ಹೊಸಪೇಟೆ ಉಕ್ಕು ಕಾರ್ಖಾನೆ: ಶೀಘ್ರದಲ್ಲೇ ನಿವೇಶನ ನಿರ್ಧಾರ
ಬೆಂಗಳೂರು, ನ. 24– ಹೊಸಪೇಟೆ ಉಕ್ಕಿನ ಕಾರ್ಖಾನೆ ನಿವೇಶನದ ಅಧ್ಯಯನಕ್ಕೆ ಬಂದಿದ್ದ ತಜ್ಞರ ತಂಡವನ್ನು ತುರ್ತು ಸಮಾ ಲೋಚನೆಗೆಂದು ಕೇಂದ್ರ ಸರ್ಕಾರ ದೆಹಲಿಗೆ ಕರೆಸಿಕೊಂಡಿರುವುದನ್ನು ಗಮನಿಸಿದರೆ, ನಿವೇಶನದ ಬಗ್ಗೆ ಕೇಂದ್ರದ ನಿರ್ಧಾರ ಸದ್ಯದಲ್ಲಿಯೇ ಪ್ರಕಟವಾಗುವಂತಿದೆ ಎಂದು ಇಲ್ಲಿನ ಕೆಲವು ವಲಯಗಳಲ್ಲಿ ಭಾವಿಸಲಾಗಿದೆ.