<p><strong>ಭದ್ರತಾ ಶಾಸನದ ಮಸೂದೆಗೆ ಲೋಕಸಭೆ ಅಸ್ತು</strong></p>.<p><strong>ನವದೆಹಲಿ, ಜೂನ್ 18– </strong>‘ನಾಚಿಕೆಗೇಡು!’ ‘ಫ್ಯಾಸಿಸ್ಟ್ ಮುರ್ದಾಬಾದ್’ ಎಂದು ಹೇಳುತ್ತಾ ವಿರೋಧ ಪಕ್ಷಗಳು ಸಭಾತ್ಯಾಗ ಮಾಡುತ್ತಿದ್ದಂತೆಯೇ ಲೋಕಸಭೆಯು ಇಂದು 1971ರ ಆಂತರಿಕ ಭದ್ರತಾ ಮಸೂದೆಗೆ ಒಪ್ಪಿಗೆ ನೀಡಿತು.</p>.<p>ಆಂತರಿಕ ಭದ್ರತಾ ಮಸೂದೆಯನ್ನು ವಿರೋಧಿಸಿ ಎಲ್ಲ ವಿರೋಧಪಕ್ಷಗಳ ಸದಸ್ಯರೂ ಸಭಾತ್ಯಾಗ ಮಾಡಿದರು.</p>.<p>ಸ್ಪೀಕರ್ ಮಸೂದೆಯನ್ನು ಮತಕ್ಕೆ ಹಾಕಿದಾಗ ಜನಸಂಘದ ಸದಸ್ಯರು ‘ಇಂದಿರಾ ಷಾಹಿ ಮುರ್ದಾಬಾದ್’ ಎಂದು ಕಮ್ಯುನಿಸ್ಟ್ ಸದಸ್ಯರು ‘ಫ್ಯಾಸಿಸ್ಟ್ ಮುರ್ದಾಬಾದ್’ ಎಂದೂ ಕೂಗುತ್ತಾ ಸಭೆಯಿಂದ ಹೊರಬಂದರು.</p>.<p>ಕಾರ್ಮಿಕರು ಅಥವಾ ರೈತ ಚಳವಳಿ ವಿರುದ್ಧ ಈ ಶಾಸನವನ್ನು ಬಳಸಲಾಗುವುದಿಲ್ಲವೆಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ಕೆ.ಸಿ. ಪಂತ್ ಭರವಸೆ ನೀಡಿದಾಗ್ಯೂ, ಈ ವಿಧೇಯಕದ ಬಗ್ಗೆ ಸಂಸ್ಥಾ ಕಾಂಗ್ರೆಸ್ ಸದಸ್ಯರು ಹೊರತು ಉಳಿದೆಲ್ಲ ವಿರೋಧಪಕ್ಷದ ಸದಸ್ಯರು ಅಸಮ್ಮತಿ ವ್ಯಕ್ತಪಡಿಸಿದರು.</p>.<p><strong>ಕಳ್ಳರ ಕೈಗೆ ಸಿಕ್ಕಿದ ವಿಷ್ಣು ವಿದೇಶಕ್ಕೆ</strong></p>.<p><strong>ನವದೆಹಲಿ, ಜೂನ್ 18– </strong>ಕಳವು ಮಾಡಿದ ಐದು ಅಡಿ ಎತ್ತರದ ವಿಷ್ಣು ದೇವರ ವಿಗ್ರಹವನ್ನು ಸರಕು ಕೊಂಡುಕೊಳ್ಳುವ ಅಮೆರಿಕನ್ನೊಬ್ಬರಿಗೆ 50 ಲಕ್ಷ ರೂ.ಗಳಿಗೆ ಮಾರಾಟ ಮಾಡಿದುದಕ್ಕೆ ಸಂಬಂಧಿಸದಂತೆ ಇಲ್ಲಿನ ಮೂರು ಮಂದಿ ಪ್ರಾಚೀನ ಕಲಾವಸ್ತುಗಳ ಮಾರಾಟಗಾರರನ್ನು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರತಾ ಶಾಸನದ ಮಸೂದೆಗೆ ಲೋಕಸಭೆ ಅಸ್ತು</strong></p>.<p><strong>ನವದೆಹಲಿ, ಜೂನ್ 18– </strong>‘ನಾಚಿಕೆಗೇಡು!’ ‘ಫ್ಯಾಸಿಸ್ಟ್ ಮುರ್ದಾಬಾದ್’ ಎಂದು ಹೇಳುತ್ತಾ ವಿರೋಧ ಪಕ್ಷಗಳು ಸಭಾತ್ಯಾಗ ಮಾಡುತ್ತಿದ್ದಂತೆಯೇ ಲೋಕಸಭೆಯು ಇಂದು 1971ರ ಆಂತರಿಕ ಭದ್ರತಾ ಮಸೂದೆಗೆ ಒಪ್ಪಿಗೆ ನೀಡಿತು.</p>.<p>ಆಂತರಿಕ ಭದ್ರತಾ ಮಸೂದೆಯನ್ನು ವಿರೋಧಿಸಿ ಎಲ್ಲ ವಿರೋಧಪಕ್ಷಗಳ ಸದಸ್ಯರೂ ಸಭಾತ್ಯಾಗ ಮಾಡಿದರು.</p>.<p>ಸ್ಪೀಕರ್ ಮಸೂದೆಯನ್ನು ಮತಕ್ಕೆ ಹಾಕಿದಾಗ ಜನಸಂಘದ ಸದಸ್ಯರು ‘ಇಂದಿರಾ ಷಾಹಿ ಮುರ್ದಾಬಾದ್’ ಎಂದು ಕಮ್ಯುನಿಸ್ಟ್ ಸದಸ್ಯರು ‘ಫ್ಯಾಸಿಸ್ಟ್ ಮುರ್ದಾಬಾದ್’ ಎಂದೂ ಕೂಗುತ್ತಾ ಸಭೆಯಿಂದ ಹೊರಬಂದರು.</p>.<p>ಕಾರ್ಮಿಕರು ಅಥವಾ ರೈತ ಚಳವಳಿ ವಿರುದ್ಧ ಈ ಶಾಸನವನ್ನು ಬಳಸಲಾಗುವುದಿಲ್ಲವೆಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ಕೆ.ಸಿ. ಪಂತ್ ಭರವಸೆ ನೀಡಿದಾಗ್ಯೂ, ಈ ವಿಧೇಯಕದ ಬಗ್ಗೆ ಸಂಸ್ಥಾ ಕಾಂಗ್ರೆಸ್ ಸದಸ್ಯರು ಹೊರತು ಉಳಿದೆಲ್ಲ ವಿರೋಧಪಕ್ಷದ ಸದಸ್ಯರು ಅಸಮ್ಮತಿ ವ್ಯಕ್ತಪಡಿಸಿದರು.</p>.<p><strong>ಕಳ್ಳರ ಕೈಗೆ ಸಿಕ್ಕಿದ ವಿಷ್ಣು ವಿದೇಶಕ್ಕೆ</strong></p>.<p><strong>ನವದೆಹಲಿ, ಜೂನ್ 18– </strong>ಕಳವು ಮಾಡಿದ ಐದು ಅಡಿ ಎತ್ತರದ ವಿಷ್ಣು ದೇವರ ವಿಗ್ರಹವನ್ನು ಸರಕು ಕೊಂಡುಕೊಳ್ಳುವ ಅಮೆರಿಕನ್ನೊಬ್ಬರಿಗೆ 50 ಲಕ್ಷ ರೂ.ಗಳಿಗೆ ಮಾರಾಟ ಮಾಡಿದುದಕ್ಕೆ ಸಂಬಂಧಿಸದಂತೆ ಇಲ್ಲಿನ ಮೂರು ಮಂದಿ ಪ್ರಾಚೀನ ಕಲಾವಸ್ತುಗಳ ಮಾರಾಟಗಾರರನ್ನು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>