ಬೆಂಗಳೂರು, ಮಾರ್ಚ್ 5– ರಾಜ್ಯಾಂಗದತ್ತ ರಕ್ಷಣೆ ಹೊಂದಿರುವ ನಿಮ್ನ ವರ್ಗ ಮತ್ತು ಗುಡ್ಡಗಾಡಿನ ಜನರನ್ನು ಬಿಟ್ಟು ಮೈಸೂರು ರಾಜ್ಯದಲ್ಲಿ ಇತರ ಹಿಂದುಳಿದ ಮತ್ತು
ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ವರದಿ ಮಾಡಲು ಆಂಧ್ರಪ್ರದೇಶದಂತೆ ಆಯೋಗವೊಂದನ್ನು ರಚಿಸಬೇಕೆಂದು ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಸಂಘ ರಾಜ್ಯ ಸರ್ಕಾರವನ್ನು ಕೇಳಿದೆ.