<p><strong>ಬಾಂಗ್ಲಾದೇಶದ ಜನತಾ ವಿಪ್ಲವಕ್ಕೆ ಸಂಸತ್ತಿನ ಸಂಪೂರ್ಣ ಸಮರ್ಥನೆ</strong></p>.<p>ನವದೆಹಲಿ, ಮಾರ್ಚ್ 31– ಪೂರ್ವ ಬಂಗಾಲದ ಜನತೆ ಜನತಂತ್ರಾತ್ಮಕ ಜೀವನ ವಿಧಾನಕ್ಕಾಗಿ ಕೈಗೊಂಡಿರುವ ಹೋರಾಟಕ್ಕೆ ಭಾರತದ ಸಂಸತ್ ಗಾಢ ಸಹಾನುಭೂತಿ ಯನ್ನೂ ಪೂರ್ಣ ಸಮರ್ಥನೆಯನ್ನೂ ಇಂದು ಘೋಷಿಸಿತು. ಬಲ ಪ್ರಯೋಗವನ್ನು ಕೂಡಲೇ ನಿಲ್ಲಿಸಬೇಕೆಂದೂ ನಿಶ್ಶಸ್ತ್ರ ಜನತೆಯ ನರಮೇಧ ಕೊನೆ ಗಾಣಬೇಕೆಂದೂ ಕೇಳಿತು.</p>.<p>ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಜಯಘೋಷಗಳ ನಡುವೆ ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯ, ‘ಜನರ ಆಸೆ ಆಕಾಂಕ್ಷೆಗಳನ್ನು ತುಳಿಯುವ ಉದ್ದೇಶದಿಂದ ಪೂರ್ವ ಬಂಗಾಳದ ಇಡೀ ಜನತೆಯ ವಿರುದ್ಧ ಪಶ್ಚಿಮ ಪಾಕಿಸ್ತಾನದಿಂದ ರವಾನಿಸಿರುವ ಸಶಸ್ತ್ರ ಪಡೆಗಳ ಸಾಮೂಹಿಕ ದಾಳಿ’ಯನ್ನು ಗಮನಕ್ಕೆ ತಂದುಕೊಂಡಿದೆ.</p>.<p>‘ನಿಮ್ಮ ಹೋರಾಟ ಮತ್ತು ತ್ಯಾಗಗಳಿಗೆ ಭಾರತದ ಜನತೆಯ ಹೃತ್ಪೂರ್ವಕ ಸಹಾನುಭೂತಿ ಮತ್ತು ಬೆಂಬಲ ದೊರಕುವುದು’ ಎಂದು ನಿರ್ಣಯವು ಪೂರ್ವ ಬಂಗಾಳದ ಏಳೂವರೆ ಕೋಟಿ ಜನರಿಗೆ ಭರವಸೆ ಕೊಟ್ಟಿದೆ.</p>.<p><strong>ನಗರ–ದೆಹಲಿಯ ನಡುವೆ ಹೆಚ್ಚು ನೇರ ಡಬ್ಬಿಗಳ ಓಡಾಟ</strong></p>.<p>ಬೆಂಗಳೂರು, ಮಾರ್ಚ್ 31– ಏಪ್ರಿಲ್ 1ರಿಂದ ಬೆಂಗಳೂರು–ದೆಹಲಿ ನಡುವೆ ನೇರವಾಗಿ ಹೋಗಿ ಬರುವ ಸೌಲಭ್ಯವನ್ನು ದಕ್ಷಿಣ ರೈಲ್ವೆ ಹೆಚ್ಚಿಸಿದೆ.</p>.<p>ಅಂದಿನಿಂದ ಈ ಮಾರ್ಗದಲ್ಲಿ ಒಂದು ಪೂರ್ಣ ಪ್ರಥಮ ದರ್ಜೆ ಡಬ್ಬಿ (22 ಸೀಟು) ಹಾಗೂ ಒಂದು ಪೂರ್ಣ ಮಲಗುವ ಹಾಗೂ ಕೂರುವ ಸೌಕರ್ಯ ಉಳ್ಳ 3ನೇ ತರಗತಿಯ ಡಬ್ಬಿ (40 ಸೀಟು) ನೇರವಾಗಿ ಸಂಚಾರ ಮಾಡುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಂಗ್ಲಾದೇಶದ ಜನತಾ ವಿಪ್ಲವಕ್ಕೆ ಸಂಸತ್ತಿನ ಸಂಪೂರ್ಣ ಸಮರ್ಥನೆ</strong></p>.<p>ನವದೆಹಲಿ, ಮಾರ್ಚ್ 31– ಪೂರ್ವ ಬಂಗಾಲದ ಜನತೆ ಜನತಂತ್ರಾತ್ಮಕ ಜೀವನ ವಿಧಾನಕ್ಕಾಗಿ ಕೈಗೊಂಡಿರುವ ಹೋರಾಟಕ್ಕೆ ಭಾರತದ ಸಂಸತ್ ಗಾಢ ಸಹಾನುಭೂತಿ ಯನ್ನೂ ಪೂರ್ಣ ಸಮರ್ಥನೆಯನ್ನೂ ಇಂದು ಘೋಷಿಸಿತು. ಬಲ ಪ್ರಯೋಗವನ್ನು ಕೂಡಲೇ ನಿಲ್ಲಿಸಬೇಕೆಂದೂ ನಿಶ್ಶಸ್ತ್ರ ಜನತೆಯ ನರಮೇಧ ಕೊನೆ ಗಾಣಬೇಕೆಂದೂ ಕೇಳಿತು.</p>.<p>ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಜಯಘೋಷಗಳ ನಡುವೆ ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯ, ‘ಜನರ ಆಸೆ ಆಕಾಂಕ್ಷೆಗಳನ್ನು ತುಳಿಯುವ ಉದ್ದೇಶದಿಂದ ಪೂರ್ವ ಬಂಗಾಳದ ಇಡೀ ಜನತೆಯ ವಿರುದ್ಧ ಪಶ್ಚಿಮ ಪಾಕಿಸ್ತಾನದಿಂದ ರವಾನಿಸಿರುವ ಸಶಸ್ತ್ರ ಪಡೆಗಳ ಸಾಮೂಹಿಕ ದಾಳಿ’ಯನ್ನು ಗಮನಕ್ಕೆ ತಂದುಕೊಂಡಿದೆ.</p>.<p>‘ನಿಮ್ಮ ಹೋರಾಟ ಮತ್ತು ತ್ಯಾಗಗಳಿಗೆ ಭಾರತದ ಜನತೆಯ ಹೃತ್ಪೂರ್ವಕ ಸಹಾನುಭೂತಿ ಮತ್ತು ಬೆಂಬಲ ದೊರಕುವುದು’ ಎಂದು ನಿರ್ಣಯವು ಪೂರ್ವ ಬಂಗಾಳದ ಏಳೂವರೆ ಕೋಟಿ ಜನರಿಗೆ ಭರವಸೆ ಕೊಟ್ಟಿದೆ.</p>.<p><strong>ನಗರ–ದೆಹಲಿಯ ನಡುವೆ ಹೆಚ್ಚು ನೇರ ಡಬ್ಬಿಗಳ ಓಡಾಟ</strong></p>.<p>ಬೆಂಗಳೂರು, ಮಾರ್ಚ್ 31– ಏಪ್ರಿಲ್ 1ರಿಂದ ಬೆಂಗಳೂರು–ದೆಹಲಿ ನಡುವೆ ನೇರವಾಗಿ ಹೋಗಿ ಬರುವ ಸೌಲಭ್ಯವನ್ನು ದಕ್ಷಿಣ ರೈಲ್ವೆ ಹೆಚ್ಚಿಸಿದೆ.</p>.<p>ಅಂದಿನಿಂದ ಈ ಮಾರ್ಗದಲ್ಲಿ ಒಂದು ಪೂರ್ಣ ಪ್ರಥಮ ದರ್ಜೆ ಡಬ್ಬಿ (22 ಸೀಟು) ಹಾಗೂ ಒಂದು ಪೂರ್ಣ ಮಲಗುವ ಹಾಗೂ ಕೂರುವ ಸೌಕರ್ಯ ಉಳ್ಳ 3ನೇ ತರಗತಿಯ ಡಬ್ಬಿ (40 ಸೀಟು) ನೇರವಾಗಿ ಸಂಚಾರ ಮಾಡುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>