<p>ಕಾವೇರಿ ವಿವಾದ: ತಮಿಳುನಾಡು ದಾವಾ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೈಸೂರಿನ ‘ತಡೆಅರ್ಜಿ’ ಸಲ್ಲಿಕೆ</p>.<p>ನವದೆಹಲಿ, ಆ. 6– ಮೈಸೂರು ಸರ್ಕಾರಕ್ಕೆ ಪೂರ್ವಭಾವಿಯಾಗಿ ತಿಳಿವಳಿಕೆ ನೀಡದೆ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದ ತಮಿಳುನಾಡಿನ ದಾವಾ ಬಗೆಗೆ ಮುಂದಿನ ಕ್ರಮ ಕೈಗೊಳ್ಳಬಾರದೆಂದು ಕೋರುವ ‘ತಡೆ ಅರ್ಜಿ’ಯೊಂದನ್ನು ಸುಪ್ರೀಂ ಕೋರ್ಟ್ನಲ್ಲಿ ಇಂದು ಮೈಸೂರು ರಾಜ್ಯ ಸಲ್ಲಿಸಿತು.</p>.<p>ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದದಲ್ಲಿ ತಮಿಳುನಾಡು ಸರ್ಕಾರವು ದಾವಾ ಹೂಡಿದ್ದು, ಹೇಮಾವತಿ ಮತ್ತು ಕಪಿಲಾ ಯೋಜನೆಗಳ ಕಾಮಗಾರಿಯನ್ನು ಮುಂದುವರಿಸಿಕೊಂಡು ಹೋಗದಂತೆ ಮೈಸೂರು ತಾತ್ಕಾಲಿಕ ತಡೆ ನೀಡಬೇಕೆಂದು ಕೋರಿದೆ.</p>.<p>ಮತಚೀಟಿಗಳ ಮೇಲೆ ಅಸಹಜ ಗುರುತು: ತನಿಖೆಗೆ ದೆಹಲಿ ಹೈಕೋರ್ಟ್ನ ನಿರ್ಧಾರ</p>.<p>ನವದೆಹಲಿ, ಆ. 6– ಲೋಕಸಭೆಗೆ ಮಾರ್ಚ್ ತಿಂಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಳಸಲಾದ ಬಹುಸಂಖ್ಯೆಗಳ ಮತಚೀಟಿಗಳು ಯಾವುದೋ ಯಾಂತ್ರಿಕ ಅಥವಾ ರಾಸಾಯನಿಕ ವಿಧಾನಗಳಿಂದ ಮಾಡಿದ ಗುರುತುಗಳನ್ನು ತೋರಿಸುತ್ತವೆ ಎಂಬ ಆಪಾದನೆಯ ಬಗ್ಗೆ ತನಿಖೆ ನಡೆಸಲು ದೆಹಲಿ ಹೈಕೋರ್ಟ್ ಇಂದು ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾವೇರಿ ವಿವಾದ: ತಮಿಳುನಾಡು ದಾವಾ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೈಸೂರಿನ ‘ತಡೆಅರ್ಜಿ’ ಸಲ್ಲಿಕೆ</p>.<p>ನವದೆಹಲಿ, ಆ. 6– ಮೈಸೂರು ಸರ್ಕಾರಕ್ಕೆ ಪೂರ್ವಭಾವಿಯಾಗಿ ತಿಳಿವಳಿಕೆ ನೀಡದೆ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದ ತಮಿಳುನಾಡಿನ ದಾವಾ ಬಗೆಗೆ ಮುಂದಿನ ಕ್ರಮ ಕೈಗೊಳ್ಳಬಾರದೆಂದು ಕೋರುವ ‘ತಡೆ ಅರ್ಜಿ’ಯೊಂದನ್ನು ಸುಪ್ರೀಂ ಕೋರ್ಟ್ನಲ್ಲಿ ಇಂದು ಮೈಸೂರು ರಾಜ್ಯ ಸಲ್ಲಿಸಿತು.</p>.<p>ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದದಲ್ಲಿ ತಮಿಳುನಾಡು ಸರ್ಕಾರವು ದಾವಾ ಹೂಡಿದ್ದು, ಹೇಮಾವತಿ ಮತ್ತು ಕಪಿಲಾ ಯೋಜನೆಗಳ ಕಾಮಗಾರಿಯನ್ನು ಮುಂದುವರಿಸಿಕೊಂಡು ಹೋಗದಂತೆ ಮೈಸೂರು ತಾತ್ಕಾಲಿಕ ತಡೆ ನೀಡಬೇಕೆಂದು ಕೋರಿದೆ.</p>.<p>ಮತಚೀಟಿಗಳ ಮೇಲೆ ಅಸಹಜ ಗುರುತು: ತನಿಖೆಗೆ ದೆಹಲಿ ಹೈಕೋರ್ಟ್ನ ನಿರ್ಧಾರ</p>.<p>ನವದೆಹಲಿ, ಆ. 6– ಲೋಕಸಭೆಗೆ ಮಾರ್ಚ್ ತಿಂಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಳಸಲಾದ ಬಹುಸಂಖ್ಯೆಗಳ ಮತಚೀಟಿಗಳು ಯಾವುದೋ ಯಾಂತ್ರಿಕ ಅಥವಾ ರಾಸಾಯನಿಕ ವಿಧಾನಗಳಿಂದ ಮಾಡಿದ ಗುರುತುಗಳನ್ನು ತೋರಿಸುತ್ತವೆ ಎಂಬ ಆಪಾದನೆಯ ಬಗ್ಗೆ ತನಿಖೆ ನಡೆಸಲು ದೆಹಲಿ ಹೈಕೋರ್ಟ್ ಇಂದು ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>