<p><strong>ಕೇಂದ್ರದ ನೆರವಿಲ್ಲದಿದ್ದರೂ ಕೃಷ್ಣಾ ಯೋಜನೆ ಪೂರೈಕೆ: ಮುಖ್ಯಮಂತ್ರಿ ಘೋಷಣೆ<br />ಬಾಗಲಕೋಟೆ, ನ. 24–</strong> ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್ ನೆರವು ನೀಡಲಿ ಅಥವಾ ನೀಡದಿರಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರೈಸಲು ರಾಜ್ಯ ಸರ್ಕಾರ ನಿರ್ಧರಿಸಿದೆಯೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನಿನ್ನೆ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದರು.</p>.<p>ಕಾವೇರಿ ನೀರು ಮತ್ತು ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲವೆಂದು ಹೇಳಿದ ಮುಖ್ಯಮಂತ್ರಿಗಳು, ಮಹಾಜನ್ ವರದಿ ಕಾರ್ಯಗತವಾಗಬೇಕೆಂಬ ರಾಜ್ಯದ ನಿಲುವನ್ನು ಪುನರ್ ಪ್ರತಿಪಾದಿಸಿದರು.</p>.<p><strong>ಹೊಸಪೇಟೆ ಉಕ್ಕು ಕಾರ್ಖಾನೆ: ಶೀಘ್ರದಲ್ಲೇ ನಿವೇಶನ ನಿರ್ಧಾರ<br />ಬೆಂಗಳೂರು, ನ. 24– </strong>ಹೊಸಪೇಟೆ ಉಕ್ಕಿನ ಕಾರ್ಖಾನೆ ನಿವೇಶನದ ಅಧ್ಯಯನಕ್ಕೆ ಬಂದಿದ್ದ ತಜ್ಞರ ತಂಡವನ್ನು ತುರ್ತು ಸಮಾ ಲೋಚನೆಗೆಂದು ಕೇಂದ್ರ ಸರ್ಕಾರ ದೆಹಲಿಗೆ ಕರೆಸಿಕೊಂಡಿರುವುದನ್ನು ಗಮನಿಸಿದರೆ, ನಿವೇಶನದ ಬಗ್ಗೆ ಕೇಂದ್ರದ ನಿರ್ಧಾರ ಸದ್ಯದಲ್ಲಿಯೇ ಪ್ರಕಟವಾಗುವಂತಿದೆ ಎಂದು ಇಲ್ಲಿನ ಕೆಲವು ವಲಯಗಳಲ್ಲಿ ಭಾವಿಸಲಾಗಿದೆ.</p>.<p>ಕೇಂದ್ರ ಉಕ್ಕು ಇಲಾಖೆಯ ತಜ್ಞರು ನ. 22ರಂದು ಬೆಂಗಳೂರಿಗೆ ಬಂದು ಕೆಲವು ವಿಷಯಗಳ ಬಗ್ಗೆ ಸ್ಪಷ್ಟೀಕರಣ ಪಡೆದು, ಹೈದರಾಬಾದ್ ಮಾರ್ಗವಾಗಿ ಇಂದು ದೆಹಲಿಗೆ ತೆರಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೇಂದ್ರದ ನೆರವಿಲ್ಲದಿದ್ದರೂ ಕೃಷ್ಣಾ ಯೋಜನೆ ಪೂರೈಕೆ: ಮುಖ್ಯಮಂತ್ರಿ ಘೋಷಣೆ<br />ಬಾಗಲಕೋಟೆ, ನ. 24–</strong> ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್ ನೆರವು ನೀಡಲಿ ಅಥವಾ ನೀಡದಿರಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರೈಸಲು ರಾಜ್ಯ ಸರ್ಕಾರ ನಿರ್ಧರಿಸಿದೆಯೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನಿನ್ನೆ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದರು.</p>.<p>ಕಾವೇರಿ ನೀರು ಮತ್ತು ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲವೆಂದು ಹೇಳಿದ ಮುಖ್ಯಮಂತ್ರಿಗಳು, ಮಹಾಜನ್ ವರದಿ ಕಾರ್ಯಗತವಾಗಬೇಕೆಂಬ ರಾಜ್ಯದ ನಿಲುವನ್ನು ಪುನರ್ ಪ್ರತಿಪಾದಿಸಿದರು.</p>.<p><strong>ಹೊಸಪೇಟೆ ಉಕ್ಕು ಕಾರ್ಖಾನೆ: ಶೀಘ್ರದಲ್ಲೇ ನಿವೇಶನ ನಿರ್ಧಾರ<br />ಬೆಂಗಳೂರು, ನ. 24– </strong>ಹೊಸಪೇಟೆ ಉಕ್ಕಿನ ಕಾರ್ಖಾನೆ ನಿವೇಶನದ ಅಧ್ಯಯನಕ್ಕೆ ಬಂದಿದ್ದ ತಜ್ಞರ ತಂಡವನ್ನು ತುರ್ತು ಸಮಾ ಲೋಚನೆಗೆಂದು ಕೇಂದ್ರ ಸರ್ಕಾರ ದೆಹಲಿಗೆ ಕರೆಸಿಕೊಂಡಿರುವುದನ್ನು ಗಮನಿಸಿದರೆ, ನಿವೇಶನದ ಬಗ್ಗೆ ಕೇಂದ್ರದ ನಿರ್ಧಾರ ಸದ್ಯದಲ್ಲಿಯೇ ಪ್ರಕಟವಾಗುವಂತಿದೆ ಎಂದು ಇಲ್ಲಿನ ಕೆಲವು ವಲಯಗಳಲ್ಲಿ ಭಾವಿಸಲಾಗಿದೆ.</p>.<p>ಕೇಂದ್ರ ಉಕ್ಕು ಇಲಾಖೆಯ ತಜ್ಞರು ನ. 22ರಂದು ಬೆಂಗಳೂರಿಗೆ ಬಂದು ಕೆಲವು ವಿಷಯಗಳ ಬಗ್ಗೆ ಸ್ಪಷ್ಟೀಕರಣ ಪಡೆದು, ಹೈದರಾಬಾದ್ ಮಾರ್ಗವಾಗಿ ಇಂದು ದೆಹಲಿಗೆ ತೆರಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>