬರುವ ದೂರುಗಳನ್ನು ಕಂದಾಯ ಸಚಿವ ಶ್ರೀ ಎನ್. ಹುಚ್ಚಮಾಸ್ತಿಗೌಡ ಅವರು ತತ್ಕ್ಷಣ ಅವುಗಳನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸುತ್ತಿದ್ದಾರೆ. ದೂರುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡುತ್ತಿದ್ದಾರೆ.</p><p>***</p><p><strong>ಸ್ಪಷ್ಟಗುರಿಗಾಗಿ ಒಗ್ಗಟ್ಟಿನ ದುಡಿಮೆ ಏಳಿಗೆಗೆ ಹಾದಿ: ಹಿಂದುಳಿದವರಿಗೆ ಅರಸು ಕರೆ</strong></p><p><strong>ಬೆಂಗಳೂರು ಜುಲೈ 2</strong>– ಹಿಂದುಳಿದವರು ತಮ್ಮ ಗೊತ್ತು ಗುರಿಗಳ ವಿಚಾರದಲ್ಲಿ ಸೂಕ್ತ ತಿಳಿವಳಿಕೆ ಹೊಂದಿ ಒಗ್ಗಟ್ಟಿನಿಂದ ದುಡಿದರೆ ಮಾತ್ರ ಅವರ ಉದ್ಧಾರ ತ್ವರಿತವಾಗಿ ಆಗುವುದು ಎಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ಇಲ್ಲಿ ಹೇಳಿದರು.</p><p>ನಗರಭವನದಲ್ಲಿ ಕೆ.ಪಿ.ಸಿ.ಸಿ. ಹಿಂದುಳಿದ ಜನಾಂಗಗಳ ವಿಭಾಗವನ್ನು ಉದ್ಘಾಟಿಸಿದ ಅವರು ನಿರ್ಲಕ್ಷಿಸಲ್ಪಟ್ಟಿದ್ದ ನಾನಾ ವರ್ಗಗಳ ಹಿತ ಸಾಧನೆಗೆ ರಚಿಸಲ್ಪಟ್ಟಿರುವ ನಾನಾ ಅಂಗಸಂಸ್ಥೆಗಳು ಮಾತೃ ಸಂಸ್ಥೆಯ ಕಾರ್ಯಕ್ರಮಕ್ಕೆ ಅನುಗುಣವಾಗಿ ನಡೆಯಬೇಕೆಂದೂ ಇಲ್ಲದಿದ್ದರೆ ಅನಾರೋಗ್ಯಕರ ಬೆಳವಣಿಗೆಯಿಂದ ಅವುಗಳ ಕರ್ತವ್ಯಪಾಲನೆಗೆ ತೊಡಕಾಗುವುದೆಂದೂ ಎಚ್ಚರಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>