<p><strong>ಅಕ್ಕಿ ಕೊಡಿ, ಇಲ್ಲವೇ ದಂಗೆ</strong></p><p><strong>ವೆಲ್ಲೂರು, ಮೇ 23–</strong> ಅಕ್ಕಿಗಾಗಿ ರಾಜ್ಯವು ಸಲ್ಲಿಸಿರುವ ಬೇಡಿಕೆಯನ್ನು ಪೂರೈಸಲು ಕೇಂದ್ರ ಸರ್ಕಾರ ವಿಫಲವಾದರೆ ಕೇಂದ್ರದ ವಿರುದ್ಧ, ಹಿಂದೆಂದೂ ಕಾಣದಂಥ ಅಭಾವಪೀಡಿತ ಪರಿಸ್ಥಿತಿಗೊಳಗಾಗಿರುವ ತಮಿಳುನಾಡಿನ ಜನತೆ ‘ಬಂಡಾಯ’ ಏಳುವರೆಂದು ಮುಖ್ಯಮಂತ್ರಿ ಕರುಣಾನಿಧಿಯವರು ಇಲ್ಲಿ ಇಂದು ಹೇಳಿದರು.</p><p>ಅಭಾವ ಪರಿಹಾರ ಕಾಮಗಾರಿ ಸಂಬಂಧದಲ್ಲಿ ತಮಿಳುನಾಡಿನ ಬಗೆಗೆ ಕೇಂದ್ರ ‘ತಾರತಮ್ಯದ ಧೋರಣೆ’ ಅನುಸರಿಸುತ್ತಿದೆ ಎಂದು ಅವರು ಆಪಾದಿಸಿದರು.</p><p>***</p><p><strong>‘ಕುರಿ’ ದಕ್ಷಿಣೆ</strong></p><p><strong>ಸುಂದರ್ನಗರ್ (ಹಿಮಾಚಲ ಪ್ರದೇಶ), ಮೇ 23</strong>– ಮದುವೆ ಗಂಡು ವರದಕ್ಷಿಣೆಯಾಗಿ ಬಯಸಿದ್ದು ಸ್ಕೂಟರ್. ಆದರೆ ದೊರೆತಿದ್ದು ಒಂದು ಕುರಿ ಜತೆಗೆ ನಿಶ್ಚಯಿಸಿದ್ದ ಹೆಣ್ಣೂ ಕೈತಪ್ಪಿಹೋಗಿ ಬಡ ಹುಡುಗಿಯೊಬ್ಬಳಿಗೆ ತಾಳಿ ಕಟ್ಟಬೇಕಾಯಿತು.</p><p>ಇಲ್ಲಿಗೆ 30 ಕಿ.ಮೀ. ದೂರದ ಗ್ರಾಮದಲ್ಲಿ ಈ ಘಟನೆ ನಡೆದದ್ದು. ಹಸೆಮಣೆ ಏರುವ ಮುನ್ನ ಬೀಗರನ್ನು ಮದುಮಗ ಸ್ಕೂಟರ್ ಕೇಳಿದ್ದ. ಇದರಿಂದ ಮದುಮಗಳಿಗೆ ಸಿಟ್ಟು, ಬೇಸರ. ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿ ವಾಪಸು ಹೋಗಲು ಗಂಡಿನವರಿಗೆ ಸೂಚಿಸಿದಳು.</p><p>ದಿಗ್ಭ್ರಮೆಗೊಂಡ ಗಂಡಿನ ಕಡೆಯವರು ಕ್ಷಮೆ ಕೇಳಿದರು. ಆದರೆ ಹೆಣ್ಣಿನ ಮನಸ್ಸು ಕರಗಲಿಲ್ಲ. ಈ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಗಂಡಿನವರ ನೆರವಿಗೆ ಬಂದರು. ಬೇರೆ ಬಡ ಹುಡುಗಿಯೊಬ್ಬಳನ್ನು ತಂದು ಹೇಗೋ ಮದುವೆ ಮುಗಿಸಿದರು. ಜತೆಗೆ ವರದಕ್ಷಿಣೆಯಾಗಿ ಒಂದು ಕುರಿಯನ್ನೂ ಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಕ್ಕಿ ಕೊಡಿ, ಇಲ್ಲವೇ ದಂಗೆ</strong></p><p><strong>ವೆಲ್ಲೂರು, ಮೇ 23–</strong> ಅಕ್ಕಿಗಾಗಿ ರಾಜ್ಯವು ಸಲ್ಲಿಸಿರುವ ಬೇಡಿಕೆಯನ್ನು ಪೂರೈಸಲು ಕೇಂದ್ರ ಸರ್ಕಾರ ವಿಫಲವಾದರೆ ಕೇಂದ್ರದ ವಿರುದ್ಧ, ಹಿಂದೆಂದೂ ಕಾಣದಂಥ ಅಭಾವಪೀಡಿತ ಪರಿಸ್ಥಿತಿಗೊಳಗಾಗಿರುವ ತಮಿಳುನಾಡಿನ ಜನತೆ ‘ಬಂಡಾಯ’ ಏಳುವರೆಂದು ಮುಖ್ಯಮಂತ್ರಿ ಕರುಣಾನಿಧಿಯವರು ಇಲ್ಲಿ ಇಂದು ಹೇಳಿದರು.</p><p>ಅಭಾವ ಪರಿಹಾರ ಕಾಮಗಾರಿ ಸಂಬಂಧದಲ್ಲಿ ತಮಿಳುನಾಡಿನ ಬಗೆಗೆ ಕೇಂದ್ರ ‘ತಾರತಮ್ಯದ ಧೋರಣೆ’ ಅನುಸರಿಸುತ್ತಿದೆ ಎಂದು ಅವರು ಆಪಾದಿಸಿದರು.</p><p>***</p><p><strong>‘ಕುರಿ’ ದಕ್ಷಿಣೆ</strong></p><p><strong>ಸುಂದರ್ನಗರ್ (ಹಿಮಾಚಲ ಪ್ರದೇಶ), ಮೇ 23</strong>– ಮದುವೆ ಗಂಡು ವರದಕ್ಷಿಣೆಯಾಗಿ ಬಯಸಿದ್ದು ಸ್ಕೂಟರ್. ಆದರೆ ದೊರೆತಿದ್ದು ಒಂದು ಕುರಿ ಜತೆಗೆ ನಿಶ್ಚಯಿಸಿದ್ದ ಹೆಣ್ಣೂ ಕೈತಪ್ಪಿಹೋಗಿ ಬಡ ಹುಡುಗಿಯೊಬ್ಬಳಿಗೆ ತಾಳಿ ಕಟ್ಟಬೇಕಾಯಿತು.</p><p>ಇಲ್ಲಿಗೆ 30 ಕಿ.ಮೀ. ದೂರದ ಗ್ರಾಮದಲ್ಲಿ ಈ ಘಟನೆ ನಡೆದದ್ದು. ಹಸೆಮಣೆ ಏರುವ ಮುನ್ನ ಬೀಗರನ್ನು ಮದುಮಗ ಸ್ಕೂಟರ್ ಕೇಳಿದ್ದ. ಇದರಿಂದ ಮದುಮಗಳಿಗೆ ಸಿಟ್ಟು, ಬೇಸರ. ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿ ವಾಪಸು ಹೋಗಲು ಗಂಡಿನವರಿಗೆ ಸೂಚಿಸಿದಳು.</p><p>ದಿಗ್ಭ್ರಮೆಗೊಂಡ ಗಂಡಿನ ಕಡೆಯವರು ಕ್ಷಮೆ ಕೇಳಿದರು. ಆದರೆ ಹೆಣ್ಣಿನ ಮನಸ್ಸು ಕರಗಲಿಲ್ಲ. ಈ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಗಂಡಿನವರ ನೆರವಿಗೆ ಬಂದರು. ಬೇರೆ ಬಡ ಹುಡುಗಿಯೊಬ್ಬಳನ್ನು ತಂದು ಹೇಗೋ ಮದುವೆ ಮುಗಿಸಿದರು. ಜತೆಗೆ ವರದಕ್ಷಿಣೆಯಾಗಿ ಒಂದು ಕುರಿಯನ್ನೂ ಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>