<p><strong>ಬೆಂಗಳೂರು, ಸೆ. 8– </strong>ಅಭಾವ ಉಂಟಾಗಿ ರುವ ರಾಜ್ಯದ 66 ತಾಲ್ಲೂಕುಗಳಲ್ಲಿ ದುರ್ಬಲರಿಗೆ ಸೆಪ್ಟೆಂಬರ್ 15ರಿಂದ ಹಾಲು ಮುಂತಾದ ಆಹಾರ ಒದಗಿಸುವ ಕಾರ್ಯಕ್ರಮ ಆರಂಭವಾಗಲಿದೆ.</p>.<p>ಈ ತಾಲ್ಲೂಕುಗಳಲ್ಲಿ ಈ ಕಾರ್ಯವನ್ನು ಕೈಗೊಳ್ಳಲು ಕೇರ್ ಸಂಸ್ಥೆ ಒಪ್ಪಿದ್ದು ಸರ್ಕಾರ 9 ಲಕ್ಷ ರೂಪಾಯಿ ಮಂಜೂರು ಮಾಡಿದೆ.</p>.<p>ಇತ್ತೀಚೆಗೆ ಪ್ರವಾಸ ಮಾಡಿದ ಕಾಲದಲ್ಲಿ ನಿಶ್ಯಕ್ತ ವರ್ಗದ ಜನರಿಗೆ ತುರ್ತು ಆಹಾರ ಒದಗಿಸುವುದು ಅಗತ್ಯವೆಂದು ಅನೇಕರು ತಿಳಿಸಿದ ಕಾರಣ ನಗರಕ್ಕೆ ಹಿಂದಿರುಗಿದ ನಂತರ ರಾಜ್ಯಪಾಲ ಶ್ರೀ ಧರ್ಮವೀರ ಅವರು ಕೇರ್ ಸಂಸ್ಥೆಯೊಡನೆ ಚರ್ಚಿಸಿ ಈ ನಿರ್ಧಾರವನ್ನು ಕೈಗೊಂಡರು.</p>.<p>ರಾಯಚೂರು, ಗುಲ್ಬರ್ಗ, ಬಿದರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಬಳ್ಳಾರಿ,ಕೋಲಾರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಬಿಜಾಪುರ ಹಾಗೂ ಧಾರವಾಡ ಜಿಲ್ಲೆಗಳ 66 ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ಆರಂಭವಾಗುವುದು.</p>.<p><strong>ನಾಗರಿಕರ ಪರದಾಟದ ಬಗ್ಗೆ ಜಲಮಂಡಲಿ ಉದಾಸೀನ</strong></p>.<p><strong>ಬೆಂಗಳೂರು, ಸೆ. 8– </strong>ಬೆಂಗಳೂರಿನ ನಾಗರಿಕರು ಅನೇಕ ಭಾಗಗಳಲ್ಲಿ ನೀರಿಗೆ ಪರದಾಟ, ಚರಂಡಿ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಅನುಭವಿಸುತ್ತಿದ್ದರೆ ಅದನ್ನು ಯೋಚಿಸಿ ಸಮಸ್ಯೆ ಬಗೆಹರಿಸಲು ನಗರಸಭೆಯೊಂದಿಗೆ ಚರ್ಚಿಸುವುದೂ ಜಲಮಂಡಳಿಗೆ ಬೇಕಿಲ್ಲ.</p>.<p>ಮೇಯರ್ ಅವರು ಅದಕ್ಕಾಗಿ ಜಲ ಮಂಡಲಿಯ ಅಧಿಕಾರ ವರ್ಗದವರವನ್ನು ಆಹ್ವಾನಿಸಿ ಇಂದು ವಿಶೇಷ ಸಭೆಯನ್ನು ಕರೆದಿದ್ದರೂ ಮಂಡಲಿಯ ಯಾವೊಬ್ಬ ಪ್ರತಿನಿಧಿಯ ಸುಳಿವಿರಲಿಲ್ಲ. ಸಭೆಗೆ ಬರಲಾಗುವುದಿಲ್ಲವೆಂಬ ಸೌಜನ್ಯದ ಪತ್ರವೂ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು, ಸೆ. 8– </strong>ಅಭಾವ ಉಂಟಾಗಿ ರುವ ರಾಜ್ಯದ 66 ತಾಲ್ಲೂಕುಗಳಲ್ಲಿ ದುರ್ಬಲರಿಗೆ ಸೆಪ್ಟೆಂಬರ್ 15ರಿಂದ ಹಾಲು ಮುಂತಾದ ಆಹಾರ ಒದಗಿಸುವ ಕಾರ್ಯಕ್ರಮ ಆರಂಭವಾಗಲಿದೆ.</p>.<p>ಈ ತಾಲ್ಲೂಕುಗಳಲ್ಲಿ ಈ ಕಾರ್ಯವನ್ನು ಕೈಗೊಳ್ಳಲು ಕೇರ್ ಸಂಸ್ಥೆ ಒಪ್ಪಿದ್ದು ಸರ್ಕಾರ 9 ಲಕ್ಷ ರೂಪಾಯಿ ಮಂಜೂರು ಮಾಡಿದೆ.</p>.<p>ಇತ್ತೀಚೆಗೆ ಪ್ರವಾಸ ಮಾಡಿದ ಕಾಲದಲ್ಲಿ ನಿಶ್ಯಕ್ತ ವರ್ಗದ ಜನರಿಗೆ ತುರ್ತು ಆಹಾರ ಒದಗಿಸುವುದು ಅಗತ್ಯವೆಂದು ಅನೇಕರು ತಿಳಿಸಿದ ಕಾರಣ ನಗರಕ್ಕೆ ಹಿಂದಿರುಗಿದ ನಂತರ ರಾಜ್ಯಪಾಲ ಶ್ರೀ ಧರ್ಮವೀರ ಅವರು ಕೇರ್ ಸಂಸ್ಥೆಯೊಡನೆ ಚರ್ಚಿಸಿ ಈ ನಿರ್ಧಾರವನ್ನು ಕೈಗೊಂಡರು.</p>.<p>ರಾಯಚೂರು, ಗುಲ್ಬರ್ಗ, ಬಿದರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಬಳ್ಳಾರಿ,ಕೋಲಾರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಬಿಜಾಪುರ ಹಾಗೂ ಧಾರವಾಡ ಜಿಲ್ಲೆಗಳ 66 ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ಆರಂಭವಾಗುವುದು.</p>.<p><strong>ನಾಗರಿಕರ ಪರದಾಟದ ಬಗ್ಗೆ ಜಲಮಂಡಲಿ ಉದಾಸೀನ</strong></p>.<p><strong>ಬೆಂಗಳೂರು, ಸೆ. 8– </strong>ಬೆಂಗಳೂರಿನ ನಾಗರಿಕರು ಅನೇಕ ಭಾಗಗಳಲ್ಲಿ ನೀರಿಗೆ ಪರದಾಟ, ಚರಂಡಿ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಅನುಭವಿಸುತ್ತಿದ್ದರೆ ಅದನ್ನು ಯೋಚಿಸಿ ಸಮಸ್ಯೆ ಬಗೆಹರಿಸಲು ನಗರಸಭೆಯೊಂದಿಗೆ ಚರ್ಚಿಸುವುದೂ ಜಲಮಂಡಳಿಗೆ ಬೇಕಿಲ್ಲ.</p>.<p>ಮೇಯರ್ ಅವರು ಅದಕ್ಕಾಗಿ ಜಲ ಮಂಡಲಿಯ ಅಧಿಕಾರ ವರ್ಗದವರವನ್ನು ಆಹ್ವಾನಿಸಿ ಇಂದು ವಿಶೇಷ ಸಭೆಯನ್ನು ಕರೆದಿದ್ದರೂ ಮಂಡಲಿಯ ಯಾವೊಬ್ಬ ಪ್ರತಿನಿಧಿಯ ಸುಳಿವಿರಲಿಲ್ಲ. ಸಭೆಗೆ ಬರಲಾಗುವುದಿಲ್ಲವೆಂಬ ಸೌಜನ್ಯದ ಪತ್ರವೂ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>