ನವದೆಹಲಿ, ಜೂನ್ 2– ಮೈಸೂರಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ಮೇಲೆ ರಾಜ್ಯಪಾಲ ಶ್ರೀ ಧರ್ಮವೀರ ಅವರು ರಾಜ್ಯದ ಜನತೆಯ ಹಿತಗಳ ವಿರುದ್ಧ ‘ಏಕಪಕ್ಷೀಯವಾಗಿ ಹಾಗೂ ಸರ್ವಾಧಿಕಾರಿ ಯಂತೆ’ ಕಾರ್ಯ ನಿರ್ವಹಿಸುತ್ತಿದ್ದಾರೆಂದು ದೂರುವ ಮನವಿ ಪತ್ರವೊಂದನ್ನು ಮೈಸೂರಿನ ಸಂಸತ್ ಸದಸ್ಯರು ಇಂದು ಪ್ರಧಾನ ಮಂತ್ರಿಗೆ ಸಲ್ಲಿಸಿದರು.